ಚಿತ್ರಗಳಲ್ಲಿ: ಮೋದಿ ಭೇಟಿಗೆ ಓಕೆ ಎಂದ 'ಪ್ರಧಾನಿ'
ಬೆಂಗಳೂರು, ನ.14: ಭಾರತಕ್ಕೆ ಭೇಟಿ ನೀಡಿರುವ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರು, ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ 2014ರ ಚುನಾವಣಾ ಅಭ್ಯರ್ಥಿಗಳನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದು ಗುರುವಾರ ಹೇಳಿದ್ದಾರೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಡೇವಿಡ್ ಅವರು, 'ಎಲ್ಲಾ ಚುನಾಯಿತ ನಾಯಕರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ. ಮೋದಿ ಅವರನ್ನು ಭೇಟಿ ಮಾಡುವ ಸಮಯ ನಿಶ್ಚಯ ಆಗಿಲ್ಲ. ಆದರೆ ಅವರ ಭೇಟಿಗೆ ಮುಕ್ತ ಅವಕಾಶವಿದೆ' ಎಂದು ತಿಳಿಸಿದ್ದಾರೆ.
ನಮ್ಮ ವಿದೇಶಾಂಗ ಖಾತೆ ಸಚಿವರು ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಭಾರತದ ಪ್ರಧಾನಿ ಅಭ್ಯರ್ಥಿಗಳಲ್ಲಿ ಯಾರು ಮುಖ್ಯ ಎಂಬುದರ ಬಗ್ಗೆ ನಗಗಿಂತ ಇಲ್ಲಿನ ಜನತೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಉಭಯ ದೇಶಗಳ ವಾಣಿಜ್ಯ, ವ್ಯವಹಾರ, ಸಾಂಸ್ಕೃತಿಕ ವಿನಿಮಯಕ್ಕೆ ಬೇಕಾದ ಸೂಕ್ತ ವೇದಿಕೆ ಒದಗಿಸಲು ನಾವು ಸಿದ್ಧ ಎಂದು ಡೇವಿಡ್ ಹೇಳಿದ್ದಾರೆ. ಇಂದು ಸಂಜೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಡೇವಿಡ್ ಭೇಟಿಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರಗಳಲ್ಲಿ ಸುದ್ದಿಗಳನ್ನು ಮುಂದೆ ನೋಡಿ..
ಡೇವಿಡ್ ಕ್ಯಾಮರೂನ್ ಹೇಳಿಕೆ
ಭಾರತ ಹಾಗೂ ಇಂಗ್ಲೆಂಡ್ ಅತ್ಯಂತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಎರಡು ದೇಶಗಳು ಭಯೋತ್ಪಾದನೆ ಹತ್ತಿಕ್ಕಲು ಶತಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಜಂಟಿ ಕಾರ್ಯಾಚರಣೆ ಕೈಗೊಂಡು ಜಾಗತಿಕ ಮಟ್ಟದಲ್ಲಿ ಶಾಂತಿ, ನೆಮ್ಮದಿ ಸ್ಥಾಪಿಸಬಹುದಾಗಿದೆ ಎಂದಿದ್ದಾರೆ.
ಮೋದಿ ಭೇಟಿಗೆ ಓಕೆ ಎಂದ 'ಪ್ರಧಾನಿ'
ನವದೆಹಲಿಯ ಲೋಧಿ ಗಾರ್ಡನ್ ನಲ್ಲಿ ಡೇವಿಡ್ ಕ್ಯಾಮರೂನ್ ವಿಹಾರ
ನವದೆಹಲಿಯಲ್ಲಿ ಡೇವಿಡ್
ನವದೆಹಲಿಯ ಲೋಧಿ ಗಾರ್ಡನ್ ನಲ್ಲಿ ಡೇವಿಡ್ ಕ್ಯಾಮರೂನ್ ವಿಹಾರ
ಮೋದಿ ಭೇಟಿಗೆ ಓಕೆ ಎಂದ 'ಪ್ರಧಾನಿ'
ಪ್ರಬೊಧನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಡೇವಿಡ್ ಕ್ಯಾಮರೂನ್ ಜತೆ ಸಿಎನ್ ಎನ್ ಐಬಿಎನ್ ಸಂಪಾದಕ ರಾಜ್ ದೀಪ್ ಸರ್ದೇಸಾಯಿ PTI Photo by Subhav Shukla
ಮನಮೋಹನ್ ಸಿಂಗ್ ಜತೆ
ಪ್ರಧಾನಿ ಮನಮೋಹನ್ ಸಿಂಗ್ ಜತೆ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಚರ್ಚೆ
ವ್ಯಾಟಿಕನ್ ಸಿಟಿಯಲ್ಲಿ
ಇಟಾಲಿಯನ್ ಕಾರ್ಡಿನಲ್ ಡೊಮೆನಿಕೋ ಬರ್ಟೋಲುಸಿ ಅವರ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಸೆಂಟ್ ಪೀಟರ್ಸ್ ಬೆಸಲಿಕಾದಲ್ಲಿ ಪೋಪ್ ಫ್ರಾನಿಸ್
ಪಾಟ್ನದಲ್ಲಿ
ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಜಗತ್ ಗುರು ಶಂಕರಚಾರ್ಯ ಸ್ವಾಮಿ ಸ್ವರೂಪನಂದ ಜೀ ಮಹರಾಜ್ ವಿರಾಟ್ ಅವರ ಅಶೀರ್ವಾದ
ಸಚಿನ್ ಫೀವರ್ 200
ಸಚಿನ್ ಅವರ ಅಂತಿಮ ಟೆಸ್ಟ್ ಪಂದ್ಯದ ಜ್ವರ ಎಲ್ಲೆಡೆ ವ್ಯಾಪಿಸಿದ್ದು, ಮುಂಬೈನಲ್ಲಿ ಸಚಿನ್ ಹೆಸರಿನಲ್ಲಿ ದೀಪ ಬೆಳಗಿಸಲಾಗಿದೆ
ಕುಂಬ್ಳೆಗೆ ಸನ್ಮಾನ
ಮುಂಬೈ: ಮನ್ಸೂರ್ ಅಲಿ ಖಾನ್ ಸ್ಮರಣಾರ್ಥ ಸಮಾರಂಭದಲ್ಲಿ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆಗೆ ಸ್ಮರಣಿಕೆ ನೀಡಿದ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್
ಚಾಚಾ ಹುಟ್ಟುಹಬ್ಬ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಂಡಿತ್ ಜವಹಾರ್ ಲಾಲ್ ನೆಹರೂ ಅವರ 124ನೇ ಹುಟ್ಟುಹಬ್ಬದ ಅಂಗವಾಗಿ ಶಾಂತಿವನದಲ್ಲಿ ಪ್ರಾರ್ಥನೆ ಸಲ್ಲಿಸಿದರು.