ಬಿಜೆಪಿ ತೊರೆಯಲು ಮುಂದಾದ ಮಾಜಿ ರಾಜ್ಯಸಭಾ ಸದಸ್ಯ
ಬೆಂಗಳೂರು, ಜುಲೈ 17: ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಬಿಜೆಪಿಯಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದ ಪತ್ರಕರ್ತ ಚಂದನ್ ಮಿತ್ರಾ ಅವರು ಬಿಜೆಪಿ ತೊರೆಯಲು ಮುಂದಾಗಿರುವ ಸುದ್ದಿ ಬಂದಿದೆ. ಪಯೋನಿರ್ ಪತ್ರಿಕೆ ಸಂಪಾದಕ ಮಿತ್ರಾ ಅವರು ಬಿಜೆಪಿ ಬಿಡಲು ಕಾರಣವೇನು ಇನ್ನೂ ಸ್ಪಷ್ಟವಾಗಿಲ್ಲ.
ಮಿತ್ರಾ ಅವರು ಆಗಸ್ಟ್ 2003ರಿಂದ 2009ರ ತನಕ ರಾಜ್ಯಸಭೆಗೆ ನಾಮಾಂಕಿತಗೊಂಡಿದ್ದರು. 2010ರ ಜೂನ್ ನಲ್ಲಿ ಮಧ್ಯಪ್ರದೇಶದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು. 2016ರಲ್ಲಿ ಅವಧಿ ಮುಕ್ತಾಯವಾಯಿತು.
ಶಾಕಿಂಗ್ : 2019ರಲ್ಲಿ ಹಾಲಿ ಬಿಜೆಪಿ ಸಂಸದರನೇಕರು ಸೋಲ್ತಾರೆ!
ಏನಿರಬಹುದು ಕಾರಣ?: ಲೋಕಸಭೆ ಚುನಾವಣೆ 2018 ಸಂದರ್ಭದಲ್ಲಿ ಹಿರಿಯ ನಾಯಕರು ಹಾಗೂ ಬಂಡಾಯಗಾರರನ್ನು ದೂರವಿಡಲು ಬಿಜೆಪಿ ಮುಂದಾಗಿದೆ. ಎಲ್ ಕೆ ಅಡ್ವಾಣಿ ಅವರ ಆಪ್ತರಾಗಿರುವ ಚಂದನ್ ಮಿತ್ರಾ ಅವರನ್ನು ಈ ಕಾರಣಕ್ಕೆ ದೂರವಿರಿಸಲಾಗಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹುಳುಕುಗಳನ್ನು ಚಂದನ್ ಮಿತ್ರಾ ಆಗಾಗ್ಗೆ ಎತ್ತಿ ತೋರಿಸುತ್ತಿದ್ದರು. ವಿರೋಧ ಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿದ್ದು, ಎನ್ಡಿಎಗೆ ಈ ಬಾರಿ ಕಷ್ಟವಾಗಲಿದೆ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.