ಹೊಸೂರು ಏರ್ಪೋರ್ಟ್ ಆರಂಭಕ್ಕೆ ಒತ್ತಾಯಿಸಿ ಪಳನಿಸ್ವಾಮಿ ಪತ್ರ
ಬೆಂಗಳೂರು, ಜೂನ್ 25: ಥಲ್ಲಿ ಏರ್ಪೋರ್ಟ್ ಕಾರ್ಯಾರಂಭಗೊಳಿಸುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.
ಥಲ್ಲಿ ಏರ್ಪೋರ್ಟ್ ಹೊಸೂರು ಸಮೀಪದಲ್ಲಿದೆ, ತಮಿಳುನಾಡು ಸರ್ಕಾರ ಮತ್ತೊಂದು ಪ್ರಯತಣಕ್ಕೆ ಕೈ ಹಾಕಿದ್ದು, ಈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಆರಂಭಿಸುವಂತೆ ಪತ್ರ ಸುರೇಶ್ ಪ್ರಭು ಅವರಿಗೆ ಬರೆದಿದ್ದಾರೆ.
ಬೆಂಗಳೂರು ಏರ್ಪೋರ್ಟ್: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರಾಪೇಕ್ಷಣಾ ಪತ್ರವನ್ನು ನಿರೀಕ್ಷಿಸಿದ್ದು, ಹೊಸೂರು ಏರ್ಪೋರ್ಟ್ನ ತುರ್ತು ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿ ಎಂದು ಪಳನಿಸ್ವಾಮಿ ಒತ್ತಾಯಿಸಿದ್ದಾರೆ.
ಈ ವಿಮಾನ ನಿಲ್ದಾಣವು ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ. ಈ ವಿಮಾನ ನಿಲ್ದಾಣ ಆರಂಭವಾದರೆ ಎಲೆಕ್ಟ್ರಾನಿಕ್ಸಿಟಿ, ಜಿಗಣಿ ಪ್ರದೇಶಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ.
ಎಲೆಕ್ಟ್ರಾನಿಕ್ ಸಿಟಿಗೆ 28ಕಿ.ಮೀ ದೂರದಲ್ಲಿ ಈ ವಿಮಾನ ನಿಲ್ದಾಣವಿದೆ. ಕಡಿಮೆ ದರದ ವಿಮಾನಯಾನ ಯೋಜನೆ ಉಡಾನ್ ಅನ್ವಯ ಈ ನಿಲ್ದಾಣವನ್ನು ಬಳಸಿಕೊಳ್ಳಲು ತಮಿಳುನಾಡು ಬಯಸಿದೆ. ಈ ಸಂಬಂಧ ಪಳನಿಸ್ವಾಮಿ ಸುರೇಶ್ ಪ್ರಭುವಿಗೆ ಪತ್ರ ಬರೆದಿದ್ದು, ವಿಮಾನ ನಿಲ್ದಾಣ ಕಾರ್ಯಾಚರಂಭಕ್ಕೆ ಅನುಮತಿ ಕೇಳಿದ್ದಾರೆ.