ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಕ್ಮಾ ನಕ್ಸಲ್ ದಾಳಿಯ ಹಿಂದಿನ ನಿಜವಾದ ಕಾರಣ!

ಈ ಹತ್ಯೆಯ ಹಿಂದಿನ ಕಾರಣ ಮಾತ್ರ ನಾಚಿಕೆಗೇಡಿನದು. ಈ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯದ ವಿರುದ್ಧ ನಕ್ಸಲೀಯರು ಕಿಡಿಕಾರುತ್ತಿದ್ದರು. ಅವರಿಗೆ ಆ ಪ್ರದೇಶದಲ್ಲಿ ಅಭಿವೃದ್ಧಿ ಬೇಡವಾಗಿತ್ತು. ಇದಕ್ಕಾಗಿ ಈ ಹತ್ಯೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 25 : ನೂರರ ಆಸುಪಾಸಿನಲ್ಲಿದ್ದ ಕೇಂದ್ರ ಮೀಸಲು ದಳದ ಪೊಲೀಸರ ಮೇಲೆ ಮುನ್ನೂರಕ್ಕೂ ಹೆಚ್ಚಿದ್ದ ನಕ್ಸಲೀಯರು ಏಕಾಏಕಿ ಗುಂಡಿನ ದಾಳಿ ನಡೆಸಿ ಭೀಕರ ಹತ್ಯಾಕಾಂಡ ಎಸಗಲು ನಿಜವಾದ ಕಾರಣವಾದರೂ ಏನು?

ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಿದು. ರೋಷಾವೇಶದಿಂದ ಪೊಲೀಸರ ಮೇಲೆ ಮುಗಿಬಿದ್ದು ಯೋಧರನ್ನು ಕೊಂದು ಹಾಕಲು ಇದ್ದ ನಿಜವಾದ ಕಾರಣ ಅಭಿವೃದ್ಧಿ. ಅಭಿವೃದ್ದಿ ಇಲ್ಲದ್ದಕ್ಕಲ್ಲ. ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಕ್ಕೆ ಈ ಪ್ರತೀಕಾರ![ನಕ್ಸಲೀಯರ ಇತ್ತೀಚಿನ ಹತ್ಯಾಕಾಂಡ : ಟೈಮ್ ಲೈನ್]

The real reason behind Sukma Attack in Chattisgarh

ಛತ್ತೀಸ್ ಗಢದ ಸುಕ್ಮಾ ಪ್ರಾಂತ್ಯದಲ್ಲಿ ಸೋಮವಾರ ಮಧ್ಯಾಹ್ನ ನಡೆಸಿದ ಭೀಕರ ಗುಂಡಿನ ದಾಳಿಗೆ ಸಿಆರ್‌ಪಿಎಫ್‌ಗೆ ಸೇರಿದ 26 ಯೋಧರನ್ನು ನಕ್ಸಲೀಯರು ಹತ್ಯೆ ಮಾಡಿದ್ದು ಇಡೀ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.

ಈ ಹತ್ಯೆಯ ಹಿಂದಿನ ಕಾರಣ ಮಾತ್ರ ನಾಚಿಕೆಗೇಡಿನದು. ಈ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯದ ವಿರುದ್ಧ ನಕ್ಸಲೀಯರು ಕಿಡಿಕಾರುತ್ತಿದ್ದರು. ಅವರಿಗೆ ಆ ಪ್ರದೇಶದಲ್ಲಿ ಅಭಿವೃದ್ಧಿ ಬೇಡವಾಗಿತ್ತು. ಇದಕ್ಕಾಗಿ ಈ ಹತ್ಯೆ.

ಸುಕ್ಮಾದಲ್ಲಿ ಮೈಲುಗಟ್ಟಲೆ ರಸ್ತೆ ಹಾಕಲಾಗಿದೆ. ಒಟ್ಟು 44 ಜಿಲ್ಲೆಗಳಲ್ಲಿ 5,412 ಕಿ.ಮೀ.ನಷ್ಟು ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಹಸಿರು ನಿಶಾನೆ ನೀಡಿದೆ. ಛತ್ತೀಸಗಢ, ಬಿಹಾರ, ಜಾರ್ಖಂಡ್, ಆಂಧ್ರಪ್ರದೇಶ, ಓರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಈ ರಸ್ತೆ ನಿರ್ಮಿಸಲಾಗುತ್ತಿದೆ. [ನಕ್ಸಲರ ದಾಳಿ ಹಿಂದೆ ಜೆಎನ್ ಯು ವಿವಿಯ ಪಿತೂರಿ?]

ಈ ರಸ್ತೆ ನಿರ್ಮಾಣವಾದರೆ ಅಲ್ಲೆಲ್ಲ ಶಾಲೆ, ಕಾಲೇಜು, ಆಸ್ಪತ್ರೆ ಮತ್ತಿತರ ವ್ಯಾಪಾರ ಕೇಂದ್ರಗಳು ತಲೆ ಎತ್ತುತ್ತವೆ. ಈ ಎಲ್ಲ ಅಭಿವೃದ್ಧಿ ಕಾರ್ಯ ಕಾರ್ಯಗತವಾದರೆ, ಈ ಪ್ರದೇಶದಲ್ಲಿ ಕೇಂದ್ರ ಏನೂ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲವೆಂದು ದೂರುತ್ತಿದ್ದ ನಕ್ಸಲೀಯರ ಸಿದ್ಧಾಂತಕ್ಕೆ ಹೊಡೆತ ಬೀಳುತ್ತಲಿತ್ತು. [ಛತ್ತೀಸ್ ಘಡ ಎನ್ಕೌಂಟರ್: ಪೊಲೀಸರ ಸಾವಿನ ಸಂಖ್ಯೆ 26ಕ್ಕೆ ಏರಿಕೆ]

ಈ ಎಲ್ಲ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಹಕಾರ ನೀಡುತ್ತಿತ್ತು. ಇದು ನಕ್ಸಲೀಯರಿಗೆ ಬೇಡವಾಗಿತ್ತು. ಪೊಲೀಸರ ಮೇಲೆ ದಾಳಿ ನಡೆಸಿದ್ದರ ಮೂಲ ಉದ್ದೇಶ, ಇಂಥ ಕೆಲಸದಲ್ಲಿ ಪೊಲೀಸರು ತಲೆ ಹಾಕಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿ ಕೆ ವಿಜಯ್ ಕುಮಾರ್ ಹೇಳುತ್ತಾರೆ. [ಹುತಾತ್ಮರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ರಾಜನಾಥ್]

English summary
Development is what hurt the Naxalites. On Monday around 300 Naxalites unleashed terror on a CRPF team in which 26 jawans were martyred. Sukma in Chhattisgarh where the attack took place has been seeing a lot of development work of late and the Naxalites are unhappy about the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X