ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಂಡಿತ್ಯ ವಂಶಪಾರಂಪರ್ಯವಾಗಿ ಬರುವುದಲ್ಲ: ರಾಹುಲ್ ಗೆ ಜೇಟ್ಲಿ ಟಾಂಗ್!

|
Google Oneindia Kannada News

Recommended Video

ರಾಹುಲ್ ಗಾಂಧಿ ವಿರುದ್ಧ ಟ್ವಿಟ್ಟರ್ ನಲ್ಲಿ ಜೇಟ್ಲಿ ಟಾಂಗ್! | Oneindia kannada

ನವದೆಹಲಿ, ಜೂನ್ 14: "ಪಾಂಡಿತ್ಯ ಎಂಬುದು ವಂಶಪಾರಂಪರ್ಯವಾಗಿ ಬರುವಂಥದ್ದಲ್ಲ. ಅದನ್ನು ನಾವೇ ಕಲಿತು, ಬೆಳೆಸಿಕೊಳ್ಳಬೇಕು" ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಟಾಂಗ್ ನೀಡಿದ್ದಾರೆ!

"ಕೋಕಾಕೋಲಾ ಕಂಡುಹಿಡಿದವನು ಮೊದಲು ನಿಂಬೆಹಣ್ಣಿನ ಪಾನಕ ಮಾರುತ್ತಿದ್ದ" ಎಂಬ ಹೇಳಿಕೆ ನೀಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದ ರಾಹುಲ್ ಗಾಂಧಿಯವರನ್ನು ಅರುಣ್ ಜೇಟ್ಲಿ ಅಣುಕಿಸಿದರು.

ಕೋಕಾ ಕೋಲ ಕಂಡುಹಿಡಿದಿದ್ದು ನಿಂಬೆ ಪಾನಕ ಮಾರಾಟಗಾರ: ರಾಹುಲ್ ಗಾಂಧಿಕೋಕಾ ಕೋಲ ಕಂಡುಹಿಡಿದಿದ್ದು ನಿಂಬೆ ಪಾನಕ ಮಾರಾಟಗಾರ: ರಾಹುಲ್ ಗಾಂಧಿ

ದಿ ಡಿಸ್ಕವರಿ ಆಫ್ ಇಂಡಿಯಾ ಎಂಬ ಮಹಾನ್ ಕೃತಿಯನ್ನು ನೀಡಿದವರ ಮರಿಮೊಮ್ಮಗ ಮುಂದೊಂದು ದಿನ 'ದಿ ರೀಡಿಸ್ಕವರಿ ಆಫ್ ಕೋಕಾ ಕೋಲಾ' ಎಂಬ ಕೃತಿಯನ್ನು ನೀಡುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ" ಎಂದು ಸಹ ಅವರು ಛೇಡಿಸಿದ್ದಾರೆ.

Wisdom cant be inherited: Jaitley to Rahul Gandhi

ಕಾಂಗ್ರೆಸ್ ಮೋದಿಯವರನ್ನು ವಿರೋಧಿಸುವುದನ್ನೇ ತನ್ನ ಸಿದ್ಧಾಂತವನ್ನಾಗಿಸಿಕೊಂಡಿದ್ದನ್ನೂ ಅವರು ಟ್ವಿಟ್ಟರ್ ನಲ್ಲಿ ಅಣುಕಿಸಿದರು. 'ಕಾಂಗ್ರೆಸ್ ಸಿದ್ಧಾಂತರಹಿತವಾಗುತ್ತಿದೆಯಾ? ಅಥವಾ ಮೋದಿಯವರನ್ನು ವಿರೋಧಿಸುವುದೇ ಅದರ ಸಿದ್ಧಾಂತವಾ?' ಎಂದು ಅವರು ಪ್ರಶ್ನಿಸಿದ್ದಾರೆ.

English summary
Union Minister and Bharatiya Janata Party (BJP) leader Arun Jaitley on Wednesday criticised Congress President Rahul Gandhi over 'Coca-Cola owner sold Shikanji' remark, saying "wisdom has to be acquired through learning and cannot be inherited."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X