ಪಶ್ಚಿಮ ಬಂಗಾಳದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ವಿಗ್ರಹ ಧ್ವಂಸ!
ಜಾದವ್ಪುರ, ಮಾರ್ಚ್ 07: ತ್ರಿಪುರದಲ್ಲಿ ಲೆನಿನ್, ತಮಿಳುನಾಡಿನಲ್ಲಿ ಪೆರಿಯಾರ್ ವಿಗ್ರಹ ಧ್ವಂಸ ಪ್ರಕರಣ ನಡೆದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಕೋಲ್ಕತ್ತದ ಕಾಲಿಘಾಟ್ ನಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ.
ಲೆನಿನ್ ಪ್ರತಿಮೆ ಧ್ವಂಸವಾದ ಬೆನ್ನಲ್ಲೇ ತ್ರಿಪುರಾದಲ್ಲಿ ಹಿಂಸಾಚಾರ
ಕೋಲ್ಕತ್ತದ ಕಾಲಿಘಾಟ್ ನಲ್ಲಿದ್ದ ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
West Bengal: Bharatiya Jana Sangh founder Syama Prasad Mukherjee's bust vandalized in Jadavpur University pic.twitter.com/OHXAKNxdua
— ANI (@ANI) March 7, 2018
ಕಳೆದ ರಾತ್ರಿ(ಮಾ.6)ಯಷ್ಟೇ ತ್ರಿಪುರದಲ್ಲಿ ರಷ್ಯಾದ ಕ್ರಾಂತಿಕಾರಿ ಲೆನಿನ್ ಮತ್ತು ತಮಿಳುನಾಡಿನಲ್ಲಿ ಸಾಮಾಜಿಕ ಹೋರಾಟಗಾರ ಪೆರಿಯಾರ್(ಇವಿ ರಾಮಸಾಮಿ) ಅವರ ವಿಗ್ರಹವನ್ನು ಧ್ವಂಸಗೊಳಿಸಲಾಗಿತ್ತು.
ತಮಿಳುನಾಡು: ಪೆರಿಯಾರ್ ವಿಗ್ರಹ ಧ್ವಂಸ, ಇಬ್ಬರ ಬಂಧನ