ಅಪಹರಣಕ್ಕೆ ಒಳಗಾಗಿದ್ದ ಭಾರತದ ಜುಡಿತ್ ಡಿಸೋಜಾ ತವರಿಗೆ
ಕಾಬೂಲ್, ಜುಲೈ, 23: ಅಪಘಾನಿಸ್ತಾನದಲ್ಲಿ ಬಂದೂಕುದಾರಿಯಿಂದ ಅಪಹರಣಕ್ಕೆ ಒಳಗಾಗಿದ್ದ ಭಾರತೀಯ ಮಹಿಳೆ ಸುರಕ್ಷಿತವಾಗಿ ನವದೆಹಲಿಗೆ ಹಿಂದಿರುಗಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕಾಬೂಲ್ ನ ಇಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಲ್ಕತಾ ಮೂಲದ ಭಾರತೀಯ ಮಹಿಳೆ ಜುಡಿತ್ ಡಿಸೋಜಾ(40) ಅವರನ್ನು ಜೂನ್ 9ರಂದು ಶಂಕಿತ ಉಗ್ರರು ಅಪಹರಿಸಿದ್ದರು.[ಕಾಬೂಲ್: ಭಾರತದ ಜುಡಿತ್ ಡಿಸೋಜಾ ಅಪಹರಣ]
ಆಕೆಯನ್ನು ಸುರಕ್ಷಿತವಾಗಿ ವಾಪಸ್ ತರಲು ಕ್ರಮ ಕೈಗೊಳ್ಳಬೇಕು' ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಗೆ ಜುಡಿತ್ ತಂದೆ ಮನವಿ ಮಾಡಿದ್ದರು. ಜುಡಿತ್ ಡಿಸೋಜಾ ಅವರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ನೀಡಲು ತುಂಬಾ ಸಂತೋಷವಾಗುತ್ತಿದೆ ಎಂದು ಸುಷ್ಮಾ ತಿಳಿಸಿದ್ದಾರೆ.[ಉಗ್ರರ ಅಟ್ಟಹಾಸ: ಕಾಬೂಲ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ]
ಅಪಘಾನಿಸ್ತಾನದ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕಲ್ಲಿದ್ದ ವಿದೇಶಾಂಗ ಸಚಿವಾಲಯ ಯಾವ ಗೊಂದಲವಾದಂತೆ ಮಹಿಳೆಯನ್ನು ಬಿಡುಗಡೆ ಮಾಡಿ ದೇಶಕ್ಕೆ ಕರೆತರುತ್ತಿದೆ. ಆದರೆ ಯಾವ ಸಂಘಟನೆ ಈ ಕೆಲಸ ಮಾಡಿತ್ತು ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
I have spoken to Judith. She is reaching Delhi this evening. Ambassador @VohraManpreet is accompanying her.
— Sushma Swaraj (@SushmaSwaraj) July 23, 2016