ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದಲ್ಲಿ ಕಣಿವೆಗುರುಳಿದ ಕಾರು: 8 ಜನ ದುರ್ಮರಣ

|
Google Oneindia Kannada News

ಉತ್ತರಾಖಂಡ್, ಫೆಬ್ರವರಿ 7: ಉತ್ತರಾಖಂಡದ ಕಣಿವೆಯೊಂದರಲ್ಲಿ ಕಾರುಬಿದ್ದ ಪರಿಣಾಮ 8 ಜನ ಮೃತರಾದ ಘಟನೆ ಇಂದು(ಫೆ.7) ಬೆಳಿಗ್ಗೆ ಚಂಪಾವತ್ ಎಂಬಲ್ಲಿಯ ಸವಾಲಾ ಪ್ರದೇಶದಲ್ಲಿ ನಡೆದಿದೆ.

ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಈ ಕಾರು ಉತ್ತರಾಖಂಡದ ಪಿತೋರಗಢದಿಂದ ತನಕ್ಪುರ ಎಂಬಲ್ಲಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತರ ಗುರುತೂ ಪತ್ತೆಯಾಗಿಲ್ಲ.

ಮಧ್ಯಪ್ರದೇಶ: ಮರಳು ತುಂಬಿದ್ದ ಲಾರಿ ಮಗುಚಿ 8 ಕಾರ್ಮಿಕರು ಸಾವುಮಧ್ಯಪ್ರದೇಶ: ಮರಳು ತುಂಬಿದ್ದ ಲಾರಿ ಮಗುಚಿ 8 ಕಾರ್ಮಿಕರು ಸಾವು

ಮೃತರು ಪ್ರವಾಸಿಗರಾ ಅಥವಾ ಸ್ಥಳೀಯರಾ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಫೆಬ್ರವರಿ 1 ರಂದು ಇಲ್ಲಿನ ನೈನಿತಾಲ್ ನಾಲೆಗೆ ಕಾರೊಂದು ಉರುಳಿದ ಪರಿಣಾಮ ನಾಲ್ವರು ಪ್ರವಾಸಿಗಳು ಮೃತರಾಗಿದ್ದರು.

Uttarakhand: 8 killed after car falls in gorge

ಇಂದು ಬೆಳಿಗ್ಗೆ ಮಧ್ಯಪ್ರದೇಶದ ಅಲಿರಾಜ್ಪುರ ಎಂಬಲ್ಲಿ ಮರಳು ಹೊತ್ತ ಲಾರಿಯೊಂದು ಮಗುಚಿದ ಪರಿಣಾಮ 8 ಜನ ಮೃತರಾಗಿದ್ದನ್ನು ಇಲ್ಲಿ ನೆನಪಿಸಬಹುದು.

English summary
At least eight people were killed after a car fell down a gorge in Champawat's Sawala area of Uttarakhand on Wednesday (Feb 7th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X