ಶಿವನ ತಪಸ್ಸು ಮಾಡುತ್ತಾ ತಾನು ಪಾರ್ವತಿ ಎಂದ ಯುಪಿ ಮಹಿಳೆ
ನಾಭಿಧಾಂಗ್ ಜೂನ್ 04: ಶಿವನನ್ನು ಮದುವೆಯಾಗಲು ಕೈಲಾಸ ಮಾನಸ ಸರೋವರಕ್ಕೆ ಹೋಗುವ ದಾರಿಯಲ್ಲಿ 'ತಪಸ್ಸು' ಮಾಡುತ್ತಾ, ತಾನು ಪಾರ್ವತಿ ದೇವಿ ಎಂದು ಯುಪಿಯ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾಳೆ.
ಭಾರತ-ಚೀನಾ ಗಡಿಯ ಸಮೀಪವಿರುವ ನಿರ್ಬಂಧಿತ ಪ್ರದೇಶದಲ್ಲಿ ವಾಸಿಸುತ್ತಿದ್ದ ಉತ್ತರಪ್ರದೇಶದ ಮಹಿಳೆಯನ್ನು ಗಡಿಯಿಂದ ವಾಪಸ್ ಕಳುಹಿಸಿ ಆಡಳಿತ ಪ್ರಯತ್ನಿಸಿದಾಗ, ಅವರು ವಿಚಿತ್ರವಾದ ಹೇಳಿಕೆಯನ್ನು ನೀಡಿದ್ದಾರೆ. ಕೈಲಾಸ ಮಾನಸ ಸರೋವರಕ್ಕೆ ಹೋಗುವ ದಾರಿಯಲ್ಲಿ ಗುಂಜಿಯಿಂದ ವಲಸೆ ಬಂದ ಮಹಿಳೆಯೊಬ್ಬರು ತಾವು ಪಾರ್ವತಿ ದೇವಿ ಎಂದು ಹೇಳಿಕೊಂಡಿದ್ದಾರೆ.
ಭಾರತ-ಚೀನಾ ಗಡಿಯ ಬಳಿ ನಿಷೇಧಿತ ಪ್ರದೇಶದಲ್ಲಿ ಲಕ್ನೋದ ಮಹಿಳೆ ನೆಲೆಸಿದ್ದು ಮನೆಗೆ ಮರಳಲು ನಿರಾಕರಿಸಿದ್ದಾರೆ. ಮಹಿಳೆಯು ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ನಾಭಿಧಾಂಗ್ನ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಆಡಳಿತವು ಅವರನ್ನು ಅಲ್ಲಿಂದ ಕಳುಹಿಸಲು ಪ್ರಯತ್ನಿಸಿತು ಆದರೆ ಅವರು ಗುಂಜಿಯ ಮನೆಗೆ ಹಿಂತಿರುಗಲು ನಿರಾಕರಿಸಿದ್ದಾರೆ.
'ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನೊಂದಿಗೆ ಮದುವೆ'
ತಾನು ಪಾರ್ವತಿ ದೇವಿಯ ಅವತಾರವೆಂದೂ, ಕೈಲಾಸ ಪರ್ವತದಲ್ಲಿ ನೆಲೆಸಿರುವ ಶಿವನನ್ನು ಮದುವೆಯಾಗುವುದಾಗಿಯೂ ಮಹಿಳೆ ಹೇಳಿಕೊಂಡಿದ್ದಾಳೆ. ಮಹಿಳೆಯ ಹೆಸರು ಹರ್ಮಿಂದರ್ ಕೌರ್. ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ನನ್ನು ತೆಗೆದುಹಾಕಲು ತೆರಳಿದ್ದ ಪೊಲೀಸ್ ತಂಡ ಹಿಂತಿರುಗಬೇಕಾಯಿತು ಎಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.
ಮಾನಸಿಕ ಸ್ಥಿತಿ ಕಳೆದುಕೊಂಡ ಮಹಿಳೆ
ಮಹಿಳೆ ಮಾತನ್ನು ಕೇಳಿ ಗಡಿ ಭಾಗದ ಆಡಳಿತ ಸಿಬ್ಬಂದಿಗಳು ಶಾಕ್ ಆಗಿದ್ದಾರೆ. ಬಳಿಕ ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಆಕೆಯನ್ನು ಬಲವಂತವಾಗಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಎಸ್ಪಿ ಹೇಳಿದ್ದಾರೆ. ಮಹಿಳೆ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾಳೆಂದು ತಿಳಿದು ಬಂದಿದೆ.
ಅವಧಿ ಮುಗಿದರು ವಾಪಾಸ್ ಹೋಗದ ಮಹಿಳೆ
ಹರ್ಮಿಂದರ್ ಕೌರ್ ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿ. ಅವರು 15 ದಿನಗಳ ಅನುಮತಿಯ ಮೇರೆಗೆ ತನ್ನ ತಾಯಿಯೊಂದಿಗೆ ಎಸ್ಡಿಎಂ ಧಾರ್ಚುಲಾಗೆ ಹೋಗಿದ್ದರು, ಆದರೆ ಮೇ 25 ರಂದು ಅವರ ಅನುಮತಿ ಅವಧಿ ಮುಗಿದ ನಂತರವೂ ನಿರ್ಬಂಧಿತ ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದಾರೆ. ಆದರೆ, ಆಕೆಯನ್ನು ಬಲವಂತವಾಗಿ ಧಾರ್ಚುಲಾಗೆ ಕರೆತರಲು ದೊಡ್ಡ ತಂಡವನ್ನು ಕಳುಹಿಸಲು ಪೊಲೀಸ್ ಆಡಳಿತ ಈಗ ನಿರ್ಧರಿಸಿದೆ.
ಮಹಿಳೆಯನ್ನು ಕರೆತರಲು ತಂಡ ರಚನೆ
ಶಿವನನ್ನು ಮದುವೆಯಾಗುವ ಹಠಕ್ಕೆ ಆಕೆ ಅಚಲವಾಗಿದ್ದಾಳೆ ಎಂದು ಎಸ್ಪಿ ತಿಳಿಸಿದ್ದಾರೆ. ಬಲವಂತವಾಗಿ ಅಲ್ಲಿಂದ ಕರೆದೊಯ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸ್ ತಂಡಕ್ಕೆ ಬೆದರಿಕೆ ಹಾಕಿದ್ದಳು. ಇದೀಗ ಆಕೆಯನ್ನು ನಿರ್ಬಂಧಿತ ಪ್ರದೇಶದಿಂದ ಧಾರ್ಚುಲಾಗೆ ಕರೆತರಲು ದೊಡ್ಡ ತಂಡವನ್ನು ಕಳುಹಿಸಲಾಗುವುದು ಎಂದು ಎಸ್ಪಿ ಹೇಳಿದರು.
Recommended Video