ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಈ ಇಬ್ಬರಲ್ಲಿ ಯಾರಿಗೆ?

|
Google Oneindia Kannada News

ರಾಜ್ಯಸಭೆಯಲ್ಲಿ ತಮ್ಮ ಪಕ್ಷದ ನಾಯಕರನ್ನಾಗಿ ಸೋನಿಯಾ ಗಾಂಧಿ ಯಾರನ್ನು ನೇಮಿಸಲಿದ್ದಾರೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಈ ಸಂಬಂಧ ಚರ್ಚೆಗಳು ಈಗಾಗಲೇ ಆರಂಭವಾಗಿವೆ.

ರಾಜ್ಯಸಭೆಯಲ್ಲಿ ಹಾಲೀ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್ ಅವರ ನಿವೃತ್ತಿ ಅವಧಿ ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಹಾಗಾಗಿ, ಸೋನಿಯಾ ಗಾಂಧಿ ಶೀಘ್ರವಾಗಿ ಈ ಹುದ್ದೆಗೆ ನಾಯಕರನ್ನು ನೇಮಿಸಬೇಕಿದೆ.

ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಪಂಡಿತ್ ನೆಹರು ಕಾರಣ: ಖರ್ಗೆ!ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಪಂಡಿತ್ ನೆಹರು ಕಾರಣ: ಖರ್ಗೆ!

ಸದ್ಯ ಕಾಂಗ್ರೆಸ್ ಪಕ್ಷ 37 ಸದಸ್ಯರನ್ನು ಹೊಂದಿದೆ. ಇದರಲ್ಲಿ ಎ.ಕೆ.ಆಂಟನಿ, ಪಿ.ಚಿದಂಬರಂ, ಆಸ್ಕರ್ ಫೆರ್ನಾಂಡಿಸ್, ದೀಪೇಂದರ್ ಸಿಂಗ್ ಹೂಡಾ, ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್, ಮನಮೋಹನ್ ಸಿಂಗ್ , ಕೆ.ಸಿ. ವೇಣುಗೋಪಾಲ್ ಮುಂತಾದ ಹಿರಿಯ ನಾಯಕರಿದ್ದಾರೆ.

 ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ? ಇಂದಿನಿಂದ ಬಜೆಟ್ ಅಧಿವೇಶನ: ಹೇಗಿರಲಿದೆ ಈ ಬಾರಿಯ ಕಲಾಪ?

ಆದರೆ, ಇವರಲ್ಲಿ ಯಾರನ್ನೂ ಸೋನಿಯಾ ಗಾಂಧಿ ಪರಿಗಣಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆಗೆ ಇಬ್ಬರು ಹಿರಿಯ ನಾಯಕರನ್ನು ಸೋನಿಯಾ ಅಂತಿಮ ಮಾಡಿದ್ದು, ಅವರಲ್ಲಿ ಒಬ್ಬರ ಹೆಸರನ್ನು ಸದ್ಯದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಆ ಎರಡು ಹೆಸರು, ಮುಂದೆ ಓದಿ..

ಈಗಿರುವ ಹಿರಿಯ ನಾಯಕರುಗಳ ಪೈಕಿ ಕೆಲವರು ಹೈಕಮಾಂಡ್ ಗೆ ಪತ್ರ ಬರೆದಿದ್ದರು

ಈಗಿರುವ ಹಿರಿಯ ನಾಯಕರುಗಳ ಪೈಕಿ ಕೆಲವರು ಹೈಕಮಾಂಡ್ ಗೆ ಪತ್ರ ಬರೆದಿದ್ದರು

ಈಗಿರುವ ಹಿರಿಯ ನಾಯಕರುಗಳ ಪೈಕಿ ಕೆಲವರು ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಇಷ್ಟು ದಿನವಾದರೂ ಪಕ್ಷದಲ್ಲಿ ಆಂತರಿಕವಾಗಿ ಅಷ್ಟೇನೂ ಬೆಳವಣಿಗೆಗಳು ಕಾಣುತ್ತಿಲ್ಲ ಎನ್ನುವ ಅಸಮಾಧಾನ ಇನ್ನೂ ಕೆಲವು ನಾಯಕರುಗಳಿಗಿದೆ. ಪತ್ರ ಬರೆದವರಲ್ಲಿ ಕೆಲವರು ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಹಾಗಾಗಿ, ಅತ್ಯಂತ ಜಾಗರೂಕತೆಯಿಂದ ಈ ಹುದ್ದೆಗೆ ಹೆಸರನ್ನು ಸೋನಿಯಾ ಗಾಂಧಿ ಅಂತಿಮಗೊಳಿಸಬೇಕಿದೆ.

ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ

ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ

ಕಳೆದ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಆ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ, ಖರ್ಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.

ಬಿಜೆಪಿ ಎದುರು ಬಂಡೆಯಂತೆ ನಿಂತಿದ್ದು ಮಲ್ಲಿಕಾರ್ಜುನ್ ಖರ್ಗೆ

ಬಿಜೆಪಿ ಎದುರು ಬಂಡೆಯಂತೆ ನಿಂತಿದ್ದು ಮಲ್ಲಿಕಾರ್ಜುನ್ ಖರ್ಗೆ

ತಮ್ಮ ಅಪಾರ ರಾಜಕೀಯ ಅನುಭವದಲ್ಲಿ ಖರ್ಗೆ ಅವರಿಗೆ ಬಯಸಿದ ಹುದ್ದೆಗಳು ಸಿಕ್ಕಿರಲಿಲ್ಲ. ಹಲವು ಬಾರಿ ಅವರ ಹೆಸರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿತ್ತು. ಕಾಂಗ್ರೆಸ್ ಮುಕ್ತ ಭಾರತ ಎಂದು ಬೀಗುತ್ತಿದ್ದ ಬಿಜೆಪಿ ಎದುರು ಬಂಡೆಯಂತೆ ನಿಂತಿದ್ದು ಮಲ್ಲಿಕಾರ್ಜುನ್ ಖರ್ಗೆ. ಹಾಗಾಗಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಖರ್ಗೆ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ..

ಹಿಮಾಚಲ ಪ್ರದೇಶದ ಆನಂದ್ ಶರ್ಮಾ

ಹಿಮಾಚಲ ಪ್ರದೇಶದ ಆನಂದ್ ಶರ್ಮಾ

ಇನ್ನೊಂದು ಕಡೆ ಸದ್ಯ ರಾಜ್ಯಸಭೆಯಲ್ಲಿ ಉಪಾಧ್ಯಕ್ಷರಾಗಿರುವ, ಹಿಮಾಚಲ ಪ್ರದೇಶದ ಆನಂದ್ ಶರ್ಮಾ ಕೂಡಾ ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ನಾಯಕರುಗಳ ಪೈಕಿ ಆನಂದ್ ಶರ್ಮಾ ಕೂಡಾ ಒಬ್ಬರು. ಹಾಗಾಗಿ, ಖರ್ಗೆ ಮತ್ತು ಶರ್ಮಾ ನಡುವೆ ತುರುಸಿನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

English summary
Who Is Going To Be Congress Leader In Rajya Sabha? Gulam Nabi Azad Term Will End In Feb'20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X