ತಮ್ಮ ಮನೆಗೆ ಬೆಂಕಿ ಹಚ್ಚುತ್ತಿರುವ ಜನ, ಕಾರಣ ಮಾತ್ರ ಕರುಣಾಜನಕ
ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವ ಜನ, ಕಾಣದ ಊರಿಗೆ ಪ್ರಯಾಣ ಬೆಳೆಸಲು ಸಿದ್ಧತೆ. ಅರೆರೆ ಇದೆಂತಹ ಹುಚ್ಚಾಟ ಎನ್ನಬೇಡಿ. ಇದು ಅರ್ಮೇನಿಯ-ಅಜೆರ್ಬೈಜಾನ್ ಮಧ್ಯೆ ನಡೆದ ಯುದ್ಧದ ಪರಿಣಾಮ. ಅರ್ಮೇನಿಯ-ಅಜೆರ್ಬೈಜಾನ್ ಯುದ್ಧಕ್ಕೆ ತಾತ್ಕಾಲಿಕವಾಗಿ ಅಂತ್ಯ ಹಾಡಲಾಗಿದೆ. ಆದರೆ ಯುದ್ಧ ಮುಗಿದ ನಂತರ ಒಂದೊಂದೇ ಅಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ.
2
ತಿಂಗಳ
ಕಾಲ
ಬದ್ಧ
ಶತ್ರುಗಳ
ರೀತಿ
ಕಿತ್ತಾಡಿದ
ಎರಡೂ
ದೇಶಗಳ
ಮಧ್ಯೆ
ಶಾಂತಿ
ಒಪ್ಪಂದ
ಏರ್ಪಟ್ಟಿದೆ.
ಇನ್ನು
ಒಪ್ಪಂದದ
ಅನ್ವಯ
ಅರ್ಮೇನಿಯ
ಮೂಲ
ನಿವಾಸಿಗಳು
ಕರಬಾಖ್
ಪ್ರದೇಶವನ್ನ
ತೊರೆಯಬೇಕಿದೆ.
ಶತ
ಶತಮಾನಗಳಿಂದಲೂ
ಇಲ್ಲೇ
ಬದುಕಿನ
ಕ್ಷಣಗಳನ್ನ
ಕಳೆದಿದ್ದ
ಸಾವಿರಾರು
ಕುಟುಂಬಗಳು
ಒಪ್ಪಂದಕ್ಕೆ
ತಲೆಬಾಗಿ
ಜಾಗ
ತೊರೆಯುವ
ಸಿದ್ಧತೆಯಲ್ಲಿದ್ದಾರೆ.
ಸೋವಿಯತ್
ರಷ್ಯಾ
ಭಾಗವಾಗಿದ್ದ
ಈ
ಜಾಗದಲ್ಲಿ
ಅರ್ಮೇನಿಯ
ಹಾಗೂ
ಅಜೆರ್ಬೈಜಾನ್
ಜನ
ಸಹೋದರ
ಭಾವನೆಯಿಂದ
ಬದುಕಿದ್ದರು.
ಆದರೆ
1994ರಲ್ಲಿ
ನಗೊರ್ನೊ-ಕರಬಾಖ್
ಪ್ರದೇಶಕ್ಕಾಗಿ
ಎರಡೂ
ರಾಷ್ಟ್ರಗಳ
ನಡುವೆ
ಹೊತ್ತಿದ್ದ
ಯುದ್ಧದ
ಬೆಂಕಿ
ಇನ್ನೂ
ಆರಿಲ್ಲ.
2
ತಿಂಗಳ
ಹಿಂದೆ
ಇಬ್ಬರೂ
ಮತ್ತೆ
ಹೊಡೆದಾಡಿದ್ದರು.
ಈ
ಯುದ್ಧಕ್ಕೆ
ತಾತ್ಕಾಲಿಕ
ಅಂತ್ಯ
ಹಾಡಿ
ಕದನ
ವಿರಾಮ
ಘೋಷಿಸಲಾಗಿದೆ.
ಒಪ್ಪಂದದ ಅನ್ವಯ ಕರಬಾಖ್ನಿಂದ ಸಾವಿರಾರು ಅರ್ಮೇನಿಯನ್ನರು ಜಾಗ ಖಾಲಿ ಮಾಡಬೇಕಿದೆ. ಹೀಗೆ ಹುಟ್ಟಿ ಬೆಳೆದ ಜಾಗವನ್ನು ಬಿಡುವ ಮುನ್ನ ತಮ್ಮದೇ ಮನೆಗಳಿಗೆ ಅರ್ಮೇನಿಯನ್ನರು ಬೆಂಕಿ ಹಚ್ಚುತ್ತಿದ್ದಾರೆ. ವಸ್ತುಗಳನ್ನೆಲ್ಲಾ ಮನೆಯಿಂದ ಖಾಲಿ ಮಾಡಿದ ಬಳಿಕ ಅರ್ಮೇನಿಯ ಮೂಲ ನಿವಾಸಿಗಳು ಸಾವಿರಾರು ಕನಸುಗಳೊಂದಿಗೆ ಕಟ್ಟಿದ್ದ ತಮ್ಮದೇ ಮನೆಗಳಿಗೆ ಬೆಂಕಿ ಇಡುತ್ತಿದ್ದಾರೆ. ಊರು ತೊರೆಯುವ ಮುನ್ನ ತಮ್ಮ ಮನೆ ಬೇರೆಯವರ ವಶವಾಗುವುದನ್ನು ತಪ್ಪಿಸುವುದಕ್ಕೆ ಕರಬಾಖ್ ಪ್ರದೇಶದ ಸಾವಿರಾರು ಮನೆಗಳನ್ನು ಹೀಗೆ ಸುಟ್ಟು ಹಾಕಲಾಗುತ್ತಿದೆ.
ಊರು ತೊರೆಯುವ ಮುನ್ನ ಕಂಬನಿ
ಹುಟ್ಟಿದ ಊರು ತೊರೆಯುವ ಪ್ರತಿಯೊಬ್ಬರಿಗೂ ಕಾಡುವಂತೆ ಅಸಮಾನ್ಯ ನೋವು ಅರ್ಮೇನಿಯ ಜನರನ್ನು ಕಾಡುತ್ತಿದೆ. ಕರಬಾಖ್ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಇವರು ವಾಸ ಇದ್ದರು. ಆದರೆ ಅದ್ಯಾವುದೋ ರಾಜಕೀಯ ಒತ್ತಡಕ್ಕೆ, ಒಪ್ಪಂದಕ್ಕೆ ತಮ್ಮ ತಮ್ಮ ಊರನ್ನು ತೊರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನೂ ಟ್ರಕ್ಗೆ ಹೇರಿಕೊಂಡು, ಜಾಗ ಖಾಲಿ ಮಾಡುತ್ತಿದ್ದಾರೆ. ಹೀಗೆ ಊರು ತೊರೆಯುವ ಮುನ್ನ ಕಣ್ಣೀರು ಹಾಕುತ್ತಿರುವ ಜನ, ತಮ್ಮ ಸೋರಿನತ್ತ ಕಂಬನಿ ತುಂಬಿದ ಕಂಗಳಿಂದ ಕೊನೇ ನೋಟ ಬೀರಿ ಗುಳೆ ಹೋಗುತ್ತಿದ್ದಾರೆ. ಇಂತಹ ದೃಶ್ಯಗಳು ಕರಬಾಖ್ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಒಪ್ಪಂದದಂತೆ ನವೆಂಬರ್ 15ರ ಒಳಗಾಗಿ ಕರಬಾಖ್ನಿಂದ ಅರ್ಮೇನಿಯನ್ನರು ಜಾಗ ಖಾಲಿ ಮಾಡಬೇಕು.
ಯುದ್ಧ ನಿಂತರೂ ಹೊತ್ತಿ ಉರಿಯುತ್ತಿದೆ ಅರ್ಮೇನಿಯ ರಾಜಧಾನಿ
ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು.
ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.
ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಯುದ್ಧ ಆರಂಭವಾದ ದಿನದಿಂದಲೇ ವಿಶ್ವದ ಹಲವು ದೇಶಗಳ ನಾಯಕರು ಶಾಂತಿ ಮಾತುಕತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ರಷ್ಯಾ ಜೊತೆ ನಡೆದ ಮಾತುಕತೆಗೆ ಬೆಲೆ ಕೊಟ್ಟು ಯುದ್ಧ ನಿಲ್ಲಿಸುತ್ತಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿರಬಹುದು. ಆದರೆ ತಿಂಗಳ ಹಿಂದೆಯೂ ಇದೇ ರೀತಿ ಶಾಂತಿ ಒಪ್ಪಂದ ನಡೆದಿತ್ತು.
ಖದ್ದು ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಉನ್ನತ ಮಟ್ಟದ ಸಭೆ ನಡೆದು ಯುದ್ಧ ನಿಲ್ಲಿಸಲು ಒಪ್ಪಿಸಿದ್ದರು. ಆದರೆ ಹೀಗೆ ಶಾಂತಿ ಮಾತುಕತೆ ನಡೆದು 1 ದಿನ ಕಳೆಯುವ ಒಳಗೆ ಎರಡೂ ರಾಷ್ಟ್ರಗಳು ಮತ್ತೆ ಕಿತ್ತಾಡಿದ್ದವು. ಭೀಕರವಾದ ದಾಳಿ, ಪ್ರತಿದಾಳಿಯೂ ನಡೆದಿತ್ತು. ಈಗ ಮತ್ತೆ ರಷ್ಯಾ ನೇತೃತ್ವದಲ್ಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಕದನ ವಿರಾಮಕ್ಕೆ ಒಪ್ಪಿದ್ದು, ದಿಢೀರ್ ಯುದ್ಧ ಸ್ಫೋಟಿಸುವ ಸಾಧ್ಯತೆ ಇದೆ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ.
ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿವೆ.
Recommended Video
ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ.
ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.