ಫೆ.14 ಭಾರತಕ್ಕೆ ಕರಾಳ ದಿನ, ಯೋಧರ ಬಲಿದಾನ ಸ್ಮರಣೀಯ
ಬೆಂಗಳೂರು, ಫೆಬ್ರವರಿ 14: ಕಣಿವೆ ರಾಜ್ಯದ ಪುಲ್ವಾಮಾ ಬಳಿ 2019ರ ಫೆಬ್ರವರಿ14ರಂದು ಉಗ್ರರ ದಾಳಿಯ ಕಹಿ ಸ್ಮರಣೆಗೆ ಇಂದು ಎರಡನೇ ವರ್ಷ. ಭಾರತೀಯರು ಇಂದು ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.
78 ಸೇವಾ ವಾಹನಗಳಲ್ಲಿ 2,547 ಸಿಆರ್ ಪಿಎಫ್ ಯೋಧರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುತ್ತಿದ್ದರು. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಪುಲ್ವಾಮಾ ಬಳಿಯ ಅವಂತಿಪೊರ್ ಸಮೀಪದಲ್ಲಿ ಸೇನಾ ವಾಹನ ಸ್ಫೋಟಗೊಂಡಿತು. ಜೈಷ್-ಇ-ಮೊಹಮ್ಮದ್ ಸಂಘಟನೆಯ ವಾಹನದಲ್ಲಿದ್ದ ಆತ್ಮಾಹುತಿ ಬಾಂಬರ್ ಕೃತ್ಯ ಇದಾಗಿತ್ತು. 22 ವರ್ಷ ವಯಸ್ಸಿನ ಆದ್ಲ್ ಅಹ್ಮದ್ ದರ್ ಈ ಕೃತ್ಯ ಎಸಗಿದ್ದ. ಈ ದುರ್ಘಟನೆಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದರೆ, 39 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು
ಜೈಷ್-ಇ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬರ್ ತೆಗೆದುಕೊಂಡು ಬಂದಿದ್ದ ವಾಹನದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ತುಂಬಲಾಗಿತ್ತು. ಬರೋಬ್ಬರಿ 300 ಕೆಜಿ ಸ್ಫೋಟಕಗಳ ಜೊತೆಗೆ 80 ಕೆಜಿ ಆರ್ ಡಿಎಕ್ಸ್ ನ್ನು ವಾಹನದಲ್ಲಿ ತುಂಬಿಕೊಂಡು ಬಂದಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿತ್ತು.
Today most of the People will be celebrating Valentines Day with their better halves.
— Underrated (Offline🖤🖤) (@DSavageGuy) February 13, 2021
But ever thought about the families of the 40 CRPF Jawans who sacrificed their lives for INDIA. 🇮🇳
Someone lost a son, a father, a husband and a Brother.💔
BLACK DAY FOR SURE#PulwamaAttack pic.twitter.com/yx4TJyH39Z
ಪುಲ್ವಮಾ ದಾಳಿಗೆ ಪ್ರತೀಕಾರ; ಬಾಲಕೋಟ್ ದಾಳಿ ಯೋಜನೆ ಹೇಗಿತ್ತು?
ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿಎಫ್) ಯೋಧರನ್ನು ಭಾರತ ಸರ್ಕಾರ ಗೌರವಿಸಿ ನಮನ ಸಲ್ಲಿಸಿದೆ. ಎಎಸ್ಐ ಮೋಹನ್ ಲಾಲ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಪೊಲೀಸ್ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಬಾಲಾಕೋಟ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು.
14th February 2019
— Mᴀʜɪᴍᴀ (@ItsMaahiRajput) February 13, 2021
“Tributes to the brave martyrs who lost their lives in the gruesome Pulwama attack . They were exceptional individuals who devoted their lives to serving and protecting our nation. India will never forget their martyrdom. #PulwamaAttack 🙏🏻 pic.twitter.com/nsGRL5KE7k
ಫೆ.14ರ ಕರಾಳ ದಿನದ ಬಗ್ಗೆ ಟ್ವಿಟ್ಟರಲ್ಲಿ ಸಾಕಷ್ಟು ಮಂದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.
2 years ago this very day many lost their fathers, brothers, sons and friends. What we loose, this country lost it's 40 sons who were unaware of the attack ahead. They weren't martyred on war zone, they were attacked from behind. This is will a #BlackDayForIndia #PulwamaAttack pic.twitter.com/Gdf9XDIDae
— Tushar Kant Naikॐ♫$ (@TusharKant_Naik) February 13, 2021