ಮಾರ್ಚ್ ತಿಂಗಳಲ್ಲೇ ಕೊರೊನಾ ವಿರುದ್ಧ ದೀಪ ಬೆಳಗಿದ್ದ ಇಟಾಲಿಯನ್ನರು!
''ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಪ್ರತಿಯೊಬ್ಬ ಭಾರತೀಯ ಮನೆಯ ಲೈಟ್ ಆರಿಸಿ, ಮನೆಯಿಂದ ಹೊರಗೆ ಅಥವಾ ಬಾಲ್ಕನಿಗೆ ಬಂದು ಮೊಬೈಲ್ ಟಾರ್ಚ್ ಅಥವಾ ಮೇಣದ ಬತ್ತಿ ಹಿಡಿಯಿರಿ. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಿ. ದೇಶದಲ್ಲಿ ಯಾರೂ ಒಂಟಿಯಲ್ಲ. ಕೊರೊನಾ ವೈರಸ್ ನ ಮಟ್ಟ ಹಾಕಲು ದೇಶದ 130 ಕೋಟಿ ಜನರು ಒಂದೇ ಸಂಕಲ್ಪ ತೊಟ್ಟಿದ್ದಾರೆ. ಮೊಂಬತ್ತಿ, ದೀಪ ಬೆಳಗುವುದರಿಂದ ಮನಸ್ಸು ಜಾಗೃತವಾಗುತ್ತದೆ. ಹೋರಾಡಲು ಶಕ್ತಿ ಬರುತ್ತದೆ''
Recommended Video
- ಹೀಗಂತ ಇಂದು ಬೆಳಗ್ಗೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶ ನೀಡಿದ್ದರು.
ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ
ಅಸಲಿಗೆ, ಲಾಕ್ ಡೌನ್ ನಿಂದ ಉಂಟಾಗುವ ಸಾಮಾಜಿಕ ಪ್ರತ್ಯೇಕತೆಯಿಂದ ಹೊರಬರಲು ಮಾರ್ಚ್ ತಿಂಗಳಲ್ಲೇ ಇಟಲಿಯ ಜನ ಇದೇ ಕೆಲಸ ಮಾಡಿದ್ದರು.
ಮಾರ್ಚ್ 15 ರಂದು ಮನೆಯ ಲೈಟ್ ಗಳನ್ನು ಆಫ್ ಮಾಡಿ, ಬಾಲ್ಕನಿಗೆ ಬಂದು ಕೈಯಲ್ಲಿ ಕ್ಯಾಂಡಲ್ ಗಳನ್ನು ಹಿಡಿದು ಇಟಾಲಿಯನ್ನರು ಕೋವಿಡ್-19 ತಡೆಗಟ್ಟಲು ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ಇದನ್ನೇ ಅನುಸರಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ಇಲ್ಲಿಯವರೆಗೂ 13,915 ಮಂದಿ ಮೃತಪಟ್ಟಿದ್ದಾರೆ. 115,242 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಇಟಲಿಯನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.