ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳಬಟ್ಟಿ ಸೇವನೆಗೆ ಉತ್ತರ ಪ್ರದೇಶದಲ್ಲಿ 9 ಜನ ಬಲಿ

By Sachhidananda Acharya
|
Google Oneindia Kannada News

ಲಕ್ನೋ, ಜನವರಿ 11: ಉತ್ತರ ಪ್ರದೇಶದಲ್ಲಿ ಶಂಕಿತ ಕಳ್ಳಬಟ್ಟಿ ದುರಂತವೊಂದು ಸಂಭವಿಸಿದ್ದು 9 ಜನರು ಬಲಿಯಾಗಿದ್ದಾರೆ.

ಇಲ್ಲಿನ ಬರಬಂಕಿ ಜಿಲ್ಲೆಯಲ್ಲಿ ಸ್ಥಳೀಯ ಮೆನಯೊಂದಕ್ಕೆ ಬೇರೆ ಬೇರೆ ಊರಿನಿಂದ ಜನರು ಬಂದಿದ್ದು. ಈ ವೇಳೆ ಮಂಗಳವಾರ ರಾತ್ರಿ ಕಳ್ಳಬಟ್ಟಿ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.

ಕಳ್ಳಬಟ್ಟಿ ಸೇವನೆ ಬಳಿಕ ಜನರು ಅಸ್ವಸ್ಥಗೊಂಡಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಕಳ್ಳಬಟ್ಟಿ ಸೇವನೆಯನ್ನು ಜಿಲ್ಲಾಡಳಿತ ಖಚಿತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Uttar Pradesh: Home-made Liquor Allegedly Kills 9

ಉತ್ತರ ಪ್ರದೇಶದಲ್ಲಿ ಪದೇ ಪದೇ ಕಳ್ಳಬಟ್ಟಿ ದುರಂತಗಳು ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಈ ದಂಧೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಉತ್ತರ ಪ್ರದೇಶದಲ್ಲಿ ಜೀವಾವಧಿಯಿಂದ ಮರಣದಂಡನೆವರೆಗೆ ಶಿಕ್ಷೆ ನೀಡಲು ಅವಕಾಶವಿದೆ.

ಒಂದೊಮ್ಮೆ ಕಳ್ಳಬಟ್ಟಿ ಸೇವನೆಯಿಂದ ಸಾವನ್ನಪ್ಪಿದರೆ 'ಉತ್ತರ ಪ್ರದೇಶ ಅಬಕಾರಿ (ತಿದ್ದುಪಡಿ) ಮಸೂದೆ 2017'ರ ಅನ್ವಯ ಕನಿಷ್ಠ 5 ಲಕ್ಷ ರೂಪಾಯಿ ಹಾಗೂ ಗರಿಷ್ಠ 10 ಲಕ್ಷ ದಂಡದ ಜತೆಗೆ ಮರಣ ದಂಡನೆ ವಿಧಿಸಲೂ ಅವಕಾಶವಿದೆ.

ದೇಶದ ಅತೀ ದೊಡ್ಡ ರಾಜ್ಯದಲ್ಲಿ ಆಗಾಗ ಕಳ್ಳಬಟ್ಟಿ ದುರಂತಗಳು ಮರುಕಳಿಸುತ್ತಲೇ ಇರುತ್ತವೆ. ಈ ಹಿಂದೆ ಕಳೆದ ಜೂನ್ ನಲ್ಲಿ ಅಝಂಘರ್ ನಲ್ಲಿ 17 ಜನರು ಕಳ್ಳಬಟ್ಟಿ ಸೇವಿಸಿ ಮೃತರಾಗಿದ್ದು 2015ರಲ್ಲಿ ಲಕ್ನೋದ ಮೊಲಿಹಾಬಾದ್ ನಲ್ಲಿ ಕಳ್ಳಬಟ್ಟಿಗೆ 28 ಜನ ಬಲಿಯಾಗಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

English summary
At least nine people have died allegedly after consuming home-made liquor in Uttar Pradesh's Barabanki district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X