ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಟ್ರಾನಿಕ್ ಮಾಧ್ಯಮ ಹೊಸಕಿಹಾಕುತ್ತೇನೆ : ಶಿಂಧೆ

By Prasad
|
Google Oneindia Kannada News

ನವದೆಹಲಿ, ಫೆ. 25 : ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಮತ್ತೆ ತಮ್ಮ ಆಚಾರವಿಲ್ಲದ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಈ ಬಾರಿ ಅವರ ಬಾಯಿಗೆ ಆಹಾರವಾಗಿರುವುದು ಎಲೆಕ್ಟ್ರಾನಿಕ್ ಮಾಧ್ಯಮ.

"ಕಾಂಗ್ರೆಸ್ ವಿರುದ್ಧ ಸತತವಾಗಿ ಅಪಪ್ರಚಾರ ಮಾಡುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಹೊಸಕಿಹಾಕಲಾಗುವುದು" ಎಂದು ಸೊಲ್ಲಾಪುರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವರು ಅಬ್ಬರಿಸಿದ್ದರೆಂದು ವರದಿಯಾಗಿತ್ತು. ಮಾಧ್ಯಮದ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕುರಿತು ಅವರಾಡಿದ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, "ನಾನು ಆ ರೀತಿ ಹೇಳಿಯೇ ಇಲ್ಲ" ಎಂದು ಸೋಮವಾರ ಸಮರ್ಥನೆ ನೀಡಿದ್ದಾರೆ.

"ಎಲೆಕ್ಟ್ರಾನಿಕ್ ಮಾಧ್ಯಮವನ್ನು ಹೊಸಕಿಹಾಕುತ್ತೇನೆ ಅಥವಾ ಸರ್ವನಾಶ ಮಾಡುತ್ತೇನೆ ಅಥವಾ ಕೆಲವೊಂದು ಪ್ರದೇಶಗಳಲ್ಲಿ ನಡೆದ ಕೋಮುಗಲಭೆಗೆ ಎಲೆಕ್ಟ್ರಾನಿಕ್ ಮಾಧ್ಯಮವೇ ಕಾರಣ ಎಂದು ಎಲ್ಲಿಯೂ ಹೇಳಿಲ್ಲ" ಎಂದು ತಮ್ಮ ಮೇಲೆ ಮಾಡಿರುವ ಆರೋಪವನ್ನು ನಿರಾಕರಿಸಿರುವ ಅವರು, ತಾವು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಸೋಷಿಯಲ್ ಮೀಡಿಯಾ ಮೇಲೆ ಎಂದು ಹೇಳಿಕೆ ನೀಡಿದ್ದಾರೆ.

Will crush electronic media : Sushil Kumar Shinde

"ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ನೆಲೆಸಿರುವ ಈಶಾನ್ಯ ಭಾರತದ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ದಾಳಿಗೆ ಸೋಷಿಯಲ್ ಮೀಡಿಯಾನೇ ಕಾರಣ. ಸೋಷಿಯಲ್ ಮೀಡಿಯಾ ಅನಗತ್ಯವಾಗಿ ಉರಿಯುತ್ತಿರುವ ಬೆಂಕಿಗೆ ತುಪ್ಪು ಸುರಿಯುತ್ತಿದೆ" ಎಂದು ಸಾಮಾಜಿಕ ತಾಣಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಅವರು ನುಡಿದಿದ್ದಾರೆ.

ಈಶಾನ್ಯ ಭಾರತದ ವಿದ್ಯಾರ್ಥಿಗಳ ಮೇಲಾಗಿರುವ ದಾಳಿ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ನಡೆಸಲಾಗಿರುವ ಚುನಾವಣಾ ಸಮೀಕ್ಷೆಗಳಲ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಪಕ್ಷವನ್ನು ಎನ್‌ಡಿಎ ಅಂಗಪಕ್ಷಗಳು ಹಿಂದಿಕ್ಕಲಿವೆ ಎಂದು ವರದಿ ಬಂದಿರುವುದು ಮಾಧ್ಯಮದ ಮೇಲಿನ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲ ಸಮೀಕ್ಷೆಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ವರದಿಯಾಗಿದೆ.

ಯುಪಿಎ ಸರಕಾರಕ್ಕೇ ಮುಜುಗರವಾಗುವಂತೆ ಸುಶೀಲ್ ಕುಮಾರ್ ಶಿಂಧೆ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ, ಶಿಂಧೆ ಅವರನ್ನು ಗೃಹ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕೂಗು ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ. ಇಂಥ ಬೇಜವಾಬ್ದಾರಿ ಹೇಳಿಕೆ ನೀಡುವ ಗೃಹ ಸಚಿವರು ಆ ಸ್ಥಾನದಲ್ಲಿರುವುದಕ್ಕೆ ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. [ಶಿಂಧೆ ಸರ್ವಾಧಿಕಾರಿಯೆ?]

ಒಂದು ತಿಂಗಳ ಹಿಂದೆ, ಮಹಾರಾಷ್ಟ್ರದವರೇ ಆದ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಪ್ರಧಾನಿಯಾದರೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೇ ಮುಜುಗರವಾಗುವಂತೆ ಶಿಂಧೆ ಮಾಡಿದ್ದರು. ಅದೇ ದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

English summary
Union home minister Sushil Kumar Shinde has created another controversy by saying he will crush electronic media, if they continue false propoganda against Congress. On Monday he has denied that he never said like that and said his target was social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X