ಬಾಲಕೋಟ್ ಉಗ್ರ ನೆಲೆಯಲ್ಲಿದ್ದ 42 ಆತ್ಮಾಹುತಿ ಬಾಂಬರ್ ಗಳ ಪಟ್ಟಿ
ಬಾಲಕೋಟ್, ಫೆಬ್ರವರಿ 27: ಪುಲ್ವಾಮಾ ಘಟನೆಗೆ ಪ್ರತೀಕಾರ ಎಂಬಂತೆ ಭಾರತೀಯ ವಾಯುಸೇನೆ, ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಉಗ್ರ ನೆಲೆಯ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಮೃತರಾಗಿದ್ದಾರೆಂದು ಶಂಕಿಸಲಾದ 300 ಕ್ಕೂ ಹೆಚ್ಚು ಉಗ್ರರಲ್ಲಿ 42 ಆತ್ಮಾಹುತಿ ಬಾಂಬರ್ ಗಳಿದ್ದರದು ಎಂದು ಜೀ ನ್ಯೂಸ್ ವರದಿ ಮಾಡಿದೆ.
ಜೊತೆಗೆ ಆ ಎಲ್ಲಾ ಆತ್ಮಾಹುತಿ ದಾಳಿಕೋರರ ಪಟ್ಟಿಯನ್ನೂ ಅದು ನೀಡಿದೆ. ಫೆಬ್ರವರಿ 26 ರ ಬೆಳಿಗ್ಗೆ ಭಾರತೀಯ ವಾಯುಸೇನೆಯು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೇಲೆ ನಡೆಸಿದ ಬಾಂಬ್ ದಾಳಿಯಿಂದಾಗಿ ಇಡೀ ಉಗ್ರನೆಲೆಯೂ ಸಂಪೂರ್ಣ ಧ್ವಂಸವಾಗಿದ ಎನ್ನಲಾಗಿದೆ.
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ
ಈ ಕ್ಯಾಂಪ್ ಅನ್ನು ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ನ ಮೈದುನ ಮೊಹಮ್ಮದ್ ಸಲೀಂ ಅಲಿಯಾಸ್ ಉಸ್ತಾದ್ ಘೋರಿ ನಡೆಸುತ್ತಿದ್ದ. ಕ್ಯಾಂಪಿನಲ್ಲಿದ್ದ ಇತರ ಉಗ್ರರಲ್ಲಿ 42 ಜನ ಆತ್ಮಾಹುತಿ ಬಾಂಬರ್ ಗಳಿದ್ದರು. ಅವರ ಪಟ್ಟಿ ಇಲ್ಲಿದೆ.
ಆತ್ಮಾಹುತಿ ಬಾಂಬರ್ ಗಳ ಪಟ್ಟಿ
ಅಬ್ಬು ಬಕ್ಕರ್(ಬಾಹವಲ್ಪುರ ಜಿಲ್ಲೆ), ಶಬ್ಬೀರ್ ಹುಸೇನ್(ಮುಲ್ತಾನ್ ಜಿಲ್ಲೆ), ಗುಜ್ರಾತ್ ಜಿಲ್ಲೆಯ ಮುಹಮ್ಮದ್ ಖಲೀಲ್, ವಾಜಿದ್ ಹುಸೇನ್, ರಾಜಾ ಇಮ್ರಾನ್, ಫೈಸ್ಲಾಬಾದ್ ಜಿಲ್ಲೆಯ ಶಾಹಿದ್ ನದೀಮ್, ಶಬ್ಬೀರ್ ಹುಸೇನ್
ರಾವಲ್ಪಿಂಡಿ ಜಿಲ್ಲೆಯ ಉಗ್ರರು
ನಿಸಾರ್ ಅಕ್ತರ್, ಬಿಲಾಲ್ ಅಮೀರ್, ಅಬ್ದುಲ್ ಹಫೀಜ್, ನಿಸಾರ್ ಅಹ್ಮದ್, ಅಬ್ದುಲ್ ಬಸಿತ್, ಶಾಹಿದ್ ಇಖ್ಬಾಲ್, ಅಬ್ದುಲ್ ಮುನ್ಹಾಮ್, ಶಾಮಾಸ್ ಉಲ್ ರಿಯಾಜ್, ಅದ್ನಾನ್ ಉಮರ್, ಮೊಹಮ್ಮದ್ ಇಶಾಖ್, ಮುಸ್ತಾಖ್ ಅಲಿ, ಖುರಾಮ್ ಶಹಜ್ಹಾದ್, ಮುಹಮ್ಮದ್ ಇಬ್ರಾಹಿಂ ಖಾಲಿ, ಅಲ್ಲಾ ಬಕ್ಷ್ ಈ ಎಲ್ಲಾ ಆತ್ಮಾಹುತಿ ದಾಳಿಕೋರರೂ ರಾವಲ್ಪಿಂಡಿ ಮೂಲದವರಾಘಿದ್ದು, ಜೆಇಎಂ ಕ್ಯಾಂಪ್ ನಲ್ಲಿದ್ದರು.
ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?
ಮೈನ್ವಾಲಿ ಜಿಲ್ಲೆಯ ಆತ್ಮಾಹುತಿ ದಾಳಿಕೋರರು
ವಾಖರ್ ಅಹ್ಮದ್, ಬಶ್ರತ್ ಹುಸೇನ್, ಹಫೀಜ್ ಮುಹಮ್ಮದ್ ಇರ್ಫಾಣ್, ಅಜ್ಮತ್ ಇಖ್ಬಾಲ್, ಅಮಿರ್ ಶಹಜಾದ್, ಫಿದಾ ಮೊಹಮ್ಮದ್, ಅಹ್ಮದ್ ಜಮಿರ್ ಖಾನ್, ಹಮ್ಮಾಯುನ್ ರಫೀಕ್, ಜಾಹಿದ್ ಅಲಿ, ಶಕೀಲ್ ಅಹ್ಮೆದ್, ಮುಹಮ್ಮದ್ ಇಸ್ಮಾಯಿಲ್, ಖುರಾಮ್ ಶಹಜಾದ್, ಅಬ್ದುಲ್ ಸತ್ತರ್ ಇವರೆಲ್ಲ ಮೈನ್ವಾಲಿ ಜಿಲ್ಲೆಯಿಂದ ಬಂದ ಆತ್ಮಾಹುತಿ ದಾಳಿಕೋರರಾಗಿದ್ದು ಬಾಲಕೋಟ್ ಕ್ಯಾಂಪ್ ನಲ್ಲಿದ್ದರು.
ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್
ಮುಜಾಫರ್ ನಗರ ಜಿಲ್ಲೆಯ ಉಗ್ರರು
ಮುಹಮ್ಮದ್ ಅರ್ಶದ್, ಮೊಲ್ವಿ ಅಬ್ದುಲ್ ಜಬ್ಬರ್, ಅಬ್ದುಲ್ ವಾಹಬ್ ಇವರೆಲ್ಲ ಮುಜಾಫರ್ ನಗರ ಮತ್ತು ರಾಜನ್ಪುರ ಜಿಲ್ಲೆಯಿಂದ ಬಂದವರಾದರೆ, ಸಾಹಿವಲ್ ಜಿಲ್ಲೆ ಉಗ್ರರಾದ ಖಾರಿ ಜಹಾಂಗೀರ್ ಖುರ್ಷಿದ್, ತಾಹಿರ್, ಅಲ್ಲಾ ಬಕ್ಷ್, ಅಲಾಫ್ ಹುಸೇನ್ ಈ ಎಲ್ಲರನ್ನೂ ದಾಳಿಯಲ್ಲಿ ಕೊಲ್ಲಲಾಗಿದೆ ಎನ್ನಲಾಗಿದೆ.
ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್