ಕೊರೊನಾವೈರಸ್ ಶಿಷ್ಟಾಚಾರ ಪಾಲಿಸದಿದ್ದರೆ ಮತ್ತೆ ಲಾಕ್ಡೌನ್
ನವದೆಹಲಿ, ಜುಲೈ 06: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯು ಇನ್ನೂ ನಿಂತಿಲ್ಲ. ಕೊವಿಡ್-19 ಭೀತಿ ಇಲ್ಲದೇ ಶಿಷ್ಟಾಚಾರವನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸಿದರೆ ಮತ್ತೆ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಆರೋಗ್ಯ ಇಲಾಖೆ ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಖಾಚಿ ಎಚ್ಚರಿಕೆ ನೀಡಿದ್ದಾರೆ.
ಹಿಮಾಚಲ ಪ್ರದೇಶದ ಮನಾಲಿ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಕೊರೊನಾವೈರಸ್ ಸೋಂಕಿನ ಭಯವಿಲ್ಲದೇ ಓಡಾಡುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ಕೊವಿಡ್-19 ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿದ್ದಾರೆ.
"ಕೊರೊನಾವೈರಸ್ ಮಾರ್ಗಸೂಚಿಗಳ ಅಡಿ ಎಲ್ಲ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಲು ನಾವು ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ಶಿಷ್ಟಾಚಾರಗಳ ಪಾಲನೆ ಮಾಡಬೇಕು," ಎಂದು ಹಿಮಾಚಲ ಪ್ರದೇಶದ ಆರೋಗ್ಯ ಇಲಾಖೆ ರಾಜ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಖಾಚಿ ಹೇಳಿದ್ದಾರೆ.
ಕೊವಿಡ್-19
ಸಡಿಲಿಕೆ
ತೆರವುಗೊಳಿಸುವ
ಎಚ್ಚರಿಕೆ:
"ದೇಶದಲ್ಲಿ
ಲಾಕ್ಡೌನ್
ಸಡಿಲಗೊಳಿಸುತ್ತಿದ್ದಂತೆ
ಹಿಮಾಚಲ
ಪ್ರದೇಶದಲ್ಲಿ
ಜನಸಾಗರವೇ
ನೆರೆದಿದೆ.
ಕೊವಿಡ್-19
ಶಿಷ್ಟಾಚಾರ
ಮತ್ತು
ನಿಯಮಗಳ
ಉಲ್ಲಂಘನೆ
ಆಗುತ್ತಿರುವುದು
ಇಲ್ಲಿ
ಸ್ಪಷ್ಟವಾಗಿ
ಗೋಚರಿಸುತ್ತಿದೆ.
ಕೇಂದ್ರ
ಸರ್ಕಾರದ
ಸೂಚನೆಗಳು
ಪಾಲನೆ
ಆಗದಿದ್ದರೆ
ನಾವು
ಮತ್ತೆ
ಲಾಕ್ಡೌನ್
ಜಾರಿಗೊಳಿಸುತ್ತೇವೆ,"
ಎಂದು
ಕೇಂದ್ರ
ಆರೋಗ್ಯ
ಸಚಿವಾಲಯದ
ಜಂಟಿ
ಕಾರ್ಯದರ್ಶಿ
ಲಾವ್
ಅಗರ್ವಾಲ್
ಎಚ್ಚರಿಸಿದ್ದಾರೆ.
ಭಾರತದಲ್ಲಿ
ಕೊರೊನಾವೈರಸ್
ಅಂಕಿ-ಸಂಖ್ಯೆ:
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆಯಲ್ಲಿ
ಸ್ಥಿರತೆ
ಕಂಡು
ಬಂದಿದೆ.
ದೇಶದಲ್ಲಿ
ಒಂದೇ
ದಿನ
34,703
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದೆ.
ಇದೇ
ಅವಧಿಯಲ್ಲಿ
51,864
ಸೋಂಕಿತರು
ಗುಣಮುಖರಾಗಿದ್ದರೆ,
553
ಜನರು
ಪ್ರಾಣ
ಬಿಟ್ಟಿದ್ದಾರೆ.
ದೇಶದಲ್ಲಿ
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆ
3,06,19,932ಕ್ಕೆ
ಏರಿಕೆಯಾಗಿದ್ದು,
2,97,52,294
ಸೋಂಕಿತರು
ಗುಣಮುಖರಾಗಿದ್ದಾರೆ.
ಈವರೆಗೂ
4,03,281
ಸೋಂಕಿತರು
ಮಹಾಮಾರಿಗೆ
ಬಲಿಯಾಗಿದ್ದು,
4,64,357
ಸಕ್ರಿಯ
ಪ್ರಕರಣಗಳಿವೆ
ಎಂದು
ಕೇಂದ್ರ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಸಚಿವಾಲಯ
ಮಾಹಿತಿ
ನೀಡಿದೆ.