ಪಾಕ್ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರದಂದು ಅಲ್ಲಿನ ಸಂಸತ್ ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದೇನು ಎಂಬುದರ ಪ್ರಮುಖ ಅಂಶಗಳು ಇಲ್ಲಿವೆ.
* ನಾನು ನಿನ್ನೆ ಮೋದಿ ಅವರಿಗೆ ಕರೆ ಮಾಡಲು ಯತ್ನಿಸಿದೆ- ಸಂದೇಶ ಕಳುಹಿಸಲು ಪ್ರಯತ್ನಿಸಿದೆ- ಈ ನಡೆ ಇನ್ನಷ್ಟು ಮುಂದುವರಿದರೆ ಭಾರತ ಅಥವಾ ಪಾಕಿಸ್ತಾನ ಇಬ್ಬರಿಗೂ ಅನುಕೂಲ ಇಲ್ಲ.
* ಕ್ರೀಡಾಳುವಾಗಿ ನನ್ನ ಪ್ರವಾಸಗಳ ಮೂಲಕ ಭಾರತದ ಬಗ್ಗೆ ಗೊತ್ತಿದೆ ಮತ್ತು ಅಲ್ಲಿ ನನಗೆ ಸ್ನೇಹಿತರಿದ್ದಾರೆ- ಮತ್ತು ಅಲ್ಲಿರುವ ಬಹಳ ಮಂದಿ ಸದ್ಯಕ್ಕೆ ಭಾರತ ಸರಕಾರ ಅನುಸರಿಸುತ್ತಿರುವ ತಂತ್ರವನ್ನು ಒಪ್ಪವುದಿಲ್ಲ ಮತ್ತು ಇದರಲ್ಲಿ ಲೋಪಗಳಿವೆ ಎಂದು ಮುಂದೆ ತಿಳಿದುಕೊಳ್ಳುತ್ತಾರೆ.
'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ'
* ಆತ್ಮಹತ್ಯಾ ದಾಳಿಗಳು ಧರ್ಮದ ಕಾರಣಕ್ಕೆ ಆಗುವುದಲ್ಲ. 9/11ರ ದಾಳಿಗೂ ಮುಂಚೆ ಅತಿ ಹೆಚ್ಚಿನ ಆತ್ಮಹತ್ಯಾ ದಾಳಿಗಳು ನಡೆಸಿರುವುದು ತಮಿಳು ಟೈಗರ್ಸ್ ಮತ್ತು ಅವರು ಹಿಂದೂಗಳು. ಆದರೆ ಅದು ಕೂಡ ಧರ್ಮದ ಕಾರಣಕ್ಕಲ್ಲ. ಹತಾಶೆಯ ಕಾರಣಕ್ಕೆ ಹಾಗೆ ಮಾಡಿದರು.
* ನಾನು ನಿನ್ನೆ ಭಾರತೀಯ ಪ್ರಧಾನಿ ಮೋದಿ ಜತೆ ಮಾತನಾಡಲು ಯತ್ನಿಸಿದೆ- ಸಂಜೆ ನಾನು ಟರ್ಕಿ ಅಧ್ಯಕ್ಷರಾ ಜತೆಗೆ ಈ ಬಗ್ಗೆ ಮಾತನಾಡಲಿದ್ದೇನೆ. ಆದರೆ ದಯವಿಟ್ಟು ಇದನ್ನ ನಮ್ಮ ಕಡೆಯ ದೌರ್ಬಲ್ಯ ಎಂದುಕೊಳ್ಳಬೇಡಿ.
ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ
* ಇದಕ್ಕಿಂತ ಮುಂದೆ ತೆಗೆದುಕೊಂಡು ಹೋಗಬೇಡಿ ಎಂದು ಹಿಂದೂಸ್ತಾನಕ್ಕೆ ಹೇಳಕ್ಕೆ ಬಯಸ್ತೀನಿ- ಒಂದು ವೇಳೆ ಹಾಗಾದರೆ ಪಾಕಿಸ್ತಾನದ ಬಳಿ ತಿರುಗೇಟು ನೀಡದೆ ಬೇರೆ ಆಯ್ಕೆಗಳಿರುವುದಿಲ್ಲ.
The moment Pakistan Prime Minister Imran Khan told Parliament that a peace gesture to India its pilot Wing Commander Abhinandan will be released tomorrow
— omar r quraishi (@omar_quraishi) 28 February 2019
Also note that all MPs thumped their desks in approval pic.twitter.com/DS4K8NcRd3
* ಶಾಂತಿಯ ದ್ಯೋತಕವಾಗಿ ಪಾಕಿಸ್ತಾನವು ನಾಳೆ (ಶುಕ್ರವಾರ) ಭಾರತದ ಪೈಲಟ್ ಅನ್ನು ಬಿಡುಗಡೆ ಮಾಡಲಿದೆ.
ಹೀಗೆ ಘೋಷಣೆ ಮಾಡುತ್ತಿದ್ದಂತೆ ಸಂಸತ್ ನ ಸದಸ್ಯರು ಮೇಜು ಕುಟ್ಟಿ ಸ್ವಾಗತ ಕೋರಿದರು.