ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಜೆಟ್ ಅನುಮಾನಗಳಿಗೆ ಓಪನ್ ಹೌಸ್ ಸಂವಾದದಲ್ಲಿ ಜೇಟ್ಲಿ ಉತ್ತರ
ನವದೆಹಲಿ, ಫೆಬ್ರವರಿ 02: ಕೇಂದ್ರ ಬಜೆಟ್ 2018 ರ ನಂತರ ಮೊದಲ ಬಾರಿಗೆ ಬಜೆಟ್ ಕುರಿತ ತಮ್ಮ ಅನಿಸಿಕೆಗಳನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಹಂಚಿಕೊಂಡಿದ್ದಾರೆ. ಮಾಧ್ಯಮ ಮಿತ್ರರು, ಉದ್ಯಮಿಗಳು, ರಾಜಕಾರಣಿಗಳನ್ನೊಳಗೊಂಡ ಒಪನ್ ಹೌಸ್ ಸಂವಾದದಲ್ಲಿ ಪಾಲ್ಗೊಂಡ ಅವರು, ಬಜೆಟ್ ಕುರಿತ ಹಲವು ಅನುಮಾನಗಳಿಗೆ ತೆರೆ ಎಳೆದರು.
ತೆರಿಗೆ ವಿನಾಯಿತಿ ಕುರಿತು ಬಜೆಟ್ ನಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನಮ್ಮ ಸರ್ಕಾರ ತೆರಿಗೆ ವಿನಾಯಿತಿ ಕುರಿತು ಏನೆಲ್ಲ ಮಾಡಬಹುದೋ ಅದನ್ನು ಮಾಡಿಯಾಗಿದೆ. ಇನ್ನೂ ಕಡಿಮೆ ಮಾಡಬೇಕೆಂದರೆ ನಾವು ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ! ನಮ್ಮ ಸರ್ಕಾರಕ್ಕೆ ಸೇನೆಯನ್ನು ಸಲಹುವುದಕ್ಕೆ ಸಾಧ್ಯವಿಲ್ಲ ಎನ್ನಬೇಕಾಗುತ್ತೆ! ಆದ್ದರಿಂದಲೇ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ತಂದಿಲ್ಲ' ಎಂದರು.
ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?
Comments
English summary
Finance Minister Arun Jaitley's first post-budget industry interaction with Mr. Sanjiv Goenka at the Open House 2018.