ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು- ಕಾಶ್ಮೀರ ಬಗ್ಗೆ ಭಾರತ- ಪಾಕ್ ಮಧ್ಯೆ ಮಾಲ್ಡೀವ್ಸ್ ನಲ್ಲೂ ಮಾತಿನ ಚಕಮಕಿ

|
Google Oneindia Kannada News

ಮಾಲ್ಡೀವ್ಸ್, ಸೆಪ್ಟೆಂಬರ್ 1: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ-ಮಾನ ತೆಗೆಯುವ ಭಾರತದ ನಿರ್ಧಾರದ ಬಗ್ಗೆ ಚರ್ಚೆ ನಡೆಸಲು ಪಾಕಿಸ್ತಾನವು ಮಾಡಿದ ಪ್ರಯತ್ನಕ್ಕೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಘಟನೆ ನಡೆದಿರುವುದು ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ದಕ್ಷಿಣ ಏಷ್ಯಾದ ಸ್ಪೀಕರ್ ಗಳ ಸಮಾವೇಶದಲ್ಲಿ. ಈ ವೇಳೆ ಭಾರತ ಹಾಗೂ ಪಾಕಿಸ್ತಾನದ ಪ್ರತಿನಿಧಿಗಳ ಮಧ್ಯೆ ಕಾವೇರಿದ ಚರ್ಚೆ ನಡೆದಿದೆ.

ಪಾಕಿಸ್ತಾನದ ಪ್ರತಿನಿಧಿ ಜಮ್ಮು- ಕಾಶ್ಮೀರದ ವಿಷಯವನ್ನು ತೆಗೆದರು. ಇದಕ್ಕೆ ಭಾರತದ ಪ್ರತಿನಿಧಿ- ರಾಜ್ಯಸಭಾದ ಉಪ ಸಭಾಪತಿ ಹರಿವಂಶ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!

"ಭಾರತದ ಆಂತರಿಕ ವಿಷಯವನ್ನು ಇಲ್ಲಿ ಚರ್ಚೆ ಮಾಡುವುದಕ್ಕೆ ನಾವು ಪ್ರಬಲವಾಗಿ ಆಕ್ಷೇಪಿಸುತ್ತೇವೆ. ಸಮಾವೇಶದ ಉದ್ದೇಶದ ಹೊರಗೆ ಇರುವ ವಿಷಯವನ್ನು ಎತ್ತುವ ಮೂಲಕ ಈ ವೇದಿಕೆಯಲ್ಲಿ ರಾಜಕೀಯ ತರುವುದನ್ನೂ ನಾವು ವಿರೋಧಿಸುತ್ತೇವೆ" ಎಂದು ಹರಿವಂಶ್ ಹೇಳಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದಲ್ಲಿ ಭಾರತೀಯ ನಿಯೋಗವು ಈ ಸಮಾವೇಶಕ್ಕೆ ತೆರಳಿದೆ.

Harivansh

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ-ಮಾನ ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಭಾರತದ ಕ್ರಮಕ್ಕೆ ಪಾಕಿಸ್ತಾನವು ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಜಮ್ಮು- ಕಾಶ್ಮೀರವು ಆಂತರಿಕ ವಿಚಾರ ಎನ್ನುತ್ತಾ ಬರುತ್ತಿದೆ ಭಾರತ.

English summary
South Asian speakers summit Sunday witnessed heated argument between India and Pakistan representatives over Jammu and Kashmir issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X