ಉಗ್ರರ ಕಪಿಮುಷ್ಟಿಯಿಂದ ಇಬ್ಬರು ಭಾರತೀಯರ ರಕ್ಷಣೆ
ನವದೆಹಲಿ, ಸೆ. 15: ಸುಮಾರು 15 ತಿಂಗಳುಗಳ ಕಾಲ ಲಿಬಿಯಾದಲ್ಲಿ ಐಎಸ್ ಐಎಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಲಿಬಿಯಾದಲ್ಲಿ ಜುಲೈ 29, 2015ರಿಂದ ಒತ್ತೆಯಾಳಾಗಿದ್ದ ಟಿ. ಗೋಪಾಲಕೃಷ್ಣ (ಆಂಧ್ರ ಪ್ರದೇಶ) ಮತ್ತು ಸಿ. ಬಲರಾಮ್ ಕಿಶನ್ (ತೆಲಂಗಾಣ) ಅವರನ್ನು ರಕ್ಷಿಸಲಾಗಿದೆ ಎಂದು ಸುಷ್ಮಾ ಇಂದು ಟ್ವೀಟ್ ಮಾಡಿದ್ದಾರೆ.
ಲಿಬಿಯಾದ
ಉತ್ತರದಲ್ಲಿರುವ
ಸಿರ್ತೆ
ಯೂನಿವರ್ಸಿಟಿಯಲ್ಲಿ
ಪ್ರಾಧ್ಯಾಪಕರಾಗಿದ್ದ
ಇವರನ್ನು
ಕಳೆದ
ವರ್ಷ
ಜುಲೈನಲ್ಲಿ
ಇಸ್ಲಾಮಿಕ್
ಸ್ಟೇಟ್
ಉಗ್ರಗಾಮಿಗಳು
ಅಪಹರಿಸಿದ್ದರು.
I am happy to inform that T Gopalakrishna (AP) & C BalaramKishan (Telangana) who were captive in Libya since 29 July 2015 have been rescued.
— Sushma Swaraj (@SushmaSwaraj) September 15, 2016
ಲಕ್ಷ್ಮಿಕಾಂತ್, ವಿಜಯ್ ಕುಮಾರ್, ಬಲರಾಮ್ ಹಾಗೂ ಗೋಪಾಲಕೃಷ್ಣ ನಾಲ್ವರನ್ನು ಅಪಹರಿಸಲಾಗಿತ್ತು. ಲಕ್ಷ್ಮಿಕಾಂತ್ ಹಾಗೂ ಕುಮಾರ್ ಅವರು ಕರ್ನಾಟಕ ಮೂಲದವರಾಗಿದ್ದು, ಅಪಹರಣವಾದ ನಾಲ್ಕು ದಿನಗಳಲ್ಲೇ ರಕ್ಷಿಸಲಾಗಿತ್ತು.
ಆದರೆ, ತೆಲಂಗಾಣದ ಬಲರಾಮ್ ಹಾಗೂ ಆಂಧ್ರದ ಗೋಪಾಲಕೃಷ್ಣ ಅವರನ್ನು ಬಿಡುಗಡೆ ಮಾಡಿರಲಿಲ್ಲ. ಅವರ ಕುಟುಂಬದವರು ಕೂಡಾ ಆಸೆ ಬಿಟ್ಟಿದ್ದರು. ಆದರೆ, ವಿದೇಶಾಂಗ ಸಚಿವಾಲಯದ ಸತತ ಪ್ರಯತ್ನ, ಸಂಧಾನದ ಫಲವಾಗಿ ಇಬ್ಬರು ಇವತ್ತು ಬಿಡುಗಡೆಗೊಂಡಿದ್ದಾರೆ. (ಒನ್ಇಂಡಿಯಾ ಸುದ್ದಿ)