ಆಗಸ್ಟ್ನಲ್ಲಿ 5 ದಿನ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ!
Recommended Video
ಬೆಂಗಳೂರು, ಜುಲೈ 06 : ತಿರುಪತಿ ದೇವಾಲಯಕ್ಕೆ 5 ದಿನಗಳ ಕಾಲ ಭಕ್ತರ ಭೇಟಿಯನ್ನು ನಿಷೇಧಿಸುವ ಸಾಧ್ಯತೆ ಇದೆ. ಆಗಸ್ಟ್ನಲ್ಲಿ ಐದು ದಿನಗಳ ಕಾಲ ದೇವಾಲಯದ ಸಿಬ್ಬಂದಿಯೂ ಒಳಗೆ ಪ್ರವೇಶಿಸುವಂತಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರತಿ 12 ವರ್ಷಕ್ಕೊಮ್ಮೆ ದೇವಾಲಯದಲ್ಲಿ 'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಎಂಬ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮ ನಡೆಯುವಾಗ ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ದೇವಾಲಯ ಪ್ರವೇಶಿಸುವುದಕ್ಕೆ ಅನುಮತಿ ನೀಡುವುದಿಲ್ಲ.
ಕರ್ನಾಟಕ ಪ್ರವಾಸಿಗರಿಗೆ ತಿರುಪತಿ ತ್ವರಿತ ದರ್ಶನ ಸಹಿತ ಹೊಸ ಪ್ಯಾಕೇಜ್
ಈ ವರ್ಷದ ಆಗಸ್ಟ್ 12 ರಿಂದ 16ರ ತನಕ ಈ ಕಾರ್ಯಕ್ರಮ ನಿಗದಿಯಾಗಿದೆ. ಆದ್ದರಿಂದ, 5 ದಿನಗಳ ಕಾಲ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಅವಕಾಶ ನಿಷೇಧಿಸುವ ಸಾಧ್ಯತೆ ಇದೆ. ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಈ ಕುರಿತು ಚಿಂತನೆ ನಡೆಸುತ್ತಿದೆ.
ಟಿಟಿಡಿ ಆಡಳಿತ ಮಂಡಳಿ ಈಗಾಗಲೇ ಆಗಸ್ಟ್ನಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಪ್ರವಾಸದ ದಿನಾಂಕವನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ. ಐದು ದಿನಗಳ ಅವಧಿಯಲ್ಲಿ ದೇವಾಲಯಕ್ಕೆ ಆಗಮಿಸುವವರಿದ್ದರೆ ವೇಳಾಪಟ್ಟಿಯನ್ನು ಬದಲಿಸಲು ಕೋರಿದೆ.
ತಿರುಪತಿ: ಉಚಿತ ದರ್ಶನ ಬುಕ್ಕಿಂಗ್ ಕೂಡ ಇನ್ನು ಆನ್ಲೈನ್ನಲ್ಲಿ
ಆಗಸ್ಟ್ 12 ರಿಂದ 16ರ ತನಕ ಭಕ್ತರ ಪ್ರವೇಶ ನಿಷೇಧಿಸುವ ಕುರಿತು ಇನ್ನೂ ಚಿಂತನೆ ನಡೆಯುತ್ತಿದೆ. ಟಿಟಿಡಿ ಕೆಲವೇ ದಿನಗಳಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ತಿರುಪತಿ ದೇವಾಲಯದ ಆಡಳಿತ ಮಂಡಳಿ ಐದು ದಿನಗಳ ಕಾಲ 30 ರಿಂದ 35 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿದೆ. 5 ದಿನಗಳ ಕಾಲ ನಿಗದಿಯಾಗಿದ್ದ ಎಲ್ಲಾ ಸೇವೆಗಳನ್ನು ಆಡಳಿತ ಮಂಡಳಿ ಈಗಾಗಲೇ ರದ್ದುಗೊಳಿಸಿದೆ.
'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಕಾರ್ಯಕ್ರಮದಲ್ಲಿ ಸುಮಾರು 44 ಋತ್ವಿಕರು, 100 ಪ್ರಧಾನ ಪಂಡಿತರು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 17ರಿಂದ 48 ದಿನಗಳ ಕಾಲ ದೇವಾಲಯದಲ್ಲಿ ಮಹಾಮಸ್ತಕಾಭಿಷೇಕ ಪ್ರತಿ ದಿನ ನಡೆಯಲಿದೆ.