ಚಿತ್ರಸುದ್ದಿ: ಕೆನಡಾ ಅತಿಥಿಗೆ ಬೆಂಗಳೂರಿನ ಮೊರ
ಬೆಂಗಳೂರು, ಫೆ.27: ಕೆನಡಾ ದೇಶದಿಂದ ಬಂದಿರುವ ಗವರ್ನರ್ ಜನರಲ್ ಡೇವಿಡ್ ಜಾನ್ ಸ್ಟನ್ ಹಾಗೂ ಅವರ ಪತ್ನಿ ಶರೋನ್ ಅವರಿಗೆ ಬೆಂಗಳೂರಿನ ಮೊರ ಗಿಫ್ಟ್ ಆಗಿ ನೀಡಲಾಗಿದೆ. ನಗರದ ಹೊರ ವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದ ಈ ಇಬ್ಬರು ಅತಿಥಿಗಳು ಮೊರ ಕೈಲಿಡು ಸಂಭಮಿಸಿದರು.
ಇಂದಿನ ಚಿತ್ರ ಸುದ್ದಿಯಲ್ಲಿ ಯುರೋಪಿನ ಗಲಾಟೆ ಗೊಂದಲದ ನಡುವೆ ಉಕ್ರೇನಿನ ಪ್ರಧಾನಿ ಯೂಲಿಯಾ ಅವರಿಂದ ವಿದೇಶಾಂಗ ನೀತಿ ಮುಖ್ಯಸ್ಥೆಗೆ ಸಿಕ್ಕ ಆತ್ಮೀಯ ಅಪ್ಪುಗೆ, ಯುಎಸ್ ಗಾರ್ಡ್ ಗಳು ಕೊರೆಯುವ ಚಳಿಯಲ್ಲಿ ನಿಂತಿರುವ ದೃಶ್ಯ, ಬಿಜೆಪಿ ನಾಯಕರ ದಂಡು, ಪೆಟಾಗಾಗಿ ಜೈಲಿನೊಳಗೆ ಸ್ಪಿನ್ನರ್ ಓಜಾ, ಪಂಡರಾಪುರದಲ್ಲಿ ಸುಶೀಲ್ ಕುಮಾರ್ ಶಿಂಧೆ, ಹೈದರಾಬಾದಿನಲ್ಲಿ ವಿಜಯ ಯಾತ್ರೆ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಪ್ರದರ್ಶನ, ಮೋದಿತ್ವ, ಗುವಾಹಟಿಯಲ್ಲಿ ರಾಹುಲ್ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ...
ಕೆನಡಾ ಅತಿಥಿಗೆ ಬೆಂಗಳೂರಿನ ಮೊರ
ಕೆನಡಾ ದೇಶದಿಂದ ಬಂದಿರುವ ಗವರ್ನರ್ ಜನರಲ್ ಡೇವಿಡ್ ಜಾನ್ ಸ್ಟನ್ ಹಾಗೂ ಅವರ ಪತ್ನಿ ಶರೋನ್ ಅವರಿಗೆ ಬೆಂಗಳೂರಿನ ಮೊರ ಗಿಫ್ಟ್ ಆಗಿ ನೀಡಲಾಗಿದೆ. ನಗರದ ಹೊರ ವಲಯದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಕೃಷಿವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದ ಈ ಇಬ್ಬರು ಅತಿಥಿಗಳು ಮೊರ ಹಿಡಿದು ಸಂಭಮಿಸಿದರು.
ಗುವಾಹಟಿಯಲ್ಲಿ ರಾಹುಲ್ ದೇಗುಲ ಭೇಟಿ
ಗುವಾಹಟಿಯಲ್ಲಿ ಮಹಾ ಸಮಾವೇಶಕ್ಕೆ ಬಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದೇಗುಲ ಭೇಟಿ ನೀಡಿದ್ದರು.
ಇಂದೋರ್ ನಲ್ಲಿ ಬಿಜೆಪಿ ನಾಯಕರ ದಂಡು
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಹಾಗೂ ಸ್ವಾಮಿ ರಾಮದೇವ್ ಅವರು ನರ್ಮದಾ ಕ್ಷಿಪ್ರ ಜೋಡಣೆ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ
ಪ್ರಾಣಿಗಳನ್ನು ರಕ್ಷಿಸಿ ಎನ್ನುತ್ತಿರುವ ಓಜಾ
ಹೈದರಾಬಾದ್: ಕ್ರಿಕೆಟರ್ ಪ್ರಗ್ನಾನ್ ಓಜಾ ಅವರು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್(ಪೆಟಾ) ಸಂಘಟನೆ ಪರ ಪ್ರಚಾರಕ್ಕಾಗಿ ಕಾಣಿಸಿಕೊಂಡಿದ್ದು ಹೀಗೆ
ಪಂಡರಾಪುರದಲ್ಲಿ ಸುಶೀಲ್ ಕುಮಾರ್ ಶಿಂಧೆ
ಪಂಡರಾಪುರದಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ವಿಠಲ ರುಕ್ಮಿಣಿ ದರ್ಶನ ಪಡೆದ ಸಂದರ್ಭ
ಬೆಂಗಳೂರಿನಲ್ಲಿ ಚಿತ್ರಕಲಾ ವಸ್ತು ಪ್ರದರ್ಶನ
ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಶಿಲ್ಪಕಲಾ ವಸ್ತು ಪ್ರದರ್ಶನ ನಡೆದಿದೆ. PTI Photo by Shailendra Bhojak
ಹೈದರಾಬಾದಿನಲ್ಲಿ ವಿಜಯ ಯಾತ್ರೆ
ಹೈದರಾಬಾದಿನಲ್ಲಿ ವಿದ್ಯಾರ್ಥಿ ಸಂಘಟನೆಗಳು ತೆಲಂಗಾಣ ವಿಜಯ ಯಾತ್ರೆ ನಡೆಸಿದರು.
ಕೀವ್ ನಲ್ಲಿ ಉಕ್ರೇನ್ ಪ್ರಧಾನಿ ಅತ್ಮೀಯ ಅಪ್ಪ್ಪುಗೆ
ಕೀವ್ ನಲ್ಲಿ ಉಕ್ರೇನ್ ಪ್ರಧಾನಿ ಯೂಲಿಯಾ ಟಿಮೊಶೆಂಕೋ ಅವರು ಯುರೋಪಿನ ವಿದೇಶಾಂಗ ನೀತಿ ಮುಖ್ಯಸ್ಥೆ ಕ್ಯಾಥರೀನ್ ಆಸ್ಟನ್ ಅವರಿಗೆ ನೀಡಿದ ಅತ್ಮೀಯ ಅಪ್ಪ್ಪುಗೆ. ಉಕ್ರೇನ್ ನಲ್ಲಿ ಆರ್ಥಿಕ ಸಂಕಷ್ಟದ ಜತೆಗೆ ಗಲಾಟೆ, ಗಲಭೆ ಹೆಚ್ಚಾಗಿದ್ದು, ಶಾಂತಿ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ.
ಯುಎಸ್ ಮರೇನ್ ಕಾರ್ಪ್ಸ್ ಗಾರ್ಡ್ ಗಳು
ಯುಎಸ್ ಮರೇನ್ ಕಾರ್ಪ್ಸ್ ಗಾರ್ಡ್ ಗಳು ಹಿಮಪಾತದ ನಡುವೆ ಅರ್ಲಿಂಗ್ಟನ್ ನಲ್ಲಿ ಯೋಧರ ಸಮಾಧಿ ಸ್ಥಳದ ಬಳಿ ನಿಂತಿರುವ ದೃಶ್ಯ AP/PTI
ಮೋದಿತ್ವ ಪುಸ್ತಕ ಬಿಡುಗಡೆ ಸಮಾರಂಭ
ನವದೆಹಲಿ: ಮೋದಿತ್ವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ಪತ್ರಕರ್ತ ಎಂಜೆ ಅಕ್ಬರ್, ಸುಬ್ರಮಣ್ಯ ಸ್ವಾಮಿ, ಕಿರಣ್ ಬೇಡಿ. PTI Photo by Vijay Verma