ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋದಾವರಿ ನದಿಯಲ್ಲಿ ದೋಣಿ ಮಗುಚಿ, 2 ಮಂದಿ ಸಾವು
ಕಾಕಿನಾಡ, ಜುಲೈ 14: ಗೋದಾವರಿ ನದಿಯಲ್ಲಿ 40 ಮಂದಿ ಪ್ರಯಾಣಿಕರಿದ್ದ ದೋಣಿಯನ್ನು ನೀರಿನಲ್ಲಿ ಮುಳುಗಿದೆ. ಈ ದುರ್ಘಟನೆಯಲ್ಲಿ ಸದ್ಯಕ್ಕೆ 2 ಸಾವನ್ನಪ್ಪಿರುವ ವರದಿ ಬಂದಿದೆ.
ಕಾಕಿನಾಡ ನಗರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಪಸುವುಲಾ ಲಂಕಾ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಸೇತುವೆಯ ಕಂಬಕ್ಕೆ ದೋಣಿ ಡಿಕ್ಕಿ ಹೊಡೆದಿದ್ದರಿಂದ ನಿಯಂತ್ರಣ ತಪ್ಪಿದೆ ಎಂದು ತಿಳಿದು ಬಂದಿದೆ.
ದೋಣಿಯಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸ್ಥಳೀಯ ಈಜುಗಾರರು ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದು, 10 ಮಂದಿಯನ್ನು ರಕ್ಷಿಸುವ ಸುದ್ದಿ ಬಂದಿದೆ. ಕೆಲ ಮಂದಿ ಈಜಿಕೊಂಡು ದಡ ಸೇರಿದ್ದಾರೆ. 10 ರಿಂದ 15 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂಬ ವರದಿ ಬಂದಿದೆ. ದೂರದರ್ಶನದ ವರದಿ ಪ್ರಕಾರ 2 ಮಂದಿ ಮೃತರಾಗಿದ್ದು, ಇನ್ನೂ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments
English summary
Two people died after a boat carrying more than 40 people capsized in the Godavari river after ramming into a bridge's pillar, in Andhra Pradesh's Mondirevu area of Pasuvula Lanka village, 45 kilometres away from Kakinada city. At least ten people, mostly school children, have been reported missing
Story first published: Saturday, July 14, 2018, 19:31 [IST]