ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆರೆಗೆ ಬಿದ್ದ ಆಟೋ: ತೆಲಂಗಾಣದಲ್ಲಿ 10 ಜನರ ದುರ್ಮರಣ
ನಿಜಾಮಾಬಾದ್, ಮಾರ್ಚ್ 25: ತೆಲಂಗಾಣದ ನಿಜಾಮಾಬಾದ್ ನಲ್ಲಿ 14 ಜರನ್ನು ಹೊತ್ತಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ 10 ಜನ ಮೃತರಾಗಿದ್ದಾರೆ.
ನಿನ್ನೆ(ಮಾ.25) ಸಂಭವಿಸಿದ ಈ ಘಟನೆಯಲ್ಲಿ ಮಡಿದವರಲ್ಲಿ 4 ಮಹಿಳೆಯರು ಮತ್ತು 6 ಮಕ್ಕಳು ಸೇರಿದ್ದಾರೆಂದು ತಿಳಿದುಬಂದಿದೆ. ಉಳಿದ ನಾಲ್ವರು ಕೆರೆಯಿಂದ ಆಚೆ ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಉ.ಪ್ರದೇಶ: ದೇವಿ ದರ್ಶನಕ್ಕೆಂದು ಹೊರಟ 10 ಜನ ದುರ್ಮರಣ
ಕೆರೆಯಿಂದ ಈಗಾಗಲೇ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಘಟನೆಯಲ್ಲಿ ಮೃತರಾದವರಿಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ.
Comments
English summary
Ten people lost their lives on Sunday as an autorickshaw, with 14 passengers aboard, lost control and fell into a well beside the road in Telangana's Nizamabad.
Story first published: Monday, March 26, 2018, 10:10 [IST]