ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉ.ಪ್ರದೇಶ: ದೇವಿ ದರ್ಶನಕ್ಕೆಂದು ಹೊರಟ 10 ಜನ ದುರ್ಮರಣ
ಪ್ರತಾಪ್ಘರ್, ಮಾರ್ಚ್ 24: ಉತ್ತರ ಪ್ರದೇಶದ ಪ್ರತಾಪ್ಘರ್ ದಲ್ಲಿ ನಿನ್ನೆ(ಮಾ.23) ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಜನ ಮೃತರಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇವರಲ್ಲಿ 9 ಜನ ಮಹಿಳೆಯರೇ ಆಗಿದ್ದ ಒಂದು ಮಗುವೂ ಮೃತವಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯವಾಗಿದೆ. ಹೆಂಗಸರಿದ್ದ ಲಗೇಜ್ ರಿಕ್ಷಾ ಎದುರಿನಿಂದ ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಉತ್ತರಾಖಂಡದಲ್ಲಿ ಭೀಕರ ಅಪಘಾತ: 13 ಜನ ಸಾವು
ಎಲ್ಲ ಮಹಿಳೆಯರೂ ಜೌನ್ಪುರ ಜಿಲ್ಲೆಯ ದೌಲಾತಿಯಾ ಎಂಬ ಹಳ್ಳಿಗೆ ಸೇರಿದವರೆಂದು ಗುರುತಿಸಲಾಗಿದೆ. ಅವರೆಲ್ಲರೂ ಸುಲ್ತಾನ್ ಪುರದಲ್ಲಿರುವ ರೈಯ್ಯಾ ದೇವಿ ದೇವಾಲಯಕ್ಕೆ ತೆರಳುತ್ತಿದ್ದರು.
ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಡಿದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ನೀದಿದ್ದಾರೆ.
Comments
English summary
10 people died and 5 injured in a tragice road accident. The incident took place in Pratapgarh in Uttar Pradesh on March 23rd.
Story first published: Saturday, March 24, 2018, 11:24 [IST]