ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಾಖಂಡದಲ್ಲಿ ಕಣಿವೆಗುರುಳಿದ ಕಾರು: 8 ಜನ ದುರ್ಮರಣ
ಉತ್ತರಾಖಂಡ್, ಫೆಬ್ರವರಿ 7: ಉತ್ತರಾಖಂಡದ ಕಣಿವೆಯೊಂದರಲ್ಲಿ ಕಾರುಬಿದ್ದ ಪರಿಣಾಮ 8 ಜನ ಮೃತರಾದ ಘಟನೆ ಇಂದು(ಫೆ.7) ಬೆಳಿಗ್ಗೆ ಚಂಪಾವತ್ ಎಂಬಲ್ಲಿಯ ಸವಾಲಾ ಪ್ರದೇಶದಲ್ಲಿ ನಡೆದಿದೆ.
ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಈ ಕಾರು ಉತ್ತರಾಖಂಡದ ಪಿತೋರಗಢದಿಂದ ತನಕ್ಪುರ ಎಂಬಲ್ಲಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತರ ಗುರುತೂ ಪತ್ತೆಯಾಗಿಲ್ಲ.
ಮಧ್ಯಪ್ರದೇಶ: ಮರಳು ತುಂಬಿದ್ದ ಲಾರಿ ಮಗುಚಿ 8 ಕಾರ್ಮಿಕರು ಸಾವು
ಮೃತರು ಪ್ರವಾಸಿಗರಾ ಅಥವಾ ಸ್ಥಳೀಯರಾ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಫೆಬ್ರವರಿ 1 ರಂದು ಇಲ್ಲಿನ ನೈನಿತಾಲ್ ನಾಲೆಗೆ ಕಾರೊಂದು ಉರುಳಿದ ಪರಿಣಾಮ ನಾಲ್ವರು ಪ್ರವಾಸಿಗಳು ಮೃತರಾಗಿದ್ದರು.
ಇಂದು ಬೆಳಿಗ್ಗೆ ಮಧ್ಯಪ್ರದೇಶದ ಅಲಿರಾಜ್ಪುರ ಎಂಬಲ್ಲಿ ಮರಳು ಹೊತ್ತ ಲಾರಿಯೊಂದು ಮಗುಚಿದ ಪರಿಣಾಮ 8 ಜನ ಮೃತರಾಗಿದ್ದನ್ನು ಇಲ್ಲಿ ನೆನಪಿಸಬಹುದು.
Comments
English summary
At least eight people were killed after a car fell down a gorge in Champawat's Sawala area of Uttarakhand on Wednesday (Feb 7th).