ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೆಸಿಆರ್ ಮಗಳ ಹೆಸರು
ಹೈದರಾಬಾದ್, ಡಿಸೆಂಬರ್ 1: ದೆಹಲಿ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ಶಾಸಕಿ ಕೆ. ಕವಿತಾ ಅವರ ಹೆಸರನ್ನು ಸೇರಿಸಿದೆ.
ಬಂಧಿತ ಗುರುಗ್ರಾಮ್ ಉದ್ಯಮಿ ಅಮಿತ್ ಅರೋರಾ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಇಡಿ ಕವಿತಾ ಅವರು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ 100 ಕೋಟಿ ಕಿಕ್ಬ್ಯಾಕ್ ಮತ್ತೊಬ್ಬ ಬಂಧಿತ ಉದ್ಯಮಿ ವಿಜಯ್ ನಾಯರ್ ಮೂಲಕ ಪಾವತಿಸಿದ ಸೌತ್ ಗ್ರೂಪ್ನ ಪ್ರಮುಖ ಸದಸ್ಯೆ ಎಂದು ಹೇಳಿಕೊಂಡಿದೆ.
ದೆಹಲಿ ಮದ್ಯ ಪ್ರಕರಣ; ಸಿಬಿಐ ಕಚೇರಿಗೆ ಹಾಜರಾಗಲಿರುವ ಮನೀಶ್ ಸಿಸೋಡಿಯಾ
ಇದುವರೆಗಿನ ತನಿಖೆಯ ಪ್ರಕಾರ, ಎಎಪಿ ನಾಯಕರ ಪರವಾಗಿ ವಿಜಯ್ ನಾಯರ್, ಸೌತ್ ಗ್ರೂಪ್ ಎಂದು ಕರೆಯಲ್ಪಡುವ ಒಂದು ಗುಂಪಿನಿಂದ 100 ಕೋಟಿ ರೂಪಾಯಿಗಳಷ್ಟು ಕಿಕ್ಬ್ಯಾಕ್ ಪಡೆದಿದ್ದಾರೆ ಎನ್ನಲಾಗಿದೆ. (ಎಸ್ ಶರತ್ ರೆಡ್ಡಿ, ಶ್ರೀಮತಿ ಕೆ ಕವಿತಾ, ಶ್ ಮಾಗುಂಟ ಶ್ರೀನಿವಾಸುಲು ರೆಡ್ಡಿ). ಈಗ ಬಂಧಿತ ಅಮಿತ್ ಅರೋರಾ ಅವರು ತಮ್ಮ ಹೇಳಿಕೆಗಳಲ್ಲಿ ಇದನ್ನೇ ಬಹಿರಂಗಪಡಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಈ ಆರೋಪದ ಕೆ. ಕವಿತಾ ಅಥವಾ ಅವರ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಮದ್ಯದ ಕಂಪನಿ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಅಮಿತ್ ಅರೋರಾ ಅವರನ್ನು ಮಂಗಳವಾರ ರಾತ್ರಿ ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯದಿಂದ ಕಸ್ಟಡಿಗೆ ಕೋರುವಾಗ ಸಂಸ್ಥೆ ಈ ಉಲ್ಲೇಖಗಳನ್ನು ನೀಡಿದೆ. ನಂತರ ಅವರನ್ನು ನ್ಯಾಯಾಲಯ ಡಿಸೆಂಬರ್ 7 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ.
ಇಡಿ ತನ್ನ ಸಲ್ಲಿಕೆಯಲ್ಲಿ, ಎಎಪಿ ನಾಯಕರು, ಅವರಲ್ಲಿ ಕೆಲವರು ಸರ್ಕಾರದ ಭಾಗವಾಗಿದ್ದಾರೆ. ದೆಹಲಿ ಅಬಕಾರಿ ನೀತಿಯನ್ನು ರಾಜ್ಯದ ಖಜಾನೆಯ ವೆಚ್ಚದಲ್ಲಿ ಅಕ್ರಮ ಹಣವನ್ನು ಉತ್ಪಾದಿಸುವ ಸಾಧನವಾಗಿ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಿಎ ಸೇರಿದಂತೆ ಕನಿಷ್ಠ 36 ಆರೋಪಿಗಳು ಆಪಾದಿತ ಹಗರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಿಕ್ಬ್ಯಾಕ್ ಪುರಾವೆಗಳನ್ನು ಮರೆಮಾಚಲು 170 ಫೋನ್ಗಳನ್ನು ಬಳಸಿ ನಾಶಗೊಳಿಸಿದ್ದಾರೆ ಎಂದು ಅದು ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಸಿಸೋಡಿಯಾ ಮತ್ತು ಎಎಪಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೇಂದ್ರ ಸರ್ಕಾರವು ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಂತಹ ಏಜೆನ್ಸಿಗಳನ್ನು ನಿಯಂತ್ರಿಸುವ ಬಿಜೆಪಿಯ ದ್ವೇಷದ ರಾಜಕಾರಣ ಎಂದು ಆರೋಪಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ಬಿಜೆಪಿ ಕೂಡ ಸಮರ ಸಾರಿದ್ದು, ಅವರು ರಾಷ್ಟ್ರ ರಾಜಕೀಯಕ್ಕೆ ಕಾಲಿಡಲು ತಯಾರಿ ನಡೆಸುತ್ತಿರುವಾಗಲೇ ಪಕ್ಷದ ಮೇಲೆ ಸಂಪೂರ್ಣ ದಾಳಿ ನಡೆಸಲಾಗಿದೆ.