ನಕ್ಸಲರ ಅಟ್ಟಹಾಸ, ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕನ ಹತ್ಯೆ
ವಿಶಾಖಪಟ್ಟಣಂ, ಸೆಪ್ಟೆಂಬರ್ 23: ಆಂಧ್ರಪ್ರದೇಶದ ಅರುಕು ಕ್ಷೇತ್ರದ ಹಾಲಿ ಶಾಸಕ, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖಂಡ ಕಿಡಾರಿ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಸಿವೇರಿ ಸೋಮ ಅವರನ್ನು ಇಂದು ಟುಟಾಂಗಿ ಎಂಬಲ್ಲಿ ನಕ್ಸಲರು ಕೊಂಡಿಕ್ಕಿ ಕೊಂದಿದ್ದಾರೆ.
'ನಗರ ನಕ್ಸಲ'ರಿಗೆ ಬಹಿರಂಗ ಬೆಂಬಲ ನೀಡಿದ ನಿಜ ನಕ್ಸಲರು!
ಅರುಕು ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇವರಿಬ್ಬರು ವಾಪಸ್ ಬರುವಾಗ ಟುಟಾಂಗಿ ಎಂಬಲ್ಲಿ ನಕ್ಸಲರು ದಾಳಿ ನಡೆಸಿದ್ದಾರೆ. ನಕ್ಸಲರ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
Visakhapatnam: #Visuals from the spot where TDP leaders Kidari Sarveswara Rao & Siveri Soma, present and former MLA from Araku respectively, were shot dead by Naxals today. #AndhraPradesh pic.twitter.com/RoFBBHQUK7
— ANI (@ANI) September 23, 2018
ಭವಿಷ್ಯದಲ್ಲಿ ನಕ್ಸಲಿಸಂ ಅಂತ್ಯಗೊಳ್ಳಲಿದೆ: ರಾಮ್ ಮಾಧವ್ ಹೇಳಿಕೆ
ಬಹುಸಂಖ್ಯೆಯಲ್ಲಿ ಬಂದಿದ್ದ ನಕ್ಸಲರು ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಶೂಟ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ 2014ರಲ್ಲಿ ಎಸ್ಟಿ ಮೀಸಲು ಕ್ಷೇತ್ರವಾದ ಅರುಕುವಿನಲ್ಲಿ ಗೆಲುವು ಸಾಧಿಸಿದ್ದ ಸರ್ವೇಶ್ವರ ರಾವ್ ಅವರು ನಂತರ 2016ರಲ್ಲಿ ಟಿಡಿಪಿ ಸೇರಿದ್ದರು.
ಛತ್ತೀಸಗಡ: ನಕ್ಸಲರಿಂದ ಶರಣಾಗತ ನಕ್ಸಲನ ಹತ್ಯೆ
ಮಾವೋವಾದಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಸಂಸ್ಥಾಪನಾ ದಿನ(ಸೆಪ್ಟೆಂಬರ್ 21)ದಂದೇ ಸರ್ವೇಶ್ವರ್ ರಾವ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಸರ್ವೇಶ್ವರ್ ರಾವ್ ಹಾಗೂ ಶಿವ ಅವರು ನಕ್ಸಲರ ಹಿಟ್ ಲಿಸ್ಟ್ ನಲ್ಲಿದ್ದರು.