ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸೂರು ಏರ್‌ಪೋರ್ಟ್‌ ಆರಂಭಕ್ಕೆ ಒತ್ತಾಯಿಸಿ ಪಳನಿಸ್ವಾಮಿ ಪತ್ರ

By Nayana
|
Google Oneindia Kannada News

ಬೆಂಗಳೂರು, ಜೂನ್‌ 25: ಥಲ್ಲಿ ಏರ್‌ಪೋರ್ಟ್‌ ಕಾರ್ಯಾರಂಭಗೊಳಿಸುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.

ಥಲ್ಲಿ ಏರ್‌ಪೋರ್ಟ್‌ ಹೊಸೂರು ಸಮೀಪದಲ್ಲಿದೆ, ತಮಿಳುನಾಡು ಸರ್ಕಾರ ಮತ್ತೊಂದು ಪ್ರಯತಣಕ್ಕೆ ಕೈ ಹಾಕಿದ್ದು, ಈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಆರಂಭಿಸುವಂತೆ ಪತ್ರ ಸುರೇಶ್‌ ಪ್ರಭು ಅವರಿಗೆ ಬರೆದಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್ಬೆಂಗಳೂರು ಏರ್‌ಪೋರ್ಟ್‌: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರಾಪೇಕ್ಷಣಾ ಪತ್ರವನ್ನು ನಿರೀಕ್ಷಿಸಿದ್ದು, ಹೊಸೂರು ಏರ್‌ಪೋರ್ಟ್‌ನ ತುರ್ತು ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿ ಎಂದು ಪಳನಿಸ್ವಾಮಿ ಒತ್ತಾಯಿಸಿದ್ದಾರೆ.

TN urges center to open Thalli airport near Bengaluru

ಈ ವಿಮಾನ ನಿಲ್ದಾಣವು ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ. ಈ ವಿಮಾನ ನಿಲ್ದಾಣ ಆರಂಭವಾದರೆ ಎಲೆಕ್ಟ್ರಾನಿಕ್‌ಸಿಟಿ, ಜಿಗಣಿ ಪ್ರದೇಶಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಎಲೆಕ್ಟ್ರಾನಿಕ್‌ ಸಿಟಿಗೆ 28ಕಿ.ಮೀ ದೂರದಲ್ಲಿ ಈ ವಿಮಾನ ನಿಲ್ದಾಣವಿದೆ. ಕಡಿಮೆ ದರದ ವಿಮಾನಯಾನ ಯೋಜನೆ ಉಡಾನ್‌ ಅನ್ವಯ ಈ ನಿಲ್ದಾಣವನ್ನು ಬಳಸಿಕೊಳ್ಳಲು ತಮಿಳುನಾಡು ಬಯಸಿದೆ. ಈ ಸಂಬಂಧ ಪಳನಿಸ್ವಾಮಿ ಸುರೇಶ್‌ ಪ್ರಭುವಿಗೆ ಪತ್ರ ಬರೆದಿದ್ದು, ವಿಮಾನ ನಿಲ್ದಾಣ ಕಾರ್ಯಾಚರಂಭಕ್ಕೆ ಅನುಮತಿ ಕೇಳಿದ್ದಾರೆ.

English summary
Just 28 km away from electronic city of Bengaluru, Thalli airport near Hosur should be opened which will help to develop Bangalore outskirts, Tamil Nadu chief minister K. Palanisamy urged central civil aviation minister in a letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X