ಮತಾಂತರಗೊಂಡ ಎಲ್ಲರನ್ನೂ ಹಿಂದೂ ಧರ್ಮಕ್ಕೆ ತರ್ತೇವೆ
ಅಲಿಗಢ, ಫೆ. 10: ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಸುಮಾರು 15 ಕೋಟಿ ಜನರನ್ನು ಮಾತೃ ಧರ್ಮಕ್ಕೆ ವಾಪಸ್ ತರುವವರೆಗೂ ಘರ್ ವಾಪಸಿ ಕಾರ್ಯಕ್ರಮ ನಿಲ್ಲಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಆರ್ಯ ಸವಾಲು ಹಾಕಿದ್ದಾರೆ.
ಘರ್ ವಾಪಸಿ ಕಾರ್ಯಕ್ರಮ ಆರಂಭಿಸಿದ ಮೇಲೆ ನನಗೆ ಹಾಗೂ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ನಾವು ಹೆದರುವುದಿಲ್ಲ. ಹಿಂದೂಗಳ ಹಕ್ಕಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದರು. [ಮರು ಮತಾಂತರವೇಕೆ ತಪ್ಪು?]
ವಿಶ್ವ ಹಿಂದೂ ಪರಿಷತ್ ವತಿಯಿಂದ ಉತ್ತರ ಪ್ರದೇಶದ ಆಲಿಗಢ ಹಳೇ ನಗರದ ರಾಮಲೀಲಾ ಮೈದಾನದಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮಾವೇಶದಲ್ಲಿ ಸಾಧ್ವಿ ಪ್ರಾಚಿ ಅಭಿಪ್ರಾಯ ವ್ಯಕ್ತಪಡಿಸಿದರು. [ಅಸಂಬದ್ಧ ಹೇಳಿಕೆ ಒಪ್ಪಿದ ಷಾ]
ಭಾರತದಲ್ಲಿ ಇತರ ಸಮುದಾಯಗಳಿಗೆ ಹೋಲಿಸಿದರೆ ಹಿಂದೂಗಳ ಸಂಖ್ಯೆ ನಿರಂತರವಾಗಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಹಿಂದೂಗಳ ಜನಸಂಖ್ಯೆ ಹೆಚ್ಚುವವರೆಗೂ ಘರ್ ವಾಪಸಿ ಕಾರ್ಯಕ್ರಮ ಮುಂದುವರಿಸುವುದಾಗಿ ಹೇಳಿದರು. [ಸೈಫ್ ಅಲಿ ಖಾನ್ ಗರಂ]
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರು ಹುತಾತ್ಮರಾಗಿದ್ದಾರೆ. ಅವರೇ ನಿಜವಾದ ರಾಷ್ಟ್ರಪಿತರು ಎಂದು ಪ್ರತಿಪಾದಿಸಿದರು. [40 ಕ್ರೈಸ್ತ ಕುಟುಂಬಗಳು ಸಿಖ್ ಧರ್ಮಕ್ಕೆ]
ಅಲಿಗಢಕ್ಕೆ ಹರಿಗಢವೆಂದು ಪುನರ್ ನಾಮಕರಣ ಮಾಡಲು ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ವಿಎಚ್ಪಿ ಇದೇ ಸಂದರ್ಭದಲ್ಲಿ ಘೋಷಿಸಿತು.