ಸರ್ಕಾರದ ವ್ಯಕ್ತಿತ್ವ ಕಾಪಾಡಿಕೊಳ್ಳುವುದ್ಹೇಗೆ, ಇದಕ್ಕೊಂದು ಕಾರ್ಯಾಗಾರ
ನವದೆಹಲಿ, ಮೇ 06: ಸರ್ಕಾರದ ವ್ಯಕ್ತಿತ್ವ ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಚರ್ಚೆ ನಡೆದಿತ್ತು ಅದರಲ್ಲಿ 300ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ, ಸರ್ಕಾರದ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ಹೇಗೆ ಹಾಗೂ ಜನರ ಮನಸ್ಸಿನಲ್ಲಿ ಸರ್ಕಾರ ಕುರಿತು ಒಳ್ಳೆಯ ಭಾವನೆಯನ್ನು ತುಂಬುದು ಹೇಗೆ ಎಂಬುದರ ಕುರಿತು ಚರ್ಚೆ ನಡೆದಿತ್ತು.
ಸರ್ಕಾರವು ಸೆನ್ಸಿಟೀವ್, ಬೋಲ್ಡ್ ಹಾಗೂ ಹೆಚ್ಚು ಕೆಲಸ ಮಾಡುವ, ತ್ವರಿತವಾಗಿ ಸ್ಪಂಧಿಸುವ ಸರ್ಕಾರವನ್ನಾಗಿ ನಿರ್ಮಿಸಬೇಕು.ಇದು 90 ನಿಮಿಷಗಳ ವರ್ಚ್ಯುವಲ್ ಕಾರ್ಯಾಗಾರವಾಗಿತ್ತು, ಸಚಿವ ಪ್ರಕಾಶ್ ಜಾವಡೇಕರ್ ಕೂಡ ಇದರಲ್ಲಿ ಪಾಲ್ಗೊಂಡಿದ್ದರು.
ಕೊರೊನಾ ಸೋಂಕಿನ ಎರಡನೇ ಅಲೆ ನಿರ್ವಹಣೆ ಹಾಗೂ ಲಸಿಕೆ ವಿತರಣೆ ಕುರಿತು ಜನರಿಂದ ಅಪಸ್ವರ ಕೇಳಿಬರುತ್ತಿದೆ, ಎರಡನೂ ನಿಭಾಯಿಸಲು ಸೋತಿದ್ದೇವೆ ಎನ್ನುವ ದೂರು ಬರುತ್ತಿದೆ ಇದನ್ನು ಸರಿಪಡಿಸಬೇಕಿ ಎಂದು ಹೇಳಿದ್ದಾರೆ.
ಈ ಕುರಿತು ಸರ್ಕಾರಕ್ಕೆ ಹಿಂದೂಸ್ತಾನ್ ಟೈಮ್ಸ್ ಹಲವು ಪ್ರಶ್ನೆಗಳನ್ನು ಕೇಳಿದ್ದು, ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಯೋಜನೆಗಳು ಕುರಿತಂತೆ ಪಾಸಿಟಿವ್ ವರದಿಗಳು ಬರಬೇಕು, ಅದನ್ನೇ ಹೆಚ್ಚು ಹೈಲೈಟ್ ಮಾಡುವ ಕುರಿತು ಚರ್ಚೆ ನಡೆದಿದೆ.