ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತು-ಹವಳಗಳ ನಾಡು ಬಹರೇನ್‌ನಲ್ಲಿ ಕನ್ನಡ ಡಿಂಡಿಮ

|
Google Oneindia Kannada News

ಬಹರೇನ್‌ , ಅಕ್ಟೋಬರ್ 11: ಬಹರೇನ್‌ನಲ್ಲಿರುವ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಡಿಂಡಿಮ ಎನ್ನುವ ಕಾರ್ಯಕ್ರಮವನ್ನು ಅಕ್ಟೋಬರ್ 12ರಂದು ಬಹ್ರೈನ್‌ಲ್ಲಿ ಹಮ್ಮಿಕೊಂಡಿದೆ.

ಎಲ್ಲಾದರೂ ಇರು ಎಂತಾದರೂ ಇರು ಎಂದಂದಿಗೂ ನೀ ಕನ್ನಡವಾಗಿರು ಎಂಬ ಕವಿನುಡಿಯನ್ನು ಸಾರ್ಥಕಪಡಿಸುವ ಉದ್ದೇಶದಿಂದ ಅಲ್ಲಿರುವ ಕನ್ನಡಿಗರೆಲ್ಲಾ ಸೇರಿ ಕಾರ್ಯಕ್ರಮವನ್ನು ಆಯೋಜಿಸಿದೆ. ಕರ್ನಾಟಕದಿಂದ ಹಲವಾರು ಹಿರಿಯ ಹಾಗೂ ಪ್ರಮುಖ ಕಲಾವಿದರನ್ನು ಅಲ್ಲಿಗೆ ಕರೆಸಿಕೊಳ್ಳಲಿದ್ದಾರೆ.

Kannada Dindima cultural event in Bahrain

ಮೈಸೂರಿನಲ್ಲಿ ನಡೆದ ನಾವಿಕೋತ್ಸವದಲ್ಲಿ ಕನ್ನಡ ಡಿಂಡಿಮ ಬಾರಿಸಿದ ವಿದೇಶಿ ಕನ್ನಡಿಗರುಮೈಸೂರಿನಲ್ಲಿ ನಡೆದ ನಾವಿಕೋತ್ಸವದಲ್ಲಿ ಕನ್ನಡ ಡಿಂಡಿಮ ಬಾರಿಸಿದ ವಿದೇಶಿ ಕನ್ನಡಿಗರು

ಸಚಿವ ಯುಟಿ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಹಿರಿಯ ಕಲಾವಿದ, ನಟ ಮುಖ್ಯಮಂತ್ರಿ ಚಂದ್ರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.


ಭಾಗವಹಿಸುತ್ತಿರುವ ಇತರೆ ಕಲಾವಿದರು:

-ಕುದ್ರೋಲಿ ಗಣೇಶ್, ಇಂಡಿಯಾಸ್ ಗಾಟ್ ಟಾಯ್ಲೆಂಟ್
- ಗೋಪಿ, ಮಿಮಿಕ್ರಿ
-ಗೋ.ನಾ. ಸ್ವಾಮಿ, ಗಾಯನ
-ಪುಷ್ಪಾ ಆರಾಧ್ಯ, ಗಾಯನ
- ಪುಷ್ಕಲ್ ಕುಮಾರ್, ಗಾಯನ
- ತೀರ್ಥಶ್ರೀ ದಾಮೋದರ್, ಸ್ಯಾಕ್ಸೊಫೋನ್ ವಾದನ
-ಕೋಟೆಗದ್ದೆ ರವಿ, ಪೇಟಿಂಗ್
-ಸತ್ಯವತಿ ಕೆ.ಆರ್- ಭರತನಾಟ್ಯ

English summary
Karnataka NRI's forum is organising Kannada Dindima, cultural program in Bahrain on October 12. Minister U.T. Khader will take part and actor Mukhyamantri Chandu will inaugurate the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X