ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ನಡ್ಡಾಗೆ ಪತ್ರ ಬರೆದ ಉತ್ತರಾಖಂಡ ಮಾಜಿ ಸಿಎಂ
ಡೆಹ್ರಾಡೂನ್, ಜನವರಿ 19: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಕೊರೊನಾ ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪೈಕಿ ಉತ್ತರಾಖಂಡ ರಾಜ್ಯದ 70 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧವಾಗಿದೆ.
ಈ ಮಧ್ಯೆ ಬಿಜೆಪಿ ನಾಯಕ ಹಾಗೂ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮುಂಬರುವ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ. ತ್ರಿವೇಂದ್ರ ಸಿಂಗ್ ರಾವತ್ ಅವರು ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಉತ್ತರಾಖಂಡ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
"ದಯವಿಟ್ಟು ಉತ್ತರಾಖಂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನನ್ನ ಮನವಿಯನ್ನು ಸ್ವೀಕರಿಸಿ. ಈ ಮೂಲಕ ನಾನು ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಬೆಂಬಲಿಸುವತ್ತ ಗಮನಹರಿಸುತ್ತೇನೆ," ಎಂದು ಅವರು ಬರೆದಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ನಡುವೆ ತ್ರಿವೇಂದ್ರ ಸಿಂಗ್ ರಾವತ್ ಅವರು ಈ ಘೋಷಣೆ ಮಾಡಿದ್ದಾರೆ. ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಿಇಸಿ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೇರುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ ಮತ್ತು ಸಿಇಸಿಯ ಸದಸ್ಯರು ಕೋವಿಡ್ ಪಾಸಿಟಿವ್ ಆಗಿದ್ದರೂ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸುತ್ತಾರೆ.
ಹಲವಾರು ಸುತ್ತಿನ ಸಭೆಗಳ ನಂತರ, ಬಿಜೆಪಿ ಮೂರು, ನಾಲ್ಕು ಮತ್ತು ಐದನೇ ಹಂತದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಜೊತೆಗೆ ಮೈತ್ರಿಯಲ್ಲಿ ಸೀಟು ಹಂಚಿಕೆ ಸೂತ್ರವನ್ನು ಸಹ ಅಂತಿಮಗೊಳಿಸಲಾಗಿದೆ ಆದರೆ ಅಂತಿಮ ನಿರ್ಧಾರವನ್ನು ಚುನಾವಣಾ ಸಮಿತಿ ಸಭೆಯಲ್ಲಿ ಬುಧವಾರ ತೆಗೆದುಕೊಳ್ಳಲಾಗುತ್ತದೆ.
ಬಿಜೆಪಿ
ಸೇರಿದ
ಜನರಲ್
ಬಿಪಿನ್
ರಾವತ್
ಸಹೋದರ
ಉತ್ತರಾಖಂಡ
ಚುನಾವಣೆಗೆ
ಮುನ್ನ
ಇತ್ತೀಚೆಗೆ
ಸೇನಾ
ಹೆಲಿಕಾಪ್ಟರ್
ಅಪಘಾತದಲ್ಲಿ
ನಿಧನರಾದ
ಚೀಫ್
ಆಫ್
ಡಿಫೆನ್ಸ್
ಸ್ಟಾಫ್
ಜನರಲ್
ಬಿಪಿನ್
ರಾವತ್
ಅವರ
ಸಹೋದರ
ಕರ್ನಲ್
ವಿಜಯ್
ರಾವತ್
ಬುಧವಾರ
ಬಿಜೆಪಿಗೆ
ಸೇರ್ಪಡೆಗೊಂಡಿದ್ದಾರೆ.
ಚೀಫ್
ಆಫ್
ಡಿಫೆನ್ಸ್
ಸ್ಟಾಫ್
ಜನರಲ್
ರಾವತ್,
ಅವರ
ಪತ್ನಿ
ಮತ್ತು
ಇತರ
12
ಮಂದಿ
ಕಳೆದ
ತಿಂಗಳು
ತಮಿಳುನಾಡಿನ
ಕೂನೂರ್ನಲ್ಲಿ
ಹೆಲಿಕಾಪ್ಟರ್
ಅಪಘಾತದಲ್ಲಿ
ಸಾವನ್ನಪ್ಪಿದ್ದರು.
ಬಿಜೆಪಿಗೆ ಸೇರ್ಪಡೆ ನಂತರ ಮಾತನಾಡಿದ ಕರ್ನಲ್ ವಿಜಯ್ ರಾವತ್, "ನನ್ನ ತಂದೆ ಸೇನೆಯಿಂದ ನಿವೃತ್ತಿಯಾದ ನಂತರ ಬಿಜೆಪಿಯಲ್ಲಿದ್ದರು, ಈಗ ನನಗೆ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ವಿಶೇಷವಾಗಿದೆ, ಅವರ ಎಲ್ಲಾ ಕೆಲಸಗಳು ಈ ರಾಷ್ಟ್ರದ ಪ್ರಗತಿಗಾಗಿ ಇವೆ. ಅದೇ ನನಗೆ ಬಿಜೆಪಿ ಸೇರಲು ಪ್ರೋತ್ಸಾಹ ನೀಡಿತು ಎಂದರು.
ಫೆ.14ರಂದು
ಮತದಾನ
ಉತ್ತರಾಖಂಡದಲ್ಲಿ
ಜನವರಿ
21ರಂದು
ಚುನಾವಣಾ
ಅಧಿಸೂಚನೆ
ಹೊರಬೀಳಲಿದ್ದು,
ನಾಮಪತ್ರ
ಸಲ್ಲಿಸಲು
ಜನವರಿ
21ರಿಂದ
ಜ.28ರವರೆಗೆ
ಅವಕಾಶವಿರುತ್ತದೆ.
ಜನವರಿ
29ರಂದು
ನಾಮಪತ್ರ
ಪರಿಶೀಲನೆ
ನಡೆಯಲಿದ್ದು,
ನಾಮಪತ್ರ
ಹಿಂಪಡೆಯಲು
ಜನವರಿ
31
ಕೊನೆಯ
ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.