Breaking News: ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಸಂಪುಟ ಅನುಮೋದನೆ
ನವದೆಹಲಿ, ನವೆಂಬರ್ 24: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನೂತನ ಮಸೂದೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಬುಧವಾರ ಅನುಮೋದನೆ ದೊರೆತಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು. ಇದೇ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ.
ಕಳೆದ ನವೆಂಬರ್ 19ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಸರ್ಕಾರದಿಂದ ಜಾರಿಗೆ ತರಲಾಗಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರು. ಬುಧವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಮುಖ ಮಸೂದೆಯನ್ನು ಅಂಗೀಕರಿಸಲಾಗಿದೆ.
ಪ್ರಧಾನಮಂತ್ರಿ ಭಾಷಣದಲ್ಲಿ ಹೇಳಿದ್ದೇನು?:
ಗುರುನಾನಕ್
ಜಯಂತಿಯ
ಸಂದರ್ಭದಲ್ಲಿ
ದೇಶವನ್ನು
ಉದ್ದೇಶಿಸಿ
ಮಾತನಾಡಿದ
ಅವರು,
"ಎಲ್ಲಾ
ಮೂರು
ಕೃಷಿ
ಕಾಯ್ದೆಗಳನ್ನು
ರದ್ದುಗೊಳಿಸಲು
ಸರ್ಕಾರ
ನಿರ್ಧರಿಸಿದೆ.
ನಮ್ಮ
ಸರ್ಕಾರವು
ರೈತರ
ಕಲ್ಯಾಣಕ್ಕಾಗಿ
ಅದರಲ್ಲೂ
ವಿಶೇಷವಾಗಿ
ಸಣ್ಣ
ರೈತರ
ಕಲ್ಯಾಣಕ್ಕಾಗಿ
,
ದೇಶದ
ಹಿತದೃಷ್ಟಿಯಿಂದ,
ಹಳ್ಳಿಯ
ಬಡವರ
ಉಜ್ವಲ
ಭವಿಷ್ಯಕ್ಕಾಗಿ,
ಸಂಪೂರ್ಣ
ಪ್ರಾಮಾಣಿಕತೆಯಿಂದ
ಒಳ್ಳೆಯ
ಉದ್ದೇಶದಿಂದ
ಈ
ಕಾನೂನನ್ನು
ತಂದಿದ್ದೆವು.
ಆದರೆ
ಅಂತಹ
ಪವಿತ್ರವಾದ,
ಸಂಪೂರ್ಣ
ಶುದ್ಧವಾದ
ರೈತರ
ಅನುಕೂಲಕ್ಕಾಗಿ
ನಾವು
ಪ್ರಯತ್ನಿಸಿದರೂ
ಅದನ್ನು
ಕೆಲವು
ರೈತರಿಗೆ
ವಿವರಿಸಲು
ಸಾಧ್ಯವಾಗಲಿಲ್ಲ.
ಹಾಗಾಗಿ
ನಾವು
ಎಲ್ಲಾ
ಮೂರು
ಕೃಷಿ
ಕಾಯ್ದೆಗಳನ್ನು
ರದ್ದುಗೊಳಿಸಲು
ನಿರ್ಧರಿಸಿದ್ದೇವೆ,"
ಎಂದು
ಹೇಳಿದ್ದರು.ಮೂರು
ಕಾಯ್ದೆ
ರದ್ದುಗೊಳಿಸಲು
ಒಂದು
ಮಸೂದೆ:
ಪ್ರಸ್ತಾವಿತ
ಮಸೂದೆಯು
ಮೂರು
ವಿವಾದಿತ
ಕೃಷಿ
ಕಾನೂನುಗಳಿಗೆ
ಸಂಬಂಧಿಸಿದಂತೆ
ರಚಿಸಲಾದ
ಎಲ್ಲಾ
ನಿಯಮಗಳನ್ನು
ತಡೆಹಿಡಿಯುವ
ನಿಬಂಧನೆಗಳನ್ನು
ಒಳಗೊಂಡಿದೆ.
ಭವಿಷ್ಯದಲ್ಲಿ
ಸರ್ಕಾರವು
ಈ
ವಿವಾದಿತ
ಕಾಯ್ದೆಯಡಿ
ತೆಗೆದುಕೊಳ್ಳುವ
ಎಲ್ಲಾ
ನಿರ್ಧಾರಗಳು
ಶೂನ್ಯ
ಮತ್ತು
ಅನೂರ್ಜಿತವಾಗಿರುತ್ತವೆ.
ಮೊದಲಿನ
ಮೂರು
ಕಾಯ್ದೆಗಳಡಿ
ಯಾವುದೇ
ಕಛೇರಿಗಳನ್ನು
ಸ್ಥಾಪಿಸಿದ್ದಲ್ಲಿ
ಅವುಗಳ
ಕಾರ್ಯಾಚರಣೆಯನ್ನು
ನಿಲ್ಲಿಸಲಾಗುತ್ತದೆ.
ಚಳಿಗಾಲ
ಅಧಿವೇಶನದಲ್ಲಿ
ಮಸೂದೆ
ಮಂಡನೆ:
ಕೇಂದ್ರ
ಸರ್ಕಾರದ
ವಿವಾದಿತ
ಕೃಷಿ
ಕಾಯ್ದೆಗಳನ್ನು
ರದ್ದುಗೊಳಿಸುವ
ಮಸೂದೆಯು
ಕೇಂದ್ರ
ಸಂಪುಟ
ಸಭೆಯಲ್ಲಿ
ಅಂಗೀಕಾರವಾಗಿದೆ.
ನವೆಂಬರ್
29ರಂದು
ಆರಂಭವಾಗಲಿರುವ
ಚಳಿಗಾಲ
ಅಧಿವೇಶನದಲ್ಲಿ
ಈ
ಮಸೂದೆಯನ್ನು
ಮಂಡಿಸಿ
ಅಂಗೀಕಾರ
ಪಡೆದುಕೊಳ್ಳಲಾಗುತ್ತದೆ.
ಅಲ್ಲಿಗೆ
ರೈತರ
ಆಕ್ರೋಶಕ್ಕೆ
ಕಾರಣವಾಗಿದ್ದ
ವಿವಾದಿತ
ಕೃಷಿ
ಕಾಯ್ದೆಗಳ
ರದ್ದು
ಪ್ರಕ್ರಿಯೆ
ಪೂರ್ಣಗೊಳ್ಳುತ್ತದೆ.
ಸಂಸತ್
ಅನುಮೋದನೆ
ಸಿಗುವವರೆಗೂ
ರೈತರ
ಹೋರಾಟ:
ಸಂಸತ್
ಅಧಿವೇಶನದಲ್ಲಿ
ಕೃಷಿ
ಕಾಯ್ದೆ
ರದ್ದುಗೊಳಿಸುವ
ಬಗ್ಗೆ
ಅನುಮೋದನೆ
ಸಿಗುವವರೆಗೂ
ರೈತರು
ಹೋರಾಟದಿಂದ
ಹಿಂದೆ
ಸರಿಯುವುದಿಲ್ಲ.
ರಾಷ್ಟ್ರ
ರಾಜಧಾನಿಯ
ಗಡಿಯಲ್ಲಿರುವ
ಆರು
ಪ್ರತಿಭಟನಾ
ಸ್ಥಳಗಳಲ್ಲಿ
ರೈತರ
ಹೋರಾಟವನ್ನು
ಮುಂದುವರಿಯಲಿದೆ.
ಸಂಸತ್ತಿನಲ್ಲಿ
ಕಾಯ್ದೆಗಳನ್ನು
ಔಪಚಾರಿಕವಾಗಿ
ರದ್ದುಗೊಳಿಸುವವರೆಗೆ
ತಮ್ಮ
ನಿಗದಿತ
ಪ್ರತಿಭಟನೆಯು
ನಿಲ್ಲುವುದಿಲ್ಲ
ಎಂದು
ರೈತ
ಸಂಘಟನೆಗಳ
ಒಕ್ಕೂಟ
ಸಂಸ್ಥೆ
ಸಂಯುಕ್ತ
ಕಿಸಾನ್
ಮೋರ್ಚಾ
ಎಚ್ಚರಿಕೆ
ನೀಡಿವೆ.
ಕನಿಷ್ಠ
ಬೆಂಬಲ
ಬೆಲೆಗಾಗಿ
ರಾಕೇಶ್
ಟಿಕಾಯತ್
ಬೇಡಿಕೆ:
ಕೇಂದ್ರ
ಸರ್ಕಾರ
ಇನ್ನೂ
ಅನೇಕ
ರೈತರ
ಸಮಸ್ಯೆಗಳನ್ನು
ಗಮನಿಸಬೇಕಾಗಿದೆ
ಎಂದಿರುವ
ಭಾರತೀಯ
ಕಿಸಾನ್
ಯೂನಿಯನ್
ಮುಖ್ಯಸ್ಥ
ರಾಕೇಶ್
ಟಿಕಾಯತ್,
ಕನಿಷ್ಠ
ಬೆಂಬಲ
ಬೆಲೆಯನ್ನು
(MSP)
ಖಾತರಿಪಡಿಸುವ
ಕಾನೂನಿನ
ಬೇಡಿಕೆಯನ್ನು
ಸೂಚಿಸಿದರು.
"ನಮ್ಮ
ಹೋರಾಟ
ಮುಂದುವರಿಯುತ್ತದೆ,
ಏಕೆಂದರೆ
ನಮ್ಮ
ಸಮಸ್ಯೆಗಳು
ಮೂರು
ಕೃಷಿ
ಕಾನೂನುಗಳ
ರದ್ದತಿಗೆ
ಸೀಮಿತವಾಗಿಲ್ಲ.
ಈ
ಸಮಸ್ಯೆಗಳನ್ನು
ಬಗೆಹರಿಸಲು
ಸರ್ಕಾರ
ನಮ್ಮೊಂದಿಗೆ
ಮಾತನಾಡಬೇಕು.
ನಾವು
ಎಲ್ಲಿಯೂ
ಹೋಗುತ್ತಿಲ್ಲ.
ದೇಶದೆಲ್ಲೆಡೆ
ಸಭೆ
ನಡೆಸಿ
ಜನರಲ್ಲಿ
ಜಾಗೃತಿ
ಮೂಡಿಸುತ್ತೇವೆ
ಎಂದರು.
Recommended Video