ಗುರುದ್ವಾರದ ಮೇಲೆ ದಾಳಿ : ಪ್ರವಾದಿ ಅವಮಾನಕ್ಕೆ ಪ್ರತೀಕಾರ ಎಂದ ಉಗ್ರ ಸಂಘಟನೆ
ಕಾಬೂಲ್, ಜೂನ್ 19: ಅಫ್ಘಾನಿಸ್ತಾನದ ರಾಜಧಾನಿಯಲ್ಲಿನ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ, ಇದು ಆಫ್ಘನ್ ಸಿಖ್ ಮತ್ತು ತಾಲಿಬಾನ್ ಹೋರಾಟಗಾರನನ್ನು ಕೊಂದಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಭಯೋತ್ಪಾದಕ ಸಂಘಟನೆಯ ಸ್ಥಳೀಯ ಅಂಗಸಂಸ್ಥೆಯು ತನ್ನ ಟೆಲಿಗ್ರಾಮ್ ಚಾನೆಲ್ನಲ್ಲಿ ಪ್ರವಾದಿ ಮುಹಮ್ಮದ್ಗೆ ಮಾಡಿದ ಅವಮಾನಗಳಿಗೆ ಪ್ರತಿಕಾರವಾಗಿ ದಾಳಿ ಮಾಡಲಾಗಿದೆ ಎಂದು ಹೇಳಿದೆ.
ಕಾಬೂಲ್ ಗುರುದ್ವಾರದಲ್ಲಿ ಸ್ಫೋಟ: 2 ಸಾವು, ISIS ನಂಟು ಶಂಕೆ; MEA ಮೇಲ್ವಿಚಾರಣೆ ಪರಿಸ್ಥಿತಿ
ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ (ISKP) ಮಾಧ್ಯಮ ವಿಭಾಗವು ಪೋಸ್ಟ್ ಮಾಡಿದ ಸಂದೇಶದಲ್ಲಿ, ಹಿಂದೂಗಳು ಮತ್ತು ಸಿಖ್ಖರನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಹೇಳಿದೆ.
"ಅಲ್ಲಾಹನ ಸಂದೇಶ ಸಾರುವ ಪ್ರವಾದಿಗೆ ಬೆಂಬಲ ನೀಡುವ ಕ್ರಿಯೆಯಲ್ಲಿ" ಅವರಿಗೆ ನಿಂದಿಸಿದ "ಧರ್ಮಭ್ರಷ್ಟರನ್ನು" ಗುರಿಯಾಗಿರಿಸಿಕೊಂಡಿದೆ ಎಂದು ಹೇಳಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಪ್ರವಾದಿ ವಿವಾದ: ಕುವೈತ್ನಿಂದ ವಲಸಿಗರು ಹೊರಕ್ಕೆ
ಇಸ್ಲಾಮಿಕ್ ಸ್ಟೇಟ್ಸ್ ಖೊರಾಸನ್ ಪ್ರಾಂತ್ಯ (ISKP)ಕ್ಕೆ ಭಯೋತ್ಪಾದಕನೊಬ್ಬ "ಕಾಬೂಲ್ನಲ್ಲಿ ಹಿಂದೂ ಮತ್ತು ಸಿಖ್ ಬಹುದೇವತಾರಾಧಕರ ದೇವಾಲಯಕ್ಕೆ ನುಗ್ಗಿ, ಅದರ ಸಿಬ್ಬಂದಿಯನ್ನು ಕೊಂದ ನಂತರ, ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್ಗಳಿಂದ ಒಳಗಿದ್ದ ಭಕ್ತರ ಮೇಲೆ ದಾಳಿ ಮಾಡಿದ್ದರು" ಎಂದು ತಿಳಿಸಿದೆ.
ಕಾಬೂಲ್ನ ಗುರುದ್ವಾರ ಕರ್ತೆ ಪರ್ವಾನ್ನಲ್ಲಿ 30 ಮಂದಿ ಸಿಖ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುವ ವೇಳೆ ಭಯೋತ್ಪಾದಕರು ಒಳಗೆ ನುಗ್ಗಿದ್ದರು. ದಾಳೆ ವೇಳೆ ಗುರುದ್ವಾರಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಹೊಗೆ ಆವರಿಸಿತ್ತು.
ಸ್ಫೋಟದ ಪ್ರಯತ್ನ ವಿಫಲ; ತಾಲಿಬಾನ್ನ ಆಂತರಿಕ ಸಚಿವಾಲಯದ ವಕ್ತಾರರು ಹೇಳಿದಂತೆ, ಭಯೋತ್ಪಾದಕರು ಸ್ಫೋಟಕ ತುಂಬಿದ ವಾಹನದೊಂದಿಗೆ ಗುರುದ್ವಾರದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು, ಆದರೆ ಅದು ದೇಗುಲವನ್ನು ತಲುಪುವ ಮೊದಲು ದಾಳಿಯನ್ನು ವಿಫಲಗೊಳಿಸಲಾಯಿತು ಎಂದಿದ್ದಾರೆ.
ಇಸ್ಲಾಮಿಕ್ ಸ್ಟೇಟ್ಸ್ ಖೊರಾಸನ್ ಪ್ರಾಂತ್ಯ (ISKP) ತನ್ನ ಪ್ರಚಾರ ತಾಣದಲ್ಲಿ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಯ ಎಚ್ಚರಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.
ಸುದ್ದಿ ವಾಹಿನಿಯಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಇಸ್ಲಾಮಿಕ್ ಸ್ಟೇಟ್ಸ್ ಆಕ್ರೋಶ ವ್ಯಕ್ತಪಡಿಸಿತ್ತು. ಮಾರ್ಚ್ 2020 ರಲ್ಲಿ ಸಿಖ್ ದೇವಾಲಯದ ಮೇಲಿನ ದಾಳಿ ಮಾದರಿಯಲ್ಲಿದೆ, ಅಂತಹ ಹೆಚ್ಚಿನ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ.
ಮುಸ್ಲಿಂ ಬಹುಸಂಖ್ಯಾತ ಅಫ್ಘಾನಿಸ್ತಾನದಲ್ಲಿ ಸಿಖ್ಖರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ, ದೇಶವು ತಾಲಿಬಾನ್ ವಶವಾಗುವ ಮೊದಲು ಸುಮಾರು 300 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದವು.