Breaking: ಉತ್ತರಾಖಂಡ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
ಉತ್ತರಾಖಂಡ, ಜನವರಿ 8: ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಶನಿವಾರ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯನ್ನು 7 ಹಂತಗಳಲ್ಲಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಅಂತಿಮವಾಗಿ ಫಲಿತಾಂಶವನ್ನು ಮಾರ್ಚ್ 10, 2022ರಂದು ಪ್ರಕಟಿಸಲು ನಿರ್ಧರಿಸಿದೆ. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ ಎಂದು ತಿಳಿಸಿದರು.
ಐದು ರಾಜ್ಯಗಳ ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. 24.9 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಉತ್ತರಾಖಂಡದಲ್ಲಿ ಜನವರಿ 21ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದ್ದು, ಫೆ.14ರಂದು ಮತದಾನ ನಡೆಯಲಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಕಠಿಣ
ಪರಿಸ್ಥಿತಿಯಲ್ಲೂ
ಚುನಾವಣೆ
ಕಠಿಣ
ಪರಿಸ್ಥಿತಿಯಲ್ಲೂ
ಚುನಾವಣೆ
ನಡೆಸುವುದು
ನಮ್ಮ
ಕರ್ತವ್ಯ.
ಮುನ್ನೆಚ್ಚರಿಕೆ
ನಿಯಮಗಳೊಂದಿಗೆ
ಚುನಾವಣೆ
ನಡೆಸಲು
ತಿರ್ಮಾನಿಸಲಾಗಿದೆ.
ಕೊವೀಡ್
ಸೇಫ್
ಎಲೆಕ್ಷನ್
ನಡೆಸಲಾಗುವುದು.
ಹೆಚ್ಚು
ಜನರು
ಎಲೆಕ್ಷನ್ನಲ್ಲಿ
ಭಾಗಿಯಾಗುವಂತೆ
ಮಾಡಲಾಗುವುದು.
ಈಗಾಗಲೇ
ಸಾಕಷ್ಟು
ಸಭೆಗಳನ್ನು
ನಡೆಸಲಾಗಿದೆ
ಎಂದು
ಚುನಾವಣಾ
ಆಯೋಗದ
ಮುಖ್ಯ
ಆಯುಕ್ತ
ಸುಶೀಲ್
ಚಂದ್ರ
ತಿಳಿಸಿದ್ದಾರೆ.
ಗೃಹ ಇಲಾಖೆ, ಆರೋಗ್ಯ ಇಲಾಖೆ, ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದೆ. ರಾಜ್ಯ ಸರ್ಕಾರದ ಹಲವು ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ಅವರಿಂದ ಹಲವು ಸಲಹೆಗಳನ್ನು ಪಡೆಯಲಾಗಿದೆ ಎಂದು ಸುಶೀಲ್ ಚಂದ್ರ ಹೇಳಿದರು.
ಎಲ್ಲ ಮತದಾನ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೆಳ ಮಹಡಿಯಲ್ಲಿ ಮತದಾನ ಕೇಂದ್ರಗಳಿರಲಿವೆ. ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಸೋಂಕಿತರು ಅಂಚೆ ಮತದಾನ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಚುನಾವಣಾ
ಮೆರವಣಿಗೆ,
ರೋಡ್
ಶೋ
ಇಲ್ಲ
ಕೋವಿಡ್
ಮುಕ್ತ
ಚುನಾವಣೆ
ನಡೆಸುವ
ಆಶಯ
ವ್ಯಕ್ತಪಡಿಸಿರುವ
ಕೇಂದ್ರ
ಚುನಾವಣಾ
ಆಯೋಗವು,
ಜ.15ರವರೆಗೆ
ಚುನಾವಣಾ
ಮೆರವಣಿಗೆ,
ರೋಡ್
ಶೋ,
ಪಾದಯಾತ್ರೆ,
ಪ್ರಚಾರ
ಸಭೆಗಳಿಗೆ
ನಿರ್ಬಂಧ
ವಿಧಿಸಿದೆ.
ನಾಮಪತ್ರ
ಸಲ್ಲಿಕೆ
ವೇಳೆಯೂ
ಮೆರವಣಿಗೆ
ನಡೆಸುವಂತಿಲ್ಲ
ಎಂದು
ಆಯೋಗ
ಹೇಳಿದೆ.
ನಾಮಪತ್ರ
ಸಲ್ಲಿಕೆ
ಹೇಗೆ?
ಸುವಿಧಾ
ಆ್ಯಪ್
ಮೂಲಕ
ಆನ್ಲೈನ್ನಲ್ಲಿ
ನಾಮಪತ್ರ
ಸಲ್ಲಿಕೆ
ಮಾಡಬಹುದು.
5
ರಾಜ್ಯಗಳ
ಚುನಾವಣಾ
ನೀತಿಸಂಹಿತೆ
ಇಂದಿನಿಂದಲೇ
ಜಾರಿ
ಆಗಲಿದೆ.
ಚುನಾವಣಾ
ಸಿಬ್ಬಂದಿ
2
ಡೋಸ್
ಲಸಿಕೆ
ಪಡೆದಿರಬೇಕು
ಎಂದು
ದೆಹಲಿಯಲ್ಲಿ
ಕೇಂದ್ರ
ಚುನಾವಣಾ
ಆಯೋಗದ
ಸುದ್ದಿಗೋಷ್ಠಿಯಲ್ಲಿ
ತಿಳಿಸಲಾಗಿದೆ.
ಚುನಾವಣೆಗೆ
900
ವೀಕ್ಷಕರ
ನೇಮಕ
ಮಾಡಲಾಗುವುದು.
ಅಭ್ಯರ್ಥಿಗಳು
ತಮ್ಮ
ಅಪರಾಧ
ಹಿನ್ನೆಲೆಯನ್ನು
ತಿಳಿಸಬೇಕು.
ಕ್ರಿಮಿನಲ್
ಹಿನ್ನೆಲೆಯ
ಅಭ್ಯರ್ಥಿ
ಬಗ್ಗೆ
ಪಕ್ಷ
ಕಾರಣ
ನೀಡಬೇಕು.
ಅಭ್ಯರ್ಥಿಗಳು
ಆನ್ಲೈನ್ನಲ್ಲಿ
ನಾಮಪತ್ರವನ್ನು
ಸಲ್ಲಿಸಬಹುದು.
ಅಭ್ಯರ್ಥಿಗಳ
ಕ್ರಿಮಿನಲ್
ಹಿನ್ನೆಲೆ
ಬಗ್ಗೆ
ಅಭ್ಯರ್ಥಿಗಳ
ಕ್ರಿಮಿನಲ್
ಹಿನ್ನೆಲೆ
ಬಗ್ಗೆ
ಮಾಹಿತಿ
ಪ್ರಕಟಿಸಬೇಕು.
ಆಯಾ
ರಾಜ್ಯದ
ಪ್ರಮುಖ
ಪತ್ರಿಕೆಗಳಲ್ಲಿ
ಜಾಹೀರಾತು
ಪ್ರಕಟಿಸಬೇಕು.
KNOW
YOUR
CANDIDATE
ಆ್ಯಪ್ನಲ್ಲಿ
ಮಾಹಿತಿ
ನೀಡಬೇಕು.
ಪಕ್ಷದ ವೆಬ್ಸೈಟ್ನ ಮುಖಪುಟದಲ್ಲಿ ಮಾಹಿತಿ ನೀಡಬೇಕು. ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿದೆ.
ಐದು ರಾಜ್ಯಗಳಲ್ಲಿ ವ್ಯಾಪಕ ಸಿದ್ಧತೆಗಳೊಂದಿಗೆ ಗರಿಷ್ಠ ಮತದಾರರ ಭಾಗವಹಿಸುವಿಕೆಯನ್ನು ಗುರಿಯಾಗಿಸಿಕೊಂಡು ಕೋವಿಡ್ ಸುರಕ್ಷಿತ ಚುನಾವಣೆಗಳನ್ನು ನಡೆಸುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಆಯುಕ್ತರು ತಿಳಿಸಿದರು.
ಆನ್ಲೈನ್
ಮೂಲಕ
ನಾಮಪತ್ರ
ಅಭ್ಯರ್ಥಿಗಳಿಗೆ
ಆನ್ಲೈನ್
ಮೂಲಕ
ನಾಮಪತ್ರ
ಸಲ್ಲಿಸುವ
ಅವಕಾಶವನ್ನು
ಕಲ್ಪಿಸಲಾಗುವುದು
ಮತ್ತು
80
ವರ್ಷ
ಮೇಲ್ಪಟ್ಟವರು,
ವಿಶೇಷ
ಚೇತನರು
ಹಾಗೂ
ಕೊರೊನಾ
ಸೋಂಕಿತ
ಮತದಾರರು
ಬ್ಯಾಲೆಟ್
ಪೇಪರ್
ಮೂಲಕ
ಮತದಾನ
ಮಾಡಬಹುದು
ಎಂದು
ಆಯುಕ್ತರು
ಹೇಳಿದರು.