ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ತೀರ್ಪಿಗೆ ಟ್ವೀಟ್ಸ್ 'ವೀರ್ಯ ಉತ್ಪಾದಕ' ಪುರುಷರಿಗೂ ನಿಷೇಧ ಹೇರಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಕುರಿತಂತೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಅರ್ಜಿ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದೆ.

ಶಬರಿಮಲೆ ತೀರ್ಪು LIVE: ಸುಪ್ರೀಂನಿಂದ ಮತ್ತೊಂದು ಐತಿಹಾಸಿಕ ತೀರ್ಪುಶಬರಿಮಲೆ ತೀರ್ಪು LIVE: ಸುಪ್ರೀಂನಿಂದ ಮತ್ತೊಂದು ಐತಿಹಾಸಿಕ ತೀರ್ಪು

ಪಂಚ ಸದಸ್ಯರ ನ್ಯಾಯಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಮಾತ್ರ ಈ ನಿರ್ಣಯ ವಿರುದ್ಧ ತಮ್ಮ ತೀರ್ಪು ನೀಡಿದ್ದಾರೆ. ಒಟ್ಟಾರೆ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಜೋರಾಗಿದೆ.

ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಪೀಠವು, ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಶಬರಿಮಲೆ ದೇವಸ್ಥಾನವು ಪ್ರವೇಶವನ್ನು ನೀಡಬೇಕು ಎಂದು ಹೇಳಿದೆ. ಆದರೆ, ಸಮಾನತೆ ನೀಡಬೇಕು ಎಂಬ ಏಕೈಕ ಕಾರಣಕ್ಕೆ ಸಂಪ್ರದಾಯ ಕಟ್ಟಳೆ, ಆಚರಣೆಯನ್ನು ಪ್ರಶ್ನಿಸುವುದು, ಕಾನೂನು ಮೂಲಕ ಇದನ್ನು ಸಾಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ

ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ? ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?

'ಋತುಮತಿಯಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು' ಎಂದು ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಯಾರ್ ಗೋಪಾಲಕೃಷ್ಣನ್‌ ನೀಡಿದ್ದ ಹೇಳಿಕೆ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು. ದೇವಾಲಯ ಪ್ರವೇಶ ಮಾಡುವುದಾದರೆ ಮುಟ್ಟಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ ನಂತರ ಅವಕಾಶ ಕಲ್ಪಿಸಬೇಕು ಎಂದು ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 'ಹ್ಯಾಪಿ ಟು ಬ್ಲಡ್ ' ಎಂಬ ಅಭಿಯಾನವೇ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Array

ಸ್ವಯಂನಾಶಕ್ಕೆ ಭಾರತ ಸಿದ್ಧವಾಗುತ್ತಿದೆ.

ನಿನ್ನೆ ದಿನ ಅನೈತಿಕ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ಅರಗಿಸಿಕೊಳ್ಳುವಷ್ಟರಲ್ಲೇ ಋತುಮತಿ ಸೇರಿದಂತೆ ಎಲ್ಲಾ ವಯೋಮಿತಿಯ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ಸಿಕ್ಕಿರುವುದು ಹುಬೇರುವಂತೆ ಮಾಡಿದೆ. ಭಾರತದ ಸಮಾಜ ನಾಶಕ್ಕೆ ಹೊರಗಿನ ವೈರಿಗಳು ಬೇಡ. ನಮ್ಮೊಳಗಿನ ವೈರಿಗಳೇ ಸಾಕು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ? ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಏಕಿಲ್ಲ?

Array

'ವೀರ್ಯ ಉತ್ಪಾದಕ' ಪುರುಷರಿಗೂ ನಿಷೇಧ ಹೇರಿ

ಋತುಮತಿ ಮಹಿಳೆಯರು ತಿಂಗಳಲ್ಲಿ ನಾಲ್ಕೈದು ದಿನ ಅನುಭವಿಸುವ ನೋವಿಗೆ ಇಂಥ ಶಿಕ್ಷೆಯಾದರೆ, ಪ್ರತಿದಿನ, ಪ್ರತಿಕ್ಷಣ ವೀರ್ಯ ಉತ್ಪಾದಿಸುವ ಪುರುಷರನ್ನು ಮೊದಲು ನಿಷೇಧಿಸಿ

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು? ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?

ಮಹಿಳಾ ಜಡ್ಜ್ ನೀಡಿದ ತೀರ್ಪಿನ ಬಗ್ಗೆ ಬರ್ಖಾ

ಮಹಿಳಾ ಜಡ್ಜ್ ಅವರು ನೀಡಿದ ತೀರ್ಪಿನ ಬಗ್ಗೆ ಅಚ್ಚರಿ, ಕುತೂಹಲ ವ್ಯಕ್ತಪಡಿಸಿದ ಪತ್ರಕರ್ತೆ ಬರ್ಖಾ ದತ್.

ಭಾರತದ ಪಾಲಿಗೆ ಸೂಪರ್ ಸೆಪ್ಟೆಂಬರ್

ಆಧುನಿಕ ಹಾಗೂ ಸಾಂಸ್ಕೃತಿಕವಾಗಿ ಪರಿವರ್ತನೆಗೊಂಡ ಭಾರತ ನಮ್ಮದಾಗುತ್ತಿದೆ. ಭಾರತದ ಪಾಲಿಗೆ ಸೂಪರ್ ಸೆಪ್ಟೆಂಬರ್ ಎಂದು ಟ್ವೀಟ್ ಬಂದಿದೆ.

ತೆಹ್ಸೀನ್ ಪೂನಾವಾಲಾ ಅವರಿಂದ ಟ್ವೀಟ್

ತೆಹ್ಸೀನ್ ಪೂನಾವಾಲಾ ಅವರಿಂದ ಟ್ವೀಟ್, ತಂತ್ರ ವಿದ್ಯೆಯ ವಿದ್ಯಾರ್ಥಿನಿಯಾದ ನಾನು ಪ್ರವೇಶ ನಿಷೇಧ ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲೆ . ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪುಗೆ ತಲೆಬಾಗುವೆ.

ಮಹಿಳಾ ನ್ಯಾಯಮೂರ್ತಿ ಇಂದು ನೀಡಿದ ತೀರ್ಪು

ಮಹಿಳಾ ನ್ಯಾಯಮೂರ್ತಿ ಇಂದು ನೀಡಿದ ತೀರ್ಪಿನ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ. ಆದರೆ, ಮಹಿಳೆಯಾಗಿ ಮಹಿಳೆ ಪರ ತೀರ್ಪು ನೀಡಬೇಕಿತ್ತು ಎಂಬ ಪೂರ್ವಾಗ್ರಹದಿಂದ ಹೊರ ಬನ್ನಿ ಎಂದು ಕೂಡಾ ಕೆಲವರು ಉತ್ತರಿಸಿದ್ದಾರೆ.

English summary
The Supreme Court Constitution Bench led by Chief Justice of India Dipak Misra today(September 28) has lifted the ban on the entry of women into the Sabarimala Temple in the age group of 10 and 50. Here are the twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X