ಲಂಡನ್ ನೆಲದಲ್ಲಿರುವ ಬಸವೇಶ್ವರ ಪುತ್ಥಳಿಗೆ ದೇವೇಗೌಡರ ನಮನ
ಲಂಡನ್, ಅಕ್ಟೋಬರ್ 24: ರಾಜ್ಯದ ಉಪ ಚುನಾವಣೆಯಲ್ಲಿ ಬಿಟ್ಟು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಲಂಡನ್ಗೆ ತೆರಳಿದ್ದಾರೆ. ಅಕ್ಟೋಬರ್ 26ರಂದು ಅಲ್ಲಿರುವ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.
ಲಂಡನ್ನಲ್ಲಿ ಅಕ್ಟೋಬರ್ 25ರಂದು ನಡೆಯಲಿರುವ ಗ್ಲೋಬಲ್ ಅಚಿವರ್ಸ್ ಕಾನ್ಕ್ಲೇವ್ ನಲ್ಲಿ ಭಾಗವಹಿಸಲಿದ್ದು, ಅಕ್ಟೋಬರ್ 26ರಂದು ಅಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಬಸವೇಶ್ವರ ಫೌಂಡೇಶನ್ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಲಂಡನ್ನಲ್ಲಿ ಬಸವಣ್ಣನ ಪ್ರತಿಮೆ ಕಂಡು ಭಾವುಕರಾದ ಸಿದ್ದರಾಮಯ್ಯ
ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವಾಗ ವಿದೇಶ ಭೇಟಿಯ ವೇಳೆ ಅನಿವಾಸಿ ಭಾರತೀಯರನ್ನು ಮಾತನಾಡಿಸಿ ಅವರ ಮನಗೆಲ್ಲುವ ನರೇಂದ್ರ ಮೋದಿ ಅವರ ತಂತ್ರವನ್ನು ದೇವೇಗೌಡರೂ ಅನುಸರಿಸಲು ಮುಂದಾಗುತ್ತಿರಬಹುದೇ ಎನ್ನುವ ಸಂದೇಹ ಹುಟ್ಟಿಕೊಂಡಿದೆ.
ಉಪಚುನಾವಣೆ ಬಿಟ್ಟು ಲಂಡನ್ಗೆ ಹಾರುತ್ತಿದ್ದಾರೆ ದೇವೇಗೌಡರು
ಲಂಡನ್ನ ಮಾಜಿ ಮೇಯರ್ ನೀರಜ್ ಪಾಟೀಲ್ ಅವರು ಮಾಜಿ ಪ್ರಧಾನ ಎಚ್ಡಿ ದೇವೇಗೌಡ ಅವರಿಗೆ ಆಹ್ವಾನ ನೀಡಿದ್ದಾರೆ. ಇಂಡಿಯನ್ ಕನ್ನಡ ಕಮ್ಯುನಿಟಿ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 2015ರಲ್ಲಿ ಬವೇಶ್ವರ ಪುತ್ಥಳಿ ನಿರ್ಮಾಣವಾಗಿದ್ದು ನವೆಂಬರ್ 14ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.