'ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟದಿದ್ದರೆ ಬಿಜೆಪಿಯನ್ನು ಸೋಲಿಸುತ್ತೇವೆ'
ಲಖನೌ, ಜೂನ್ 5: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದಿದ್ದರೆ ರಾಮಮಂದಿರ ಕಟ್ಟಲೇಬೇಕು ಎಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಿರುವ ರಾಮ ಜನ್ಮಭೂಮಿ ನ್ಯಾಸ್ ಸಂಘಟನೆ ಮುಖ್ಯಸ್ಥ ಮಹಾಂತ ಪರಮಹಂಸ ದಾಸ್ ಆಗ್ರಹಿಸಿದ್ದಾರೆ.
ಒಂದು ವೇಳೆ ಬಿಜೆಪಿ ಅದರಲ್ಲಿ ವಿಫಲವಾದರೆ ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಏರ್ಸೆಲ್- ಮ್ಯಾಕ್ಸಿಸ್ ಪ್ರಕರಣ: ಬಂಧನ ಭೀತಿಯಿಂದ ಚಿದಂಬರಂ ನಿರಾಳ
ಅಯೋಧ್ಯೆಯಲ್ಲಿ ಮಾತನಾಡಿದ ದಾಸ್ ಅವರು, ಬಿಜೆಪಿ 2019ರಲ್ಲಿ ಮತ್ತೆ ಅಧಿಕಾರಕ್ಕೆ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದರೆ, ಅವರು ರಾಮ ಮಂದಿರ ನಿರ್ಮಿಸಬೇಕು.
ಇಲ್ಲದಿದ್ದರೆ ನಾವು ಬಿಜೆಪಿ ವಿರುದ್ಧ ಚಳವಳಿ ಸಂಘಟಿಸಿ ಅದನ್ನು ಖಂಡಿತವಾಗಿಯೂ ಸೋಲಿಸುತ್ತೇವೆ ಎಂದು ದಾಸ್ ಎಚ್ಚರಿಸಿದ್ದಾರೆ.
If they (BJP) want to come in power again (in 2019) then they have to build the Ram Temple, else we will start a movement & make sure they are defeated: Mahant Paramhans Das on MA Naqvi's statement that development will be only issue in 2019 elections. #Ayodhya pic.twitter.com/EFcU8VPMx5
— ANI UP (@ANINewsUP) 5 June 2018
ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರ 'ಅಭಿವೃದ್ಧಿ' ಹೇಳಿಕೆ ಬೆನ್ನಲ್ಲೇ ಮಹಾಂತ ದಾಸ್ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ನಕ್ವಿ ಅವರು, ಬಿಜೆಪಿಯ ಮುಂದಿನ ಲೋಕಸಭೆ ಚುನಾವಣೆಯ ಮಂತ್ರ 'ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿ' ಮಾತ್ರವೇ ಆಗಿರುತ್ತದೆ. ಹಿಂದುತ್ವ ಮತ್ತು ದೇವಸ್ಥಾನಗಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದ್ದರು.