ತ್ರಿಪುರಾ ಸಿಎಂ ಮೇಲೆ ಕಿರುಕುಳ ಆರೋಪ, ಸುಳ್ಳೇ ಸುಳ್ಳು ಎಂದ ಪತ್ನಿ
ಅಗರ್ತಲಾ, ಏಪ್ರಿಲ್ 26: ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ದೇವ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಸಿಎಂ ಬಿಪ್ಲವ್ ವಿರುದ್ಧ ಅವರ ಪತ್ನಿಯೇ ದೂರು ನೀಡಿದ್ದು, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ ಕಾರಣ ನೀಡಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ ಎಂಬ ಸುದ್ದಿಯನ್ನು ಅವರ ಪತ್ನಿ ನಿತಿ ಅಲ್ಲಗೆಳೆದಿದ್ದಾರೆ. ಇದೆಲ್ಲ ಗಾಳಿಸುದ್ದಿ ಎಂದು ಬಿಪ್ಲಬ್ ಪತ್ನಿ ಪ್ರತಿಕ್ರಿಯಿಸಿದ್ದಾರೆ.
"ಅಂತರ್ಜಾಲ, ಉಪಗ್ರಹ ಸೌಲಭ್ಯ ಮಹಾಭಾರತ ಕಾಲದಲ್ಲೇ ಅಸ್ತಿತ್ವದಲ್ಲಿತ್ತು!"
ಬಿಪ್ಲವ್ ದೇವ್ ವಿರುದ್ಧ ಅವರ ಪತ್ನಿ ನಿತಿ ಅವರು, ತೀಜ್ ಹಜಾರಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಸಿಎನ್ಎನ್ -ನ್ಯೂಸ್ 18 ವರದಿ ಮಾಡಿತ್ತು.
https://www.facebook.com/niti.deb1/posts/2353028488082001?__xts__%5B0%5D=68.ARDx7_Op9weEzLXz92X8SRkoQ_nyPvO3NFF-MSl0AlohSj_6AV5j1spw8irpAZKp7ODcJWFoUqkCFX_ldDk2Eb6ENgGNBwQmrF3zgK8xosCW7RM3PIywjOLN5mxVySvPchKvO6qKj_EXyWR9fN9wEFR2vHl-zYmxteb7T56yGG2pbbI9_vUicTRgfF8l9FubJOFyJMQzipwUNrezpBGtfKkeraNPyMrijeG9P7Db4tpX3qQOt2AWhIJRsX0sLkR7oUAcCw3haoVInJohAL7VdxVxeSIsUEa9dh_PUfJ7Z3cqrDs7cMlldgsHw1u9WNlfFvjNmAv9SIJeB6agej8DD9zy&__tn__=-R
ಆದರೆ, ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ನಿತಿ, ಗಾಳಿ ಸುದ್ದಿಗೆ ಮೂಲವಿರುವುದಿಲ್ಲ, ಕೆಟ್ಟ, ಕೊಳಕು ಮನಸ್ಥಿತಿಯವರು ಮಾತ್ರ ಇಂಥ ಕೆಳದರ್ಜೆ ಪಬ್ಲಿಸಿಟಿ ಮಾಡಲು ಸಾಧ್ಯ. ರಾಜಕೀಯವಾಗಿ ಕುಂದುಂಟು ಮಾಡಲು ಹಣ ಪಡೆದು ಕೆಲವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ನೀವೆಲ್ಲರೂ ನಮ್ಮ ಮೇಲೆ ಪ್ರೀತಿ ಅಭಿಮಾನ ಹೊಂದಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಪಾಠ ಕಲಿಸಿ, ತ್ರಿಪುರಾ ಜನತೆ ನೀಡಿರುವ ಪ್ರೀತಿಗೆ ಧಕ್ಕೆ ಉಂಟಾಗುತ್ತಿದೆ. ಇದು ವೈಯಕ್ತಿಕ ಸಂಬಂಧಕ್ಕೆ ಮಾತ್ರ ಆದ ನೋವಲ್ಲ ಎಂದು ನಿತಿ ಹೇಳಿದ್ದಾರೆ.
ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್
2018ರಲ್ಲಿ ತ್ರಿಪುರಾ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಿಪ್ಲಬ್ ಅವರು, ಮಹಾಭಾರತ ಕಾಲದಲ್ಲೇ ಸ್ಯಾಟಲೈಟ್ ಸಂವಹನ, ಇಂಟರ್ನೆಟ್ ಎಲ್ಲವೂ ಇತ್ತು ಎಂದು ಹೇಳೀಕೆ ನೀಡಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ತ್ರಿಪುರಾ ಕಾಂಗ್ರೆಸ್ ಈಗಾಗಲೇ ಚುನಾವಣಾ ಆಯೋಗದಲ್ಲಿ ದೂರು ನೀಡಿದೆ.