ವಿಡಿಯೋ: ಭಜನೆ ಹಾಡಿ ಸುಷ್ಮಾ ಸ್ವರಾಜ್ ಮನಗೆದ್ದ ಕುವೈತ್ ಹಾಡುಗಾರ
ಕುವೈತ್, ಅಕ್ಟೋಬರ್ 31: ಮಹಾತ್ಮಾ ಗಾಂಧಿ ಅವರಿಗೆ ಪ್ರಿಯವಾಗಿದ್ದ ಭಜನೆಯನ್ನು ರಾಗವಾಗಿ ಹಾಡಿದ ಕುವೈತ್ ಹಾಡುಗಾರ ಸುಷ್ಮಾ ಸ್ವರಾಜ್ ಮನಗೆದ್ದಿದ್ದಾರೆ.
ಸುಷ್ಮಾ ಸ್ವರಾಜ್ ರನ್ನು ತರಾಟೆಗೆ ತೆಗೆದುಕೊಂಡ ಶಶಿ ತರೂರ್
ಅರಬ್ ದೇಶದ ಪ್ರವಾಸದಲ್ಲಿರುವ ಸುಷ್ಮಾ ಸ್ವರಾಜ್ ಅವರು ಕುವೈತ್ನಲ್ಲಿ ಆಯೋಜಿಸಿದ್ದ ಭಾರತೀಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಅಲ್ಲಿನ ಸ್ಥಳೀಯ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರು ಭಜನೆ ಹಾಡಿದರು.
#WATCH: Kuwaiti singer Mubarak Al-Rashid sings the favourite bhajan of Mahatma Gandhi Vaishnav Jan to Tene Kahiye’ during an event in Kuwait, in the presence of EAM Sushma Swaraj. pic.twitter.com/aKqy1HM2hn
— ANI (@ANI) October 30, 2018
ಮಹಾತ್ಮಾ ಗಾಂಧಿ ಅವರಿಗೆ ಬಹು ಪ್ರಿಯವಾದ ಭಜನೆಗಳಲ್ಲಿ ಒಂದಾಗಿರುವ 'ವೈಷ್ಣವ ಜನ ತೋ' ಭಜನೆಯಲ್ಲಿ ಹಾಡಿದರು. ಭಜನೆ ಪ್ರಾರಂಭಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಾಜರಿದ್ದವರು ಭಾರಿ ಕರತಾಡನ ಮಾಡಿದರು.
ವಿಶ್ವಸಂಸ್ಥೆ: ಉಗ್ರರ ನೆರಳಾಗಿರುವ ಪಾಕ್ ವಿರುದ್ಧ ಸುಷ್ಮಾ ಸ್ವರಾಜ್ ವಾಗ್ದಾಳಿ
ಸುಷ್ಮಾ ಸ್ವರಾಜ್ ಅವರೂ ಸಹ ಆಸಕ್ತಿಯಿಂದ ಭಜನೆ ಕೇಳಿ ಕರತಾಡನ ಮಾಡಿದರು. ಭಜನೆ ಮುಗಿದ ಬಳಿ ಹಾಡುಗಾರ ಮುಬಾರಕ್-ಅಲ್-ರಶೀದ್ ಅವರ ಕೈಕುಲುಕಿ ಅಭಿನಂದಿಸಿದರು.
ಜನಪದ ಸಾರ ಸೂಸುವ ಸೋಜುಗದ ಸೂಜು ಮಲ್ಲಿಗೆ, ತಪ್ಪದೇ ಪಾಲ್ಗೊಳ್ಳಿ
ಮುಬಾರಕ್ ಕಾರ್ಯಕ್ರಮದಲ್ಲಿ ಈ ಮುಂಚೆ ಹಾಡಿದ ಎರಡು ಹಾಡುಗಳಿಗಿಂತಲೂ ಈ ಭಜನೆ ಬಹಳ ಇಷ್ಟವಾಯಿತು. ಅವರು ಯಾವುದೇ ಪುಸ್ತಕದ ಸಹಾವಿಲ್ಲದೆ ಭಜನೆಯನ್ನು ಹಾಡಿದ್ದು ಖುಷಿ ಕೊಟ್ಟಿತು ಎಂದು ಸುಷ್ಮಾ ಸ್ವರಾಜ್ ಅವರು ಗಾಯಕ ಮುಬಾರಕ್ ಬೆನ್ನು ತಟ್ಟಿದರು.