ನಾಡಿನ ಸಮಸ್ತ ಜನರಿಗೆ ಬುದ್ಧ ಪೂರ್ಣಿಮಾದ ಶುಭ ಕೋರಿದ ಗಣ್ಯರು
ಬೆಂಗಳೂರು ಮೇ : ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾ ಇಂದು (ಮೇ 16) ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಹುಣ್ಣಿಮೆ ದಿನ ಶ್ರದ್ಧಾ ಭಕ್ತಿಗಳಿಂದ ವಿರಾಗಿಯನ್ನು ಸ್ಮರಿಸಲಾಗುತ್ತಿದೆ. ಭಾರತ, ನೇಪಾಳ ಹಾಗೂ ಶ್ರೀಲಂಕಾದಲ್ಲಿ ಪ್ರಮುಖವಾಗಿ ಬುದ್ಧ ಜಯಂತಿ ಆಚರಣೆ ಜೋರಾಗಿದೆ. ಮೇ 16 ರಂದು ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, 2019 ರಲ್ಲಿ ಪುನರಾಯ್ಕೆಯಾದ ನಂತರ ಪ್ರಧಾನಿ ಮೋದಿಯವರ ಮೊದಲ ನೇಪಾಳ ಭೇಟಿ ಇದಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ವಿವಿಧ ಗಣ್ಯರು ಸಾಮಾಜಿಕ ಜಾಲತಾಣ ಕೂ ಮೂಲಕ ನಾಡಿನ ಸಮಸ್ತ ಜನರಿಗೆ ಬುದ್ಧ ಪೂರ್ಣಿಮಾದ ಶುಭಾಶಯಗಳನ್ನು ಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಬುದ್ದನ ಉಪದೇಶ, ಚಿಂತನೆ, ಬೋಧನೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 'ಕೂ' ಮಾಡಿದ್ದಾರೆ.
ಜೊತೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೂ, 'ನಾಡಿನ ಸಮಸ್ತರಿಗೆ ಬುದ್ಧ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು. ವೈರಾಗ್ಯದ ಮೂರ್ತಿಯಾಗಿ ಸಕಲವನ್ನೂ ತೊರೆದು ಸಮಾಜಕ್ಕೆ ಅಧ್ಯಾತ್ಮದ ಹಾದಿಯನ್ನು ತೋರಿದ ಭಗವಾನ್ ಗೌತಮ ಬುದ್ಧರ ಜೀವನ ಚರಿತ್ರೆ ಸದಾ ಸ್ಮರಣೀಯ. ಶಾಂತಿ, ಅಹಿಂಸೆ, ಸತ್ಯ, ಪ್ರೀತಿ ಮೊದಲಾದ ಸತ್ ಚಿಂತನೆಗಳ ಕುರಿತು ಅವರು ನೀಡಿದ ಸಂದೇಶಗಳನ್ನು ಎಲ್ಲೆಡೆ ಸಾರೋಣ' ಎಂದು ಶುಭ ಕೋರಿದ್ದಾರೆ.
Koo Appನಾಡಿನ ಸಮಸ್ತರಿಗೆ ಬುದ್ಧ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು. ವೈರಾಗ್ಯದ ಮೂರ್ತಿಯಾಗಿ ಸಕಲವನ್ನೂ ತೊರೆದು ಸಮಾಜಕ್ಕೆ ಅಧ್ಯಾತ್ಮದ ಹಾದಿಯನ್ನು ತೋರಿದ ಭಗವಾನ್ ಗೌತಮ ಬುದ್ಧರ ಜೀವನ ಚರಿತ್ರೆ ಸದಾ ಸ್ಮರಣೀಯ. ಶಾಂತಿ, ಅಹಿಂಸೆ, ಸತ್ಯ, ಪ್ರೀತಿ ಮೊದಲಾದ ಸತ್ ಚಿಂತನೆಗಳ ಕುರಿತು ಅವರು ನೀಡಿದ ಸಂದೇಶಗಳನ್ನು ಎಲ್ಲೆಡೆ ಸಾರೋಣ. #BuddhaPurnima - Araga Jnanendra (@aragajnanendra) 16 May 2022
ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ 'ಕೂ' ಮಾಡುವ ಮೂಲಕ ಬುದ್ಧ ಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.'ದ್ವೇಷವು ದ್ವೇಷದಿಂದ ಗೆಲ್ಲುವುದಿಲ್ಲ, ಆದರೆ ಪ್ರೀತಿಯಿಂದ ಮಾತ್ರ ಗೆಲ್ಲಬಹುದು. ಇದು ಶಾಶ್ವತ ನಿಯಮ. -ಭಗವಾನ್ ಬುದ್ಧ. ಶಾಂತಿ, ಸಮಾನತೆ, ಅಹಿಂಸೆ, ಸಹಾನುಭೂತಿ, ಪ್ರೀತಿ, ದಯೆಯೇ ಮನುಕುಲದ ಒಳಿತಿನ ಆಧಾರಸ್ತಂಭಗಳು ಎಂದು ಸಾರಿದ ಭಗವಾನ್ ಗೌತಮ ಬುದ್ಧರ ಜನ್ಮದಿನವಾದ ಬುದ್ಧಪೂರ್ಣಿಮೆಯಂದು ಎಲ್ಲರಿಗೂ ಶುಭಾಶಯಗಳು' ಎಂದು ಬರೆದಿದ್ದಾರೆ.
ಜೊತೆಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು, 'ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ಭಗವಾನ್ ಗೌತಮ ಬುದ್ಧ ಹಾಕಿಕೊಟ್ಟ ಸತ್ಯ, ಅಹಿಂಸೆ, ಸೌಹಾರ್ದತೆಯ ಮಾರ್ಗದ ಮೂಲಕ ಸ್ವಾಸ್ಥ್ಯ ಸಮಾಜ ಕಟ್ಟೋಣ' ಎಂದು 'ಕೂ' ಮಾಡಿದ್ದಾರೆ.
ಮಾತ್ರವಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಕೂಡ ಬುದ್ಧ ಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ, 'ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು' ಎಂದು ಕೂ ಮೂಲಕ ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸೋಮವಾರ ಗೌತಮ ಬುದ್ಧನ ಜನ್ಮದಿನದ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭಾಶಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಭಗವಾನ್ ಬುದ್ಧನ ತತ್ವಗಳನ್ನು ನೆನಪಿಸಿಕೊಂಡರು ಮತ್ತು ಅವುಗಳನ್ನು ಪೂರೈಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. "ಬುದ್ಧ ಪೂರ್ಣಿಮೆಯಂದು ನಾವು ಭಗವಾನ್ ಬುದ್ಧನ ತತ್ವಗಳನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಅವುಗಳನ್ನು ಪೂರೈಸಲು ನಾವು ಬದ್ಧರಾಗಿರಬೇಕು. ಭಗವಾನ್ ಬುದ್ಧನ ಆಲೋಚನೆಗಳು ನಮ್ಮ ಗ್ರಹಿಕೆಯನ್ನು ಹೆಚ್ಚು ಶಾಂತಿಯುತ, ಸಾಮರಸ್ಯ ಮತ್ತು ಸುಸ್ಥಿರಗೊಳಿಸಬಹುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.
Koo Appದ್ವೇಷವು ದ್ವೇಷದಿಂದ ಗೆಲ್ಲುವುದಿಲ್ಲ, ಆದರೆ ಪ್ರೀತಿಯಿಂದ ಮಾತ್ರ ಗೆಲ್ಲಬಹುದು. ಇದು ಶಾಶ್ವತ ನಿಯಮ. -ಭಗವಾನ್ ಬುದ್ಧ ಶಾಂತಿ, ಸಮಾನತೆ, ಅಹಿಂಸೆ, ಸಹಾನುಭೂತಿ, ಪ್ರೀತಿ, ದಯೆಯೇ ಮನುಕುಲದ ಒಳಿತಿನ ಆಧಾರಸ್ತಂಭಗಳು ಎಂದು ಸಾರಿದ ಭಗವಾನ್ ಗೌತಮ ಬುದ್ಧರ ಜನ್ಮದಿನವಾದ ಬುದ್ಧಪೂರ್ಣಿಮೆಯಂದು ಎಲ್ಲರಿಗೂ ಶುಭಾಶಯಗಳು. #ಬುದ್ಧಪೂರ್ಣಿಮೆ - H D Kumaraswamy (@h_d_kumaraswamy) 16 May 2022
ರಾಷ್ಟ್ರಪತಿ ಕೋವಿಂದ್ ಅವರು ತಮ್ಮ ಸಂದೇಶದಲ್ಲಿ, "ಭಗವಾನ್ ಬುದ್ಧ ಮಾನವೀಯತೆಗೆ ಅಹಿಂಸೆ, ಸಹಾನುಭೂತಿ ಮತ್ತು ಸಹಿಷ್ಣುತೆಯ ಮಾರ್ಗವನ್ನು ತೋರಿಸಿದ್ದಾನೆ. ಅವರ ಬೋಧನೆಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ನಾವೆಲ್ಲರೂ ಭಗವಾನ್ ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸಲು ಸಂಕಲ್ಪ ಮಾಡೋಣ" ಎಂದು ತಿಳಿಸಿದ್ದಾರೆ.
ಟ್ವೀಟ್ಗಳ ಸರಣಿಯಲ್ಲಿ ಉಪಾಧ್ಯಕ್ಷರು ಹೀಗೆ ಬರೆದಿದ್ದಾರೆ "ಬುದ್ಧ ಪೂರ್ಣಿಮೆಯ ಶುಭಾಶಯಗಳು. ವಿಶ್ವದ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ಭಗವಾನ್ ಬುದ್ಧರು ಅತ್ಯಂತ ಆಳವಾದ ಸತ್ಯಗಳನ್ನು ಬೋಧಿಸಿದ್ದಾರೆ. ಅವರ ಬೋಧನೆಗಳು ನಮ್ಮ ದುಃಖಗಳಿಗೆ ಮೂಲ ಕಾರಣವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದ್ದವು" ಎಂದು ಬರೆದಿದ್ದಾರೆ.