ಮಂಗಳ ಅಂಗಳಕ್ಕೆ ಹಾರಲು ಲಕ್ಷಾಂತರ ಭಾರತೀಯರಿಗೆ ಟಿಕೆಟ್!
ನ್ಯೂಯಾರ್ಕ್, ನವೆಂಬರ್ 09: 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿರುವ ಸುದ್ದಿ ತಿಳಿದಿರಬಹುದು. ಆದರೆ, 2018ರಲ್ಲಿ ಮಂಗಳಕ್ಕೆ ತೆರಳಲಿರುವ ನಾಸಾ ನೌಕೆಗೆ ಭಾರತದಿಂದ ಲಕ್ಷಾಂತರ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ.
ಮಂಗಳನ ಅಂಗಳದಲ್ಲಿ ಬುದ್ಧನ ವಿಗ್ರಹ ಇಟ್ಟವರು ಯಾರು?
ಸರಿ ಸುಮಾರು 1,38,899 ಮಂದಿ ಭಾರತೀಯರು ಮಂಗಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ. 2018ರ ಮೇ 5ರಂದು ನಾಸಾದ ಇನ್ ಸೈಟ್ (Interior Exploration using Seismic Investigations, Geodesy and Heat Transport) ಬಾಹ್ಯಾಕಾಶ ಯೋಜನೆಯ ನೌಕೆ ಮಂಗಳನಲ್ಲಿಗೆ ತೆರಳಲಿದೆ. ಈ ನೌಕೆಗೆ ಲಕ್ಷಾಂತರ ಮಂದಿ ಟಿಕೆಟ್ ಪಡೆದಿದ್ದಾರೆ.
ಮಂಗಳನ ಅಂಗಳಕ್ಕೆ ಹೋಗಲು ಸಾಧ್ಯವೇ?: ನಾಸಾದ ಅಂತರ್ಜಾಲ ತಾಣಕ್ಕೆ ತೆರಳಿ ಹೆಸರು ನೋಂದಣಿಸಿ, ಅಲ್ಲಿ ಕೇಳುವ ಮಾಹಿತಿ ದಾಖಲಿಸಿ ಆಯ್ಕೆಯಾದವರಿಗೆ ಒಂದು ಆನ್ ಲೈನ್ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ.
ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ
ಹೀಗೆ ಆಯ್ಕೆಯಾದ ಲಕ್ಷಾಂತರ ಮಂದಿಯ ಹೆಸರುಗಳನ್ನು ಸಿಲಿಕಾನ್ ವೇಫರ್ ಮೈಕ್ರೋಚಿಪ್ ವೊಂದರಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಬಾಹ್ಯಾಕಾಶ ನೌಕೆಯಲ್ಲಿರಿಸಿ ಮಂಗಳನಲ್ಲಿಗೆ ಕಳುಹಿಸಿಕೊಡಲಾಗುತ್ತದೆ.
ನಾಸಾ ಇಲ್ಲಿ ತನಕ 2,429,807 ಅರ್ಜಿಗಳನ್ನು ವಿಶ್ವದೆಲ್ಲೆಡೆಯಿಂದ ಪಡೆದುಕೊಂಡಿತ್ತು. ಯುನೈಟೆಡ್ ಸ್ಟೇಟ್ಸ್ ನಿಂದ 6,76,773 ಅರ್ಜಿ ಬಂದಿದ್ದರೆ, ಚೀನಾದಿಂದ 2,62,752 ಅರ್ಜಿಗಳು ಬಂದಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.
ನಿಜಕ್ಕೂ ಆಯ್ಕೆಯಾದವರು: ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ , ಫ್ಲೋರಿಡಾದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಡಾಕ್ಟರೇಟ್ ಪಡೆದಿರುವ ತರಣಜಿತ್ ಸಿಂಗ್ ಭುಟಿಯಾ, ದುಬೈನಲ್ಲಿ ನೆಲೆಸಿರುವ ರಿತಿಕಾ ಸಿಂಗ್ ಮಂಗಳನಲ್ಲಿಗೆ ತೆರಳಲು ಆಯ್ಕೆಯಾದವರಾಗಿದ್ದಾರೆ.