ಸ್ವಚ್ಛ ಭಾರತಕ್ಕೆ ಮತ್ತೆ 9 ಜನರನ್ನು ಆಹ್ವಾನಿಸಿದ ಮೋದಿ
ವಾರಣಾಸಿ, ನ.8: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿ ಶನಿವಾರ 9 ಜನರನ್ನು ನಾಮಕರಣ ಮಾಡಿದ್ದಾರೆ. ರಾಜಕಾರಣಿಗಳು, ಕ್ರೀಡಾಪಟುಗಳು, ಗಾಯಕ, ಹಾಸ್ಯನಟರನ್ನು ಈ ಪಟ್ಟಿ ಒಳಗೊಂಡಿದೆ.
ಎರಡು ದಿನಗಳ ವಾರಣಾಸಿ ಭೇಟಿಯಲ್ಲಿರುವ ಮೋದಿ ಅಸ್ಸಿಘಾಟ್ ನಲ್ಲಿ ಸ್ವತಃ ಸ್ಚಚ್ಛತಾ ಅಭಿಯಾನ ಕೈಗೊಂಡರು. ಅಲ್ಲದೇ ಸ್ಥಳೀಯರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಗಂಗಾ ಆರತಿ ನೆರವೇರಿಸಿದ ಪ್ರಧಾನಿಯೊಂದಿಗೆ ಅನೇಕ ಮುಖಂಡರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.[ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಥ್ಯಾಂಕ್ಸ್]
ಉತ್ತರ ಪ್ರದೇಶಕ್ಕೆ ಸಂಬಂಧಿಸಿದ 9 ಜನರನ್ನು ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಆಹ್ವಾನಿಸುತ್ತಿದ್ದೇನೆ. ಇದರ ಪ್ರೇರಣೆಯಿಂದ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ದೊರೆಯಬಹುದು. ಹಿಂದೆಯೂ 9 ಜನರನ್ನು ಆಹ್ವಾನಿಸಿದ್ದೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮೋದಿ ಹೇಳಿದರು.[ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]
ಮೋದಿ
ಹೆಸರಿಸಿದ
ಪ್ರಮುಖರು
*
ಉತ್ತರ
ಪ್ರದೇಶ
ಮುಖ್ಯಮಂತ್ರಿ
ಅಖಿಲೇಶ್
ಯಾದವ್
*
ಕ್ರಿಕೆಟಿಗರಾದ
ಮಹಮದ್
ಕೈಫ್,
ಸುರೇಶ್
ರೈನಾ
*
ಗಾಯಕ
ಕೈಲಾಶ್
ಕೇರ್
*
ಸಂಸದ
ಮನೋಜ್
ತಿವಾರಿ
*
ಹಾಸ್ಯನಟ
ರಾಜೀವ್
ಶ್ರೀವಾತ್ಸವ್
*
ಪದ್ಮಶ್ರೀ
ದೇವಿ
ಪ್ರಸಾದ್
ದ್ವಿವೇದಿ
*
ಸಾಹಿತಿ
ಮನು
ಶರ್ಮಾ
*
ಸ್ವಾಮಿ
ರಾಮ್
ಭದ್ರಾಚಾರ್ಯ[ಪಿಟಿಐ
ಚಿತ್ರಗಳು]