ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ 5 ರಾಜ್ಯಗಳಿವು...
ನವದೆಹಲಿ, ಸೆಪ್ಟೆಂಬರ್ 2: ದೇಶದಲ್ಲಿ ಗುರುವಾರ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಎರಡು ತಿಂಗಳ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 47,092 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,89,583ಕ್ಕೆ ಏರಿಕೆಯಾಗಿದೆ. 30 ಸಾವಿರದ ಆಚೀಚೆಯಲ್ಲಿದ್ದ ದಿನನಿತ್ಯದ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.
ಕೇರಳದಲ್ಲಿ ಕೊರೊನಾ ಏರಿಕೆ; ಕರ್ನಾಟಕ, ತಮಿಳುನಾಡಿಗೆ ಕೇಂದ್ರದ ಸೂಚನೆ
ಒಂದು ದಿನದಲ್ಲಿ 35,181 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 4,39,529 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಇದರೊಂದಿಗೆ ಬುಧವಾರ 509 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು 4,39,529 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಒಂದೇ ದಿನದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,000ರಷ್ಟು ಏರಿಕೆ ಕಂಡಿದೆ.
ಕೆಲವು ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ. ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ಐದು ಪ್ರಮುಖ ರಾಜ್ಯಗಳಾವುವು? ಮುಂದಿದೆ ವಿವರ...
ಮಕ್ಕಳಿಗೆ ಲಸಿಕೆ ನೀಡಲು 9 ತಿಂಗಳ ಕಾಲಾವಧಿ ಅವಶ್ಯವಿದೆ; ಏಮ್ಸ್ ನಿರ್ದೇಶಕ
ದೇಶದ
ಕೊರೊನಾ
ಪ್ರಕರಣಗಳಲ್ಲಿ
ಕೇರಳದ್ದು
ಸಿಂಹಪಾಲು:
ದೇಶದ
ಒಟ್ಟು
ಕೊರೊನಾ
ಪ್ರಕರಣಗಳಲ್ಲಿ
ಕೇರಳದ್ದು
ಸಿಂಹಪಾಲಾಗಿದ್ದು,
70%
ಪ್ರಕರಣಗಳು
ಕೇರಳ
ರಾಜ್ಯವೊಂದರದ್ದೇ
ಆಗಿದೆ.
ಸೋಂಕಿನಿಂದ
ಸಾವನ್ನಪ್ಪಿದವರ
ಸಂಖ್ಯೆಯೂ
ಕೇರಳದಲ್ಲಿ
ಹೆಚ್ಚಿದೆ.
ಕೇರಳದಲ್ಲಿ
32,803
ಹೊಸ
ಕೊರೊನಾ
ಪ್ರಕರಣಗಳು
ದಾಖಲಾಗಿದ್ದು
ಒಟ್ಟಾರೆ
ಪ್ರಕರಣಗಳ
ಸಂಖ್ಯೆ
40,90,036
ಆಗಿದೆ.
ಬುಧವಾರ
ಸೋಂಕಿನಿಂದ
173
ಮಂದಿ
ಸಾವನ್ನಪ್ಪಿದ್ದು,
ಒಟ್ಟು
ಮರಣ
ಸಂಖ್ಯೆ
20,961
ಆಗಿದೆ.
ಮಹಾರಾಷ್ಟ್ರದಲ್ಲಿಯೂ
ಏರಿಕೆಯಾಗುತ್ತಿರುವ
ಕೊರೊನಾ
ಮಹಾರಾಷ್ಟ್ರದಲ್ಲಿ
4,456
ಹೊಸ
ಕೊರೊನಾ
ಪ್ರಕರಣಗಳು
ದಾಖಲಾಗಿದ್ದು,
ಒಟ್ಟು
ಪ್ರಕರಣಗಳ
ಸಂಖ್ಯೆ
ರಾಜ್ಯದಲ್ಲಿ
64,69,332
ಆಗಿದೆ.
ಒಂದು
ದಿನದಲ್ಲಿ
183
ಮಂದಿ
ಸಾವನ್ನಪ್ಪಿದ್ದು,
ಇದುವರೆಗೂ
137496
ಮಂದಿ
ಸಾವನ್ನಪ್ಪಿದ್ದಾರೆ.
4,430
ಕೊರೊನಾ
ರೋಗಿಗಳು
ಗುಣಮುಖರಾಗಿದ್ದಾರೆ.
ಇದುವರೆಗೂ
62,77,230
ಮಂದಿ
ಸೋಂಕಿನಿಂದ
ಚೇತರಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ
ಚೇತರಿಕೆ
ಪ್ರಮಾಣವೂ
ಹೆಚ್ಚಿದ್ದು,
97.3%
ಆಗಿದೆ.
ತಮಿಳುನಾಡಿನಲ್ಲಿ
ಸೋಂಕು
ಹೆಚ್ಚಳದ
ಸಾಧ್ಯತೆ
ಹಿಂದಿನ
ದಿನಕ್ಕೆ
ಹೋಲಿಸಿದರೆ,
ತಮಿಳುನಾಡಿನಲ್ಲಿ
ಹೊಸ
ಕೊರೊನಾ
ಪ್ರಕರಣಗಳ
ಸಂಖ್ಯೆ
ತಗ್ಗಿದೆ.
1509
ಹೊಸ
ಕೊರೊನಾ
ಪ್ರಕರಣಗಳು
ದಾಖಲಾಗಿದ್ದು,
1719
ಮಂದಿ
ಸೋಂಕಿನಿಂದ
ಚೇತರಿಸಿಕೊಂಡಿದ್ದಾರೆ.
ಒಂದು
ದಿನದಲ್ಲಿ
20
ಮಂದಿ
ಸೋಂಕಿನಿಂದ
ಸಾವನ್ನಪ್ಪಿದ್ದು,
ಇದುವರೆಗೂ
ಸೋಂಕಿನಿಂದ
ಸಾವನ್ನಪ್ಪಿದವರ
ಸಂಖ್ಯೆ
34,941
ಆಗಿದೆ.
ಆಂಧ್ರ
ಪ್ರದೇಶದಲ್ಲಿ
14,473
ಸಕ್ರಿಯ
ಪ್ರಕರಣ
ಆಂಧ್ರ
ಪ್ರದೇಶದಲ್ಲಿ
1186
ಮಂದಿಗೆ
ಕೊರೊನಾ
ಸೋಂಕು
ದೃಢಪಟ್ಟಿದ್ದು,
ರಾಜ್ಯದ
ಒಟ್ಟಾರೆ
ಪ್ರಕರಣಗಳ
ಸಂಖ್ಯೆ
20,15,302
ಆಗಿದೆ.
ರಾಜ್ಯದಲ್ಲಿ
ಇದುವರೆಗೂ
13,867
ಮಂದಿ
ಸೋಂಕಿನಿಂದ
ಸಾವನ್ನಪ್ಪಿದ್ದು,
14,473
ಸಕ್ರಿಯ
ಪ್ರಕರಣಗಳಿವೆ.
19,86,962
ಮಂದಿ
ಸೋಂಕಿನಿಂದ
ಗುಣಮುಖರಾಗಿದ್ದಾರೆ.
ಕರ್ನಾಟಕದ
ಕೊರೊನಾ
ಪ್ರಕರಣ
ಕರ್ನಾಟಕದಲ್ಲಿ
1159
ಹೊಸ
ಕೊರೊನಾ
ಪ್ರಕರಣಗಳು
ದಾಖಲಾಗಿದ್ದು,
ಇದುವರೆಗೂ
ದಾಖಲಾದ
ಕೊರೊನಾ
ಪ್ರಕರಣಗಳ
ಸಂಖ್ಯೆ
29,50,604
ಆಗಿದೆ.
ಬುಧವಾರ
21
ಮಂದಿ
ಸೋಂಕಿನಿಂದ
ಸಾವನ್ನಪ್ಪಿದ್ದು
ಒಟ್ಟಾರೆ
ಮರಣ
ಸಂಖ್ಯೆ
37,339
ಆಗಿದೆ.
ಸದ್ಯಕ್ಕೆ
ರಾಜ್ಯದಲ್ಲಿ
18412
ಸಕ್ರಿಯ
ಪ್ರಕರಣಗಳಿವೆ.
ಪಾಸಿಟಿವಿಟಿ
ದರ
0.66%
ಇದೆ.
Recommended Video
ಕೇರಳದಲ್ಲಿ
ಕೊರೊನಾ
ಏರಿಕೆ;
ಕರ್ನಾಟಕ,
ತಮಿಳುನಾಡಿಗೆ
ಕೇಂದ್ರದ
ಸೂಚನೆ
ಕೇರಳದಲ್ಲಿ
ಕೊರೊನಾ
ಪ್ರಕರಣಗಳ
ಏರಿಕೆಯಾಗುತ್ತಿದ್ದಂತೆ,
ನೆರೆ
ರಾಜ್ಯಗಳಾದ
ಕರ್ನಾಟಕ,
ತಮಿಳುನಾಡಿನ
ಗಡಿ
ಜಿಲ್ಲೆಗಳಲ್ಲಿ
ಕೊರೊನಾ
ಲಸಿಕೆ
ನೀಡುವ
ಪ್ರಕ್ರಿಯೆಯನ್ನು
ಚುರುಕುಗೊಳಿಸಲು
ಕೇಂದ್ರ
ಸೂಚನೆ
ನೀಡಿದೆ.
ಬುಧವಾರ
ಈ
ಕುರಿತು
ಮಾತನಾಡಿರುವ
ಕೇಂದ್ರ
ಆರೋಗ್ಯ
ಸಚಿವ
ಮನ್ಸುಖ್
ಮಾಂಡವಿಯಾ,
ಕೇರಳ
ನೆರೆ
ರಾಜ್ಯಗಳಾದ
ಕರ್ನಾಟಕ,
ತಮಿಳುನಾಡಿನ
ಗಡಿ
ಜಿಲ್ಲೆಗಳಲ್ಲಿ
ಲಸಿಕಾ
ಪ್ರಕ್ರಿಯೆಯನ್ನು
ಚುರುಕುಗೊಳಿಸಿ
ಎಂದು
ತಿಳಿಸಿದ್ದಾರೆ.
ಎರಡು
ನೆರೆ
ರಾಜ್ಯಗಳಲ್ಲಿ
ಕೊರೊನಾ
ಸೋಂಕಿನ
ಅಂತರರಾಜ್ಯ
ಹರಡುವಿಕೆ
ತಡೆಗಟ್ಟಲು
ಸಾಕಷ್ಟು
ಕ್ರಮಗಳನ್ನು
ತೆಗೆದುಕೊಳ್ಳಬೇಕಾದ
ಅಗತ್ಯತೆ
ಕುರಿತು
ಮಾಂಡವಿಯಾ
ಒತ್ತಿ
ಹೇಳಿದ್ದಾರೆ.