ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛ ಭಾರತಕ್ಕೆ ಮತ್ತೆ 9 ಜನರನ್ನು ಆಹ್ವಾನಿಸಿದ ಮೋದಿ

|
Google Oneindia Kannada News

ವಾರಣಾಸಿ, ನ.8: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿ ಶನಿವಾರ 9 ಜನರನ್ನು ನಾಮಕರಣ ಮಾಡಿದ್ದಾರೆ. ರಾಜಕಾರಣಿಗಳು, ಕ್ರೀಡಾಪಟುಗಳು, ಗಾಯಕ, ಹಾಸ್ಯನಟರನ್ನು ಈ ಪಟ್ಟಿ ಒಳಗೊಂಡಿದೆ.

ಎರಡು ದಿನಗಳ ವಾರಣಾಸಿ ಭೇಟಿಯಲ್ಲಿರುವ ಮೋದಿ ಅಸ್ಸಿಘಾಟ್ ನಲ್ಲಿ ಸ್ವತಃ ಸ್ಚಚ್ಛತಾ ಅಭಿಯಾನ ಕೈಗೊಂಡರು. ಅಲ್ಲದೇ ಸ್ಥಳೀಯರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಗಂಗಾ ಆರತಿ ನೆರವೇರಿಸಿದ ಪ್ರಧಾನಿಯೊಂದಿಗೆ ಅನೇಕ ಮುಖಂಡರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.[ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಥ್ಯಾಂಕ್ಸ್]

ಉತ್ತರ ಪ್ರದೇಶಕ್ಕೆ ಸಂಬಂಧಿಸಿದ 9 ಜನರನ್ನು ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಆಹ್ವಾನಿಸುತ್ತಿದ್ದೇನೆ. ಇದರ ಪ್ರೇರಣೆಯಿಂದ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ದೊರೆಯಬಹುದು. ಹಿಂದೆಯೂ 9 ಜನರನ್ನು ಆಹ್ವಾನಿಸಿದ್ದೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮೋದಿ ಹೇಳಿದರು.[ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]

ಮೋದಿ ಹೆಸರಿಸಿದ ಪ್ರಮುಖರು
* ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
* ಕ್ರಿಕೆಟಿಗರಾದ ಮಹಮದ್ ಕೈಫ್, ಸುರೇಶ್ ರೈನಾ
* ಗಾಯಕ ಕೈಲಾಶ್ ಕೇರ್
* ಸಂಸದ ಮನೋಜ್ ತಿವಾರಿ
* ಹಾಸ್ಯನಟ ರಾಜೀವ್ ಶ್ರೀವಾತ್ಸವ್
* ಪದ್ಮಶ್ರೀ ದೇವಿ ಪ್ರಸಾದ್ ದ್ವಿವೇದಿ
* ಸಾಹಿತಿ ಮನು ಶರ್ಮಾ
* ಸ್ವಾಮಿ ರಾಮ್ ಭದ್ರಾಚಾರ್ಯ[ಪಿಟಿಐ ಚಿತ್ರಗಳು]

modi 2
English summary
Prime Minister Narendra Modi engages himself in cleanliness drive in Varanasi with local people. PM Modi nominates 9 persons including UP CM Akhilesh Yadav and cricketer Mohammad Kaif for the swachh bharat abhiyan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X