ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆರ್ ಎಸ್ ಎಸ್ ನ ನೂತನ ಸರಕಾರ್ಯವಾಹ?
ನಾಗ್ಪುರ, ಮಾರ್ಚ್ 03: ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಈ ಸ್ಥಾನ ಅಲಂಕರಿಸಿರುವ ಹಿರಿಯರಾದ ಭೈಯ್ಯಾಜಿ ಜೋಶಿ ಅವರು ಅನಾರೋಗ್ಯದ ಕಾರಣ ಈ ಸ್ಥಾನದಿಂದ ಹಿಂದೆ ಸರಿಯಲಿದ್ದು, ಈ ಸ್ಥಾನವನ್ನು ಹೊಸಬಾಳೆಯವರು ಅಲಂಕರಿಸಲಿದ್ದಾರೆ.
ಮೋಹನ್ ಭಾಗ್ವತ್ ಸೇನೆ ಕುರಿತ ಹೇಳಿಕೆಗೆ ಆರೆಸ್ಸೆಸ್ ಸ್ಪಷ್ಟನೆ
ಮಾರ್ಚ್ 9 ರಿಂದ 11 ರವರೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್)ದಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಳೆದ ಒಂಭತ್ತು ವರ್ಷಗಳಿಂದ ಈ ಸ್ಥಾನದಲ್ಲಿದ್ದ ಭೈಯ್ಯಾಜಿ ಜೋಶಿಯವರು ಎಪ್ಪತ್ತರ ಹೊಸ್ತಿಲಲ್ಲಿದ್ದು, ವಿಶ್ರಾಂತಿಯ ಅಗತ್ಯವಿರುವುದರಿಂದ ತಮ್ಮ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ. ಸರಕಾರ್ಯವಾಹ ಸ್ಥಾನವು ಆರ್ ಎಸ್ ಎಸ್ ನ ಅತ್ಯುನ್ನತ ಹುದ್ದೆಯಾದ ಸರಸಂಘಚಾಲಕ್ ಹುದ್ದೆಯ ನಂತರದ ಸ್ಥಾನವಾಗಿದೆ. 2015 ರಲ್ಲೇ ಈ ಸ್ಥಾನಕ್ಕೆ ಹೊಸಬಾಳೆ ಅವರ ಹೆಸರು ಪ್ರಸ್ತಾಪವಾಗಿತ್ತಾದರೂ, ಹೊಸಬಾಳೆಯವರೇ ಇದಕ್ಕೆ ಒಪ್ಪಿರಲಿಲ್ಲ.
ಅಂದು ರಥಯಾತ್ರೆ, ಚುನಾವಣಾ ಹೊಸ್ತಿಲಲ್ಲಿ ಇಂದು RSS ರಾಮರಾಜ್ಯ ಯಾತ್ರೆ