ಚಿತ್ರಗಳಲ್ಲಿ : ಪ್ರವಾಸಿ ದಿವಸ, ಚಳಿಗಾಲ, ಮೋದಿ ಇನ್ ಬೆಂಗ್ಳೂರ್
ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಬೆಂಗಳೂರು, ಜನವರಿ 08: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ 14ನೇ ಭಾರತೀಯ ಪ್ರವಾಸಿ ದಿವಸ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಮೂರು ದಿನಗಳ ಕಾಲ ನಡೆಯುವ ಪ್ರವಾಸಿ ದಿವಸ್ ನ ಮೊದಲ ದಿನದ ಚಿತ್ರಗಳು ಇಲ್ಲಿವೆ...
ಜತೆಗೆ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯರದ್ದೇ ಪಾರುಪತ್ಯ, ಶಿಮ್ಲಾದ ಚಳಿಗಾಲದ ಸುಂದರ ಪೋಸ್ಟ್ ಕಾರ್ಡ್ ಚಿತ್ರ,ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆ, ಮುಂಬೈನಲ್ಲಿ ಬಿಗ್ ಬಾಸ್ ಶೋ ಚಿತ್ರ, ಗಯಾದಲ್ಲಿ ಬೌದ್ಧ ಭಿಕ್ಕುಗಳ ಓಟ, ಜಮ್ಮು ಮತ್ತು ಕಾಶ್ಮೀರದಲ್ಲಿ ದಿವಂಗತ ಮುಫ್ತಿ ಸಂಸ್ಮರಣೆ ಇವೆ ಸೇರಿದಂತೆ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ ನೋಡಿ...
ಪ್ರವಾಸಿ ದಿವಸದಲ್ಲಿ ಸೆಲ್ಫಿ ಹುಚ್ಚು
ಪ್ರವಾಸಿ ದಿವಸದಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗಿದ್ದು, ಮೈಸೂರಿನ ಅಂಬಾರಿ ಪ್ರತಿರೂಪದ ಮುಂದೆ ಯುವತಿಯರಿಬ್ಬರು ಚಿತ್ರ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ನಡೆಯಲಿದೆ.
ರೊನಾಲ್ಡೊ ಜರ್ಸಿ ನೀಡಿದ ಪೋರ್ಚುಗಲ್ ಪ್ರಧಾನಿ
ಪ್ರಧಾನಿ ಮೋದಿ ಅವರಿಗೆ ಫುಟ್ಬಾಲ್ ಸ್ಟಾರ್ ರೊನಾಲ್ಡೊ ಜರ್ಸಿ ನೀಡಿದ ಪೋರ್ಚುಗಲ್ ಪ್ರಧಾನಿ ಆಂಥೋನಿಯೋ ಕೋಸ್ಟಾ
ಚೆನ್ನೈ ಓಪನ್ ಟೂರ್ನಿ
ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ರೋಹನ್ ಬೋಪಣ್ಣ ಹಾಗೂ ಜೀವನ್ ಅವರು ಸಂಭ್ರಮಾಚರಣೆಯಲ್ಲಿ
ಶಿಮ್ಲಾದಲ್ಲಿ ಪ್ರವಾಸಿಗರ ಸಂಭ್ರಮಾಚರಣೆ
ಶಿಮ್ಲಾದ ಹಿಮಪಾತವನ್ನು ಆನಂದಿಸುತ್ತಾ ಪ್ರವಾಸಿಗರ ಸಂಭ್ರಮಾಚರಣೆ ಮಾಡಿದ್ದು ಹೀಗಿತ್ತು.
ಬೆಂಗಳೂರಿನಲ್ಲಿ ಪ್ರತಿಭಟನೆ
Members of Citizens for Bengaluru staged a freeze mob Protesting against the l incidence of alleding of mass molestation of girls at MG Road, at the scene of crime. The protest depicted scenes of aggression and defence among the genders, showcasing the reality of the the daily lives of women everywhere in Bengaluru on Saturday.PTI Photo By Mohan Kumar B
ಬಿಗ್ ಬಾಸ್ ಶೋ
participating Bigg Boss session 10 for prootion their film Ok Jaanu in Mumbai
ದಿವಂಗತ ಮುಫ್ತಿ ಸಂಸ್ಮರಣೆ
ಜಮ್ಮು ಮತ್ತು ಕಾಶ್ಮೀರದಲ್ಲಿ ದಿವಂಗತ ಮುಫ್ತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ತಂದೆಯನ್ನು ನೆನೆದ ಸಿಎಂ ಮೆಹಬೂಬಾ ಮುಫ್ತಿ ಹಾಗೂ ಅವರ ಸೋದರು.
ಗಯಾದಲ್ಲಿನ ಚಿತ್ರ
Buddhist monks running with tea pots to serve tea to devotees at Kalchakara ground for initiations of 34th kalchakra prayers in Bodh Gaya
ಕರ್ನಾಟಕ ವೈಭವ
ಪ್ರವಾಸಿ ದಿವಸ್ ನಲ್ಲಿ ಭರತನಾಟ್ಯ, ಯಕ್ಷಗಾನ, ಡೊಳ್ಳು ಕುಣಿತ ಸೇರಿ ಇತರ ಸಾಂಪ್ರದಾಯಿಕ ನೃತ್ಯ ಹಾಗೂ ಗಾಯನದ ಮೂಲಕ ಜನರನ್ನು ರಂಜಿಸಲಾಯಿತು.
ಸಾಧುವಿನಿಂದ ಆಶೀರ್ವಾದ
ಸಾಧುವಿನಿಂದ ವಿದೇಶಿ ಮಹಿಳೆಗೆ ಆಶೀರ್ವಾದ, ಗಂಗಾಸಾಗರ್ ಮೇಳ, ಕೋಲ್ಕತ್ತಾ
ಮುಂಬೈನ ಪಿಂಕ್ ಆಟೋ
ಮುಂಬೈನಲ್ಲಿ ಮಹಿಳೆಯರ ಆಟೋರಿಕ್ಷಾಗೆ ಚಾಲನೆ ನೀಡಲಾಗಿದ್ದು,ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನೆರವು ನೀಡಿದ್ದಾರೆ