ಚೀನಾದಲ್ಲಿ ಭೂಕಂಪ: ಸಾವಿನ ಸಂಖ್ಯೆ 46ಕ್ಕೆ ಏರಿಕೆ- ಸಂತಾಪ ಸೂಚಿಸಿದ ಭಾರತ
ಚೀನಾದ ನೈರುತ್ಯ ಸಿಚುವಾನ್ ಪ್ರಾಂತ್ಯದ ಲುಡಿಂಗ್ ಕೌಂಟಿಯಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪವು ಸೋಮವಾರ ಸಂಭವಿಸಿ 46 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಚೀನಾ ಈಗಾಗಲೇ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ಅಭೂತಪೂರ್ವ ಬರಗಾಲದಿಂದ ತತ್ತರಿಸಿದೆ. ಇದರ ನಡುವೆ ಭೂಕಂಪನದಿಂದ ಮತ್ತಷ್ಟು ಜರ್ಜರಿತವಾಗಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 12:25 ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದುವನ್ನು 29.59 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 102.08 ಡಿಗ್ರಿ ಪೂರ್ವ ರೇಖಾಂಶದಲ್ಲಿ 16-ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಚೀನಾ ಭೂಕಂಪನ ನೆಟ್ವರ್ಕ್ ಸೆಂಟರ್ ಉಲ್ಲೇಖಿಸಿದೆ ಎಂದು ಸರ್ಕಾರಿ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭೂಕಂಪದ ಕೇಂದ್ರವು ಲುಡಿಂಗ್ನ ಕೌಂಟಿ ಸೀಟ್ನಿಂದ 39-ಕಿಮೀ ದೂರದಲ್ಲಿದೆ ಮತ್ತು ಆ ಕೇಂದ್ರದ ಸುತ್ತಲೂ 5-ಕಿಮೀ ವ್ಯಾಪ್ತಿಯಲ್ಲಿ ಹಲವಾರು ಹಳ್ಳಿಗಳಿವೆ.
ಹೀಗಾಗಿ ಭೂಕಂಪನದ ತೀವ್ರತೆಗೆ ಮನೆಗಳು ಉರುಳಿ 46 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ತಂಡಗಳು ಬೀಡುಬಿಟ್ಟಿರುವುದರಿಂದ ಸಾವುನೋವುಗಳು ಹೆಚ್ಚಾಗುವ ನಿರೀಕ್ಷೆಯಿದೆ. ಸತ್ತವರಲ್ಲಿ 29 ಜನ ಲುಡಿಂಗ್ ಕೌಂಟಿಯನ್ನು ನಿರ್ವಹಿಸುವ ಗಾಂಜಿ ಟಿಬೆಟಿಯನ್ ಸ್ವಾಯತ್ತ ಪ್ರಿಫೆಕ್ಚರ್ಗೆ ಸೇರಿದವರು ಮತ್ತು ಇತರ 17 ಮಂದಿ ಯಾನ್ ಸಿಟಿಯವರು.
ಸಂತಾಪ ಸೂಚಿಸಿದ ಭಾರತ
ಈ ದುರಂತದ ಬಳಿಕ ಚೆಂಗ್ಡುವಿನ 21-ಮಿಲಿಯನ್ಗಿಂತಲೂ ಹೆಚ್ಚಿನ ಜನರು ದಿನದ ಬಹುಪಾಲು ಭಾಗವನ್ನು ತಮ್ಮ ಮನೆಗಳ ಹೊರಗೆ ಕಳೆದಿದ್ದಾರೆ. ಏಕೆಂದರೆ ಚೀನಾದಲ್ಲಿ ನಿರಂತರ ಭೂಕಂಪಿಸುತ್ತಲೇ ಇದೆ. ಆಘಾತಗಳು ಪ್ರದೇಶವನ್ನು ಅಲುಗಾಡಿಸುತ್ತಲೇ ಇವೆ. ನೀರು, ವಿದ್ಯುತ್, ಸಾರಿಗೆ ಮತ್ತು ದೂರಸಂಪರ್ಕ ಸೇವೆಗಳು ಸೇರಿದಂತೆ ಮೂಲಸೌಕರ್ಯಗಳು ಸಹ ಹಾನಿಗೊಳಗಾಗಿವೆ.
"ಸೆಪ್ಟೆಂಬರ್ 5 ರಂದು ಸಿಚುವಾನ್ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಕಳೆದುಹೋದ ಜೀವಗಳಿಗೆ ಹೃತ್ಪೂರ್ವಕ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥನೆಗಳು" ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಲಿಬರೇಶನ್ ಆರ್ಮಿ ಮತ್ತು ಪೀಪಲ್ಸ್ ಆರ್ಮ್ಡ್ ಪೋಲೀಸ್ ಫೋರ್ಸ್ ಕಾರ್ಯಚರಣೆ
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪ್ರಾಣಾಪಾಯವನ್ನು ಕಡಿಮೆ ಮಾಡಲು ಸಂಪೂರ್ಣ ರಕ್ಷಣಾ ಪ್ರಯತ್ನಗಳಿಗೆ ಆದೇಶ ನೀಡಿದ್ದಾರೆ. ಜನರನ್ನು ಉಳಿಸುವುದನ್ನು ಪ್ರಾಥಮಿಕ ಕಾರ್ಯವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ಭೂಕಂಪದ ಮೇಲ್ವಿಚಾರಣೆಯನ್ನು ಬಲಪಡಿಸುವುದು, ದ್ವಿತೀಯ ವಿಪತ್ತುಗಳ ವಿರುದ್ಧ ಕಾವಲು ಕಾಯುವುದು ಮತ್ತು ಪೀಡಿತರಿಗೆ ಸರಿಯಾಗಿ ಅವಶ್ಯಕತೆಗಳನ್ನು ಕಲ್ಪಿಸುವುದನ್ನು ಕ್ಸಿ ಒತ್ತಿ ಹೇಳಿದರು.
ಜನರ
ಜೀವನ
ಮತ್ತು
ಆಸ್ತಿಯ
ಸುರಕ್ಷತೆಯನ್ನು
ಖಾತ್ರಿಪಡಿಸಲು
ಹೆಚ್ಚಿನ
ಪ್ರಯತ್ನಗಳಿಗೆ
ಕರೆ
ನೀಡಿದ
ಕ್ಸಿ,
ಪರಿಹಾರ
ಕಾರ್ಯಗಳಿಗೆ
ಮಾರ್ಗದರ್ಶನ
ನೀಡಲು
ಸಿಚುವಾನ್ಗೆ
ತಂಡಗಳನ್ನು
ಕಳುಹಿಸಲು
ತುರ್ತು
ನಿರ್ವಹಣಾ
ಸಚಿವಾಲಯ
ಮತ್ತು
ಇತರ
ಇಲಾಖೆಗಳ
ತಂಡಗಳನ್ನು
ಕೇಳಿದರು.
ಜೊತೆಗೆ
ಪೀಪಲ್ಸ್
ಲಿಬರೇಶನ್
ಆರ್ಮಿ
ಮತ್ತು
ಪೀಪಲ್ಸ್
ಆರ್ಮ್ಡ್
ಪೋಲೀಸ್
ಫೋರ್ಸ್
ಅನ್ನು
ಸಕ್ರಿಯವಾಗಿ
ಕಾರ್ಯನಿರ್ವಹಿಸುವಂತೆ
ಆದೇಶಿಸಿದರು.
ಪ್ರೀಮಿಯರ್
ಲಿ
ಕೆಕಿಯಾಂಗ್
ಅವರು
ಪರಿಸ್ಥಿತಿಯ
ತ್ವರಿತ
ಮೌಲ್ಯಮಾಪನ
ಮತ್ತು
ಸಂಪೂರ್ಣ
ಪಾರುಗಾಣಿಕಾ
ಮತ್ತು
ವೈದ್ಯಕೀಯ
ಚಿಕಿತ್ಸೆಯ
ಪ್ರಯತ್ನಗಳ
ಮೇಲ್ವಿಚಾರಣೆ
ಮಾಡುತ್ತಿದ್ದಾರೆ.
ಪರಿಹಾರ ಸಾಮಗ್ರಿಗಳ ವಿತರಣೆ
ಚೀನಾದ ರೆಡ್ ಕ್ರಾಸ್ ಸೊಸೈಟಿ ಭೂಕಂಪದ ನಂತರ ಹಂತ-III ತುರ್ತು ಪ್ರತಿಕ್ರಿಯೆಯನ್ನು ಪ್ರಾರಂಭಿಸಿತು. 320 ಟೆಂಟ್ಗಳು, 2,200 ಪರಿಹಾರ ಪ್ಯಾಕೇಜ್ಗಳು, 1,200 ಕ್ವಿಲ್ಟ್ಗಳು ಮತ್ತು 300 ಮಡಿಸುವ ಹಾಸಿಗೆಗಳನ್ನು ಒಳಗೊಂಡಿರುವ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಪೀಡಿತ ಪ್ರದೇಶಕ್ಕೆ ರವಾನೆಯಾಯಿತು. ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು ಕಾರ್ಯನಿರತ ಗುಂಪನ್ನು ಸಹ ಕಳುಹಿಸಿದೆ.
ಸಿಚುವಾನ್ ಪ್ರಾಂತ್ಯವು ಭೂಕಂಪದ ಎರಡನೇ ಅತ್ಯುನ್ನತ ಮಟ್ಟದ ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿದೆ ಮತ್ತು ಹೆಚ್ಚಿನ ರಕ್ಷಣಾ ಪಡೆಗಳು ಕೇಂದ್ರಬಿಂದು ಪ್ರದೇಶಕ್ಕೆ ಧಾವಿಸುತ್ತಿವೆ. ಭೂಕಂಪದ ಕೇಂದ್ರದಿಂದ 226-ಕಿಮೀ ದೂರದಲ್ಲಿರುವ ಸಿಚುವಾನ್ನ ರಾಜಧಾನಿ ಚೆಂಗ್ಡುವಿನಲ್ಲಿ ಕಂಪನದ ಅನುಭವವಾಗಿದೆ. ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಫೋಟೋಗಳು ಮತ್ತು ವೀಡಿಯೊಗಳು ಚೆಂಗ್ಡುವಿನಲ್ಲಿ ಕಟ್ಟಡಗಳು ಅಲುಗಾಡುತ್ತಿರುವುದನ್ನು ತೋರಿಸಿದೆ. ಹಾನಿಯ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
2013 ರಲ್ಲಿ ಭೂಕಂಪ 200 ಜನ ಬಲಿ
ಸಿಚುವಾನ್ ಪ್ರಾಂತ್ಯವು ಟಿಬೆಟ್ನ ಪಕ್ಕದಲ್ಲಿದೆ. ಟಿಬೆಟಿಯನ್ ಪ್ರಸ್ಥಭೂಮಿಯು ಟೆಕ್ಟೋನಿಕ್ ಯುರೇಷಿಯನ್ ಮತ್ತು ಭಾರತೀಯ ಪ್ಲೇಟ್ಗಳು ಸಂಧಿಸುವ ಸ್ಥಳದ ಮೇಲೆ ಬಲವಾಗಿ ಕುಳಿತುಕೊಳ್ಳುವುದರಿಂದ ಭಾರೀ ಭೂಕಂಪಗಳಿಗೆ ಗುರಿಯಾಗುತ್ತದೆ ಎಂದು ತಿಳಿದುಬಂದಿದೆ.
2008
ರಲ್ಲಿ
ಪ್ರಾಂತ್ಯದಲ್ಲಿ
8.2
ಭೂಕಂಪ
ಸಂಭವಿಸಿದಾಗ
69,000
ಕ್ಕೂ
ಹೆಚ್ಚು
ಜನರು
ಸಾವನ್ನಪ್ಪಿದ್ದರು
ಮತ್ತು
2013
ರಲ್ಲಿ
7
ರ
ತೀವ್ರತೆಯ
ಭೂಕಂಪವು
200
ಜನರನ್ನು
ಬಲಿ
ತೆಗೆದುಕೊಂಡಿತು.
ಆದರೆ
ಸೋಮವಾರ
ಸಂಭವಿಸಿದ
ಭೂಕಂಪನದ
ಸ್ಥಳದಲ್ಲಿ
ಹೆಚ್ಚುತ್ತಿರುವ
ಕೋವಿಡ್-19
ಪ್ರಕರಣಗಳೊಂದಿಗೆ
ಹೆಣಗಾಡುತ್ತಿದೆ.