ತ್ವರಿತ ಅಲರ್ಟ್ ಗಳಿಗಾಗಿ
For Daily Alerts
'ತಲಾಖ್' ದೂರುಗಳು ಸುಪ್ರೀಂಗೆ ರವಾನೆ: 'ಯೋಗಿ' ಸರ್ಕಾರ ನಿರ್ಧಾರ
ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಸುಮಾರು 200 ಪ್ರಕರಣಗಳನ್ನು ಒಟ್ಟುಗೂಡಿಸಿ ಸುಪ್ರೀಂ ಕೋರ್ಟ್ ಗೆ ರವಾನಿಸುವ ಕೆಲಸಕ್ಕೆ ಕೈ ಹಾಕಿದ ಯೋಗಿ ಆದಿತ್ಯನಾಥ್ ಸರ್ಕಾರ.
ಲಕ್ನೋ, ಮೇ 18: ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ತ್ರಿವಳಿ ತಲಾಖ್ ಔಚಿತ್ಯದ ಬಗ್ಗೆ ನಡೆಯುತ್ತಿರುವ ವಿಚಾರಣೆಗೆ ಇಂದು (ಮೇ 18) ತಾರ್ಕಿಕ ಅಂತ್ಯ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಆದರೆ, ಅದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಈವರೆಗೆ ದಾಖಲಾಗಿರುವ ತ್ರಿವಳಿ ತಲಾಖ್ ವಿರುದ್ಧದ ದೂರುಗಳನ್ನು ಒಟ್ಟುಗೂಡಿಸಿ ಸುಪ್ರೀಂ ಕೋರ್ಟ್ ಗೆ ರವಾನಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಈ ಕೆಲಸಕ್ಕೆ ಕೈ ಹಾಕಿದೆ ಯೋಗಿ ಸರ್ಕಾರ.
ಉತ್ತರ ಪ್ರದೇಶ ರಾಜ್ಯ ಮಹಿಳಾ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಪ್ರೊಬೇಷನರಿ ಅಧಿಕಾರಿಗಳ ಕಡೆಯಿಂದ ಆಯಾ ಜಿಲ್ಲೆಗಳಲ್ಲಿ ದಾಖಲಾಗಿರುವ ತ್ರಿವಳಿ ತಲಾಖ್ ವಿರುದ್ಧ ದಾಖಲಾಗಿರುವ ಸುಮಾರು 200 ದೂರುಗಳನ್ನು ತರಿಸಿಕೊಳ್ಳಲಾಗಿದೆ.
{promotion-urls}
Comments
English summary
As the hearing on triple talaq before a constitution bench is set to conclude on May 18, 2017, the centre has proposed to forward 200 complaints regarding the issue to the Supreme Court of India. At least 200 complaints have been filed by Muslim women in Uttar Pradesh alone.
Story first published: Thursday, May 18, 2017, 7:22 [IST]