ಬಹರೇನ್ ನಲ್ಲಿ ಶ್ರೀಕೃಷ್ಣ ದೇಗುಲದ ಪುನರ್ ಅಭಿವೃದ್ಧಿಗೆ ಮೋದಿ ಚಾಲನೆ
ಮನಾಮ (ಬಹರೇನ್), ಅಗಸ್ಟ್ 25: ಬಹರೇನ್ ನ ರಾಜಧಾನಿಯಲ್ಲಿ ಇರುವ ಶ್ರೀಕೃಷ್ಣನ ಇನ್ನೂರು ವರ್ಷದ ಹಳೆಯ ದೇಗುಲದ $ 4.2 ಮಿಲಿಯನ್ ಪುನರ್ ಅಭಿವೃದ್ಧಿ ಯೋಜನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ಗಲ್ಫ್ ರಾಷ್ಟ್ರ ಬಹರೇನ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ.
ಮನಾಮದಲ್ಲಿ ಇರುವ ಅತ್ಯಂತ ಹಳೆಯ ಶ್ರೀನಾಥ್ ಜೀ ದೇಗುಲದಲ್ಲಿ ಪ್ರಾರ್ಥಿಸಿದರು. ಯುಎಇಯಲ್ಲಿ ಶನಿವಾರ ರುಪೇ ಕಾರ್ಡ್ ಆರಂಭಿಸಿದ ನಂತರ ಪ್ರಸಾದ ಕೂಡ ತಂದರು.
ಮೋದಿಗೆ ಅರಬ್ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ
ಈ ಪ್ರೀತಿಗೆ ಬಹರೇನ್ ಗೆ ಧನ್ಯವಾದಗಳು. ಮನಾಮದಲ್ಲಿರುವ ಇನ್ನೂರು ವರ್ಷಗಳ ಹಳೆಯ ಶ್ರೀನಾಥ್ ಜೀ ದೇವಾಲಯಕ್ಕೆ ನರೇಂದ್ರ ಮೋದಿ ಅವರು ಐತಿಹಾಸಿಕ ಭೇಟಿ ಪೂರ್ಣಗೊಳಿಸಿದ್ದಾರೆ. ಬಹರೇನ್ ಸಮಾಜದ ಬಹುತ್ವವನ್ನು ಈ ದೇವಾಲಯವು ಪ್ರತಿನಿಧಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಶ್ರೀನಾಥ್ ಜೀ (ಶ್ರೀಕೃಷ್ಣ) ದೇಗುಲದ ಪುನರ್ ಅಭಿವೃದ್ಧಿ ಕಾರ್ಯಕ್ರಮ ಸದ್ಯದಲ್ಲೇ ಆರಂಭವಾಗಲಿದೆ. $ 4.2 ಮಿಲಿಯನ್ ವೆಚ್ಚದಲ್ಲಿ ಹದಿನಾರು ಸಾವಿರದ ಐನೂರು ಚದರಡಿ ಅಳತೆಯ ಭೂಮಿಯಲ್ಲಿ, ನಾಲ್ಕು ಅಂತಸ್ತಿನಲ್ಲಿ ನಲವತ್ತೈದು ಸಾವಿರ ಚದರಡಿ ನಿರ್ಮಾಣವನ್ನು ಮೂವತ್ತು ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತದೆ.
Thank you Bahrain for the warmth and affection
— Raveesh Kumar (@MEAIndia) August 25, 2019
PM @narendramodi concludes his historic visit with prayers at the 200 years old Shreenathji Temple in #Manama, the oldest temple in the region. The temple reflects the pluralism of Bahraini society. pic.twitter.com/no1fei2UPs
ವಿದೇಶ ಪ್ರವಾಸ ರದ್ದುಗೊಳಿಸಬೇಡಿ : ಮೋದಿಗೆ ಜೇಟ್ಲಿ ಕುಟುಂಬ ಮನವಿ
ಬಹರೇನ್ ನ ಈ ದೇಗುಲದಲ್ಲಿ ಹಿಂದೂ ಸಾಂಪ್ರದಾಯಿಕ ಮದುವೆಗಳು ನಡೆಸಲು ಅನುಕೂಲ ಆಗುವಂತೆ ಕೂಡ ವ್ಯವಸ್ಥೆ ಮಾಡಲಾಗುತ್ತದೆ. ಆ ಮೂಲಕ ಬಹರೇನ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಕೂಡ ಇದೆ.