ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 27: ಭಾರತವು ಪಾಕಿಸ್ತಾನದ ಉಗ್ರನೆಲೆಯ ಮೇಲೆ ದಾಳಿ ಮಾಡಿದ್ದೇ ಸುಳ್ಳು ಎನ್ನುತ್ತರುವ ಪಾಕಿಸ್ತಾನಕ್ಕೆ ಮುಖಭಂಗವಾಗುವಂಥ ಹೇಳಿಕೆಯನ್ನು ಸ್ವತಃ ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಝರ್ ನೀಡಿದ್ದಾನೆ.

ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್

"ಭಾರತ ನಮ್ಮ ಕ್ಯಾಂಪ್ ಗಳ ಮೇಲೆ ಮಂಗಳವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದು ನಿಜ" ಎಂದು ಸ್ವತಃ ಮಸೂದ್ ಒಪ್ಪಿಕೊಂಡಿದ್ದಾನೆ. 'ದಾಳಿ ನಡೆದಿದ್ದು ಸತ್ಯ, ಆದರೆ ಅದರಿಂದ ಯಾವುದೇ ಹಾನಿಯಾಗಿಲ್ಲ. ನಮ್ಮ ನೆಲೆಯ ಯಾರಿಗೂ ಯಾವುದೇ ತೊಂದರೆಯಾಗಿಲ್ಲ' ಎಂದು ಮಸೂದ್ ಹೇಳಿದ್ದಾನೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಜೈಷ್ ಇ ಮೊಹಮ್ಮದ್ ಉಗ್ರರ ಹತ್ಯೆಯಾಗಿದ್ದು ನಿಜವೇ?

ಜೈಷ್ ಇ ಮೊಹಮ್ಮದ್ ಉಗ್ರರ ಹತ್ಯೆಯಾಗಿದ್ದು ನಿಜವೇ?

ಈ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ನ ನೂರಾರು ಉಗ್ರರ ಹತ್ಯೆಯಾಗಿದೆ ಎನ್ನಲಾಗಿದ್ದು, ಇದುವರೆಗೂ ಈ ಕುರಿತು ನಿಖರ ಮಾಹಿತಿಲಭ್ಯವಾಗಿಲ್ಲ. ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲ್, 'ಹಲವು ಉಗ್ರರು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ' ಎಂದಿದ್ದರೇ ವಿನಃ ಇಂತಿಷ್ಟು ಎಂದು ನಿಖರ ಸಂಖ್ಯೆಯನ್ನಂತೂ ಹೇಳಿಲ್ಲ.

ಭಾರತ ಧ್ವಂಸಗೊಳಿಸಿದ ಜೈಷ್ ಉಗ್ರನೆಲೆಯ ಚಿತ್ರ ವೈರಲ್ ಭಾರತ ಧ್ವಂಸಗೊಳಿಸಿದ ಜೈಷ್ ಉಗ್ರನೆಲೆಯ ಚಿತ್ರ ವೈರಲ್

ಮೋಸ್ಟ್ ವಾಂಟೆಡ್ ಉಗ್ರರು ಬಲಿ

ಮೋಸ್ಟ್ ವಾಂಟೆಡ್ ಉಗ್ರರು ಬಲಿ

ಈ ದಾಳಿಯಲ್ಲಿ 300 ಉಗ್ರರನ್ನು ಗುರಿಯಾಗಿಸಲಾಗಿತ್ತು ಮತ್ತು ಅವರಲ್ಲಿ ಮೌಲಾನಾ ಅಮ್ಮರ್, ಮೌಲಾನಾ ತಲ್ಹಾ ಸೈಫ್, ಮುಫ್ತಿ ಅಝರ್ ಖಾನ್ ಕಾಶ್ಮೀರಿ, ಇಬ್ರಾಹಿಂ ಅಝರ್ ಮುಂತಾದ ಮೋಸ್ಟ್ ವಾಂಟೆಡ್ ಉಗ್ರರೂ ಇದ್ದರು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಆದರೆ ಅವರೆಲ್ಲರೂ ದಾಳಿಯಲ್ಲಿ ಮೃತರಾದರೆ ಎಂಬ ಗ್ಗೆ ವರದಿಯಲ್ಲಿ ಸ್ಪಷ್ಟನೆ ಇಲ್ಲ.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಭಯಾನಕ ಉಗ್ರದಾಳಿಯ ಹೊಂಚುಹಾಕಿದ್ದ ಜೈಷ್

ಭಯಾನಕ ಉಗ್ರದಾಳಿಯ ಹೊಂಚುಹಾಕಿದ್ದ ಜೈಷ್

ಜೈಷ್ ಉಗ್ರ ಸಂಘಟನೆ ಮತ್ತೊಂದು ಭಯಾನಕ ದಾಳಿಗೆ ಹೊಂಚು ಹಾಕಿತ್ತು. ಈ ವಿಷಯ ಭಾರತೀಯ ಗುಪ್ತಚರ ಇಲಾಖೆಗೆ ತಿಳಿಸದ ಕಾರಣ, ಸ್ವರಕ್ಷಣೆಗಾಗಿ ಉಗ್ರನೆಲೆ ಮೇಲೆ ದಾಳಿ ನಡೆಸಲಾಯಿತು ಎಂದು ಭಾರತ ಸಮಜಾಯಿಷಿ ನೀಡಿದೆ.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಪ್ರತೀಕಾರ ತೀರಿಸಿಕೊಂಡ ಭಾರತ

ಪ್ರತೀಕಾರ ತೀರಿಸಿಕೊಂಡ ಭಾರತ

ಫೆಬ್ರವರಿ 14 ರಂದು ಪುಲ್ವಾಮದಲ್ಲಿ ಭಾರತದ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಜೈಷ್ ಸಂಘಟನೆಯ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರ ಎಂಬಂತೆ ಭಾರತವೇ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಅಲ್ಲಿನ ಜೈಷ್ ಉಗ್ರನೆಲೆಯನ್ನು ಧ್ವಂಸಗೊಳಿಸಿದ್ದು, ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿರಬಹದು ಎಂದು ಅಂದಾಜಿಸಲಾಗಿದೆ.

English summary
Jaish-e-Mohammed (JeM) chief Maulana Masood Azhar on Tuesday confirmed that the air strikes took place at the terror camp of JeM at Balakot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X